• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

IMA ಹಗರಣ: IPS ಸೇರಿದಂತೆ 5 ಅಧಿಕಾರಿಗಳ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿ

by
September 15, 2020
in ಕರ್ನಾಟಕ
0
IMA ಹಗರಣ: IPS ಸೇರಿದಂತೆ 5 ಅಧಿಕಾರಿಗಳ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿ
Share on WhatsAppShare on FacebookShare on Telegram

ಬಹುಕೋಟಿ IMA ಹಗರಣದ ಕುರಿತಂತೆ ಎರಡು ಐಪಿಎಸ್‌ ಅಧಿಕಾರಿಗಳು ಸೇರಿ ಒಟ್ಟು ಐವರು ಪೊಲೀಸ್‌ ಅಧಿಕಾರಿಗಳ ವಿಚಾರಣೆ ನಡೆಸಲು ಕರ್ನಾಟಕ ರಾಜ್ಯ ಸರ್ಕಾರ ಸಿಬಿಐಗೆ ಸೋಮವಾರ ಅನುಮತಿ ನೀಡಿದೆ.

ADVERTISEMENT

ಹಗರಣದ ಸಂಧರ್ಭದಲ್ಲಿ ಆರ್ಥಿಕ ಅಪರಾಧಗಳ ವಿಭಾಗ ಹಾಗೂ CID ವಿಭಾಗದ IGPಯಾಗಿದ್ದ ಪ್ರಸ್ತುತ ಬೆಂಗಳೂರಿನ IGP & ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಗಿರುವ ಹೇಮಂತ್‌ ನಿಂಬಾಲ್ಕರ್‌, ಬೆಂಗಳೂರು ಪೂರ್ವ DCP ಯಾಗಿದ್ದಂತಹ ಅಜಯ್‌ ಹಿಲೊರಿ, ಆರ್ಥಿಕ ಅಪರಾಧಗಳ ವಿಭಾಗದಲ್ಲಿ DSP ಆಗಿದ್ದಂತಹ ಇ ಬಿ ಶ್ರೀಧರ, ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್ ಸ್ಟೇಷನ್‌ ಇನ್ಸಪೆಕ್ಟರ್‌, ಹಾಗೂ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್ ಸ್ಟೇಷನ್‌ಎಸ್‌ಐ ಆಗಿದ್ದಂತಹ ಪಿ ಗೌರಿಶಂಕರ್‌ ಈ ಪಟ್ಟಿಯಲ್ಲಿ ಇದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದರಲ್ಲಿ ನಿಂಬಾಲ್ಕರ್ 1998 ರ ಬ್ಯಾಚ್‌ನ ಹಿರಿಯ ಅಧಿಕಾರಿಯಾಗಿದ್ದರೆ, ಹಿಲೊರಿ 2008 ರ ಬ್ಯಾಚ್‌ನವರು, ಇಬ್ಬರೂ ಕರ್ನಾಟಕದ ಐಪಿಎಸ್ ಕೇಡರ್.

ಸಿಬಿಐ ವರದಿ ಪ್ರಕಾರ ಶ್ರೀಧರ್‌ ನಡೆಸಿದ ವಿಚಾರಣೆಯ ಮೇಲ್ವಿಚಾರಣೆ ಮಾಡಿರುವ ನಿಂಬಾಲ್ಕರ್‌, KPID ಕಾಯ್ದೆಯಡಿಯಲ್ಲಿ ಐಎಮ್‌ಎ ಸಂಸ್ಥೆಯು ಹಣಕಾಸು ಸಂಸ್ಥೆಯಲ್ಲ ಎಂದು ವಿಚಾರಣೆಯನ್ನು ಮುಚ್ಚಲು ಪ್ರಯತ್ನಿಸಿದ್ದರು.

ಅಲ್ಲದೆ, ಐಎಮ್‌ಎ ಸಂಸ್ಥೆಯು ಕೆಪಿಐಡಿ ಕಾಯ್ದೆಯ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿಲ್ಲ ಎಂಬ ನಿಲುವನ್ನು ನಿಂಬಾಲ್ಕರ್‌ ಸಮರ್ಥಿಸಿಕೊಂಡಿದ್ದಾರೆಂದು ಸಿಬಿಐ ವರದಿ ಉಲ್ಲೇಖಿಸಿದೆ. ಐಎಮ್‌ಎ ಹಾಗೂ ಮಹಮದ್‌ ಮನ್ಸೂರ್‌ ಖಾನ್‌ ಅವರನ್ನು ರಕ್ಷಿಸಲು ನಿಂಬಾಲ್ಕರ್‌ ಅನಗತ್ಯ ಪ್ರಯತ್ನ ಪಟ್ಟಿದ್ದಾರೆಂದು ಸಿಬಿಐ ಆರೋಪಿಸಿದೆ. ಹಾಗೂ ಮನ್ಸೂರ್‌ ಖಾನ್‌ನಿಂದ ನಗದು ರೀತಿಯ ಸಹಾಯವನ್ನು ನಿಂಬಾಲ್ಕರ್‌ ಪಡೆದುಕೊಂಡಿದ್ದಾರೆ ಎಂದೂ ಸಿಬಿಐ ಹೇಳಿದೆ.

ಅಲ್ಲದೆ, ಹಿಲೋರಿ ಅವರು ಐಎಂಎ ನಿರ್ದೇಶಕ ಮತ್ತು ಕಾರ್ಯಾಚರಣಾ ವ್ಯವಸ್ಥಾಪಕ ನಿಜಾಮುದ್ದೀನ್ ಮೂಲಕ ವಿವಿಧ ಸಂದರ್ಭಗಳಲ್ಲಿ ಕಾನೂನುಬಾಹಿರವಾಗಿ ಮನ್ಸೂರ್‌ ಖಾನ್‌ನಿಂದ ಸಾಕಷ್ಟು ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ, ಮನೆಗೆ ಬೇಕಾದಂತಹ ಪೀಠೋಪಕರಣಗಳು, ಇಂಟೀರಿಯರ್‌ ವಸ್ತುಗಳನ್ನು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಸ್ವೀಕರಿಸಿದ್ದಾರೆ. ಹಿಲೋರಿ ತನ್ನ ಅಧೀನ ಅಧಿಕಾರಿಗಳು ಸಲ್ಲಿಸಿದ ಐಎಂಎ ಕುರಿತ ವರದಿಯನ್ನು ರವಾನಿಸುವಲ್ಲಿ “ಅನಗತ್ಯ ವಿಳಂಬ” ವನ್ನು ಉಂಟುಮಾಡಿದ್ದಾರೆ ಮತ್ತು ಸಂಬಂಧಿತ ಅವಧಿಯಲ್ಲಿ ಐಎಂಎ ವಿರುದ್ಧ ಯಾವುದೇ ಕ್ರಮವನ್ನು ತಡೆಯಲು “ಇತರ ಸಾರ್ವಜನಿಕ ಸೇವೆಯಲ್ಲಿರುವವರೊಂದಿಗೆ ಸಹಕರಿಸುತ್ತಿದ್ದಾರೆ” ಎಂದು ವರದಿ ತಿಳಿಸಿದೆ.

ಐಎಂಎ ಮತ್ತು ಅದರ ಘಟಕಗಳ ಬಗ್ಗೆ ವಿಚಾರಣೆ ನಡೆಸಲು ನೇಮಕಗೊಂಡಿರುವ ಡಿಎಸ್ಪಿ ಶ್ರೀಧರ ವಿರುದ್ಧದ ಆರೋಪಗಳಲ್ಲಿ “ಅಪರಿಪೂರ್ಣ ವಿಚಾರಣೆ” ನಡೆಸುವುದು ಮತ್ತು “ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಲು” ವಿಫಲವಾದ ಕಾರಣ, ಆ ಮೂಲಕ ವ್ಯವಹಾರ ಚಟುವಟಿಕೆಗಳನ್ನು ನಿರ್ಣಯಿಸದೆ ಪ್ರಕರಣವನ್ನು ಮುಂದುವರಿಸುವುದು ಸಿಬಿಐ ಕಂಡುಕೊಂಡಿದೆ.

ಏತನ್ಮಧ್ಯೆ, ರಮೇಶ್ ಮತ್ತು ಗೌರಿಶಂಕರ್ “ವಿವಿಧ ದೂರುಗಳ ಮೇಲೆ ಐಎಂಎ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಐಎಂಎ ಪರವಾಗಿ ಮೊಹಮ್ಮದ್ ಮನ್ಸೂರ್ ಖಾನ್ ಅವರಿಂದ ವಸೀಮ್ ಮೂಲಕ ವಿವಿಧ ಸಂದರ್ಭಗಳಲ್ಲಿ ಅಕ್ರಮ ಉಡುಗೊರೆಗಳನ್ನು ಕೋರಿದ್ದಾರೆ ಮತ್ತು ಸ್ವೀಕರಿಸಿದ್ದಾರೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಶ್ರೀಧರ ಅವರನ್ನು ಆರೋಪಿ ಸಂಖ್ಯೆ 31 (ಎ -31) ಎಂದು ಪಟ್ಟಿ ಮಾಡಿದ್ದರೆ, ರಮೇಶ್ ಮತ್ತು ಗೌರಿಶಂಕರ್ ಅವರನ್ನು ಕ್ರಮವಾಗಿ ಎ -34 ಮತ್ತು ಎ -35 ಎಂದು ಸೇರಿಸಲಾಗಿದೆ.

ಸಿಬಿಐ ವರದಿಯು ತನ್ನ ಆರೋಪಗಳಿಗೆ ಪೂರಕವಾಗಿ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿ ಪಟ್ಟಿಮಾಡಿದೆ.

ಸೆಪ್ಟೆಂಬರ್ 11 ರ ಪ್ರಾಸಿಕ್ಯೂಷನ್ ಆದೇಶದ ಪ್ರಕಾರ, ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಯ ಸೆಕ್ಷನ್ 197 ರ ಅಡಿಯಲ್ಲಿ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ (1963) ಸೆಕ್ಷನ್ 170 ರ ಅಡಿಯಲ್ಲಿ ಕರ್ನಾಟಕ ಸಂರಕ್ಷಣೆಯ ಇತರ ಶಿಕ್ಷಾರ್ಹ ಅಪರಾಧಗಳ ವಿರುದ್ಧ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ.

Tags: ಐಎಮ್‌ಎ ಹಗರಣಸಿಬಿಐಹೇಮಂತ್ ನಿಂಬಾಳ್ಕರ್
Previous Post

ಜಮ್ಮು ಕಾಶ್ಮೀರದಲ್ಲಿ 15 ಸಾವಿರ ಎಂಜಿನಿಯರ್ ಗಳ ಉದ್ಯೋಗ ಕಸಿದುಕೊಂಡ ಸರ್ಕಾರ

Next Post

ವಿಶ್ವಸಂಸ್ಥೆಯ ಆಯೋಗ ಸದಸ್ಯ ಸ್ಥಾನಕ್ಕೆ ಚೀನಾವನ್ನು ಹಿಂದಿಕ್ಕಿ ಆಯ್ಕೆಯಾದ ಭಾರತ

Related Posts

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಅವರನ್ನು ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ
Top Story

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಅವರನ್ನು ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

by ಪ್ರತಿಧ್ವನಿ
April 20, 2026
0

ಬೆಂಗಳೂರು : ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರ ಮಾಜಿ ಸಂಸದ ಡಾ. ಚೆಲ್ಲ ಕುಮಾರ್ ಡಿ.ಎಂ.ಕೆ. ನೇತೃತ್ವದ ಮೈತ್ರಿಕೂಟದಲ್ಲಿ ಕೃಷ್ಣಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ...

Read moreDetails
BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

April 20, 2026
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
Next Post
ವಿಶ್ವಸಂಸ್ಥೆಯ ಆಯೋಗ ಸದಸ್ಯ ಸ್ಥಾನಕ್ಕೆ ಚೀನಾವನ್ನು ಹಿಂದಿಕ್ಕಿ ಆಯ್ಕೆಯಾದ ಭಾರತ

ವಿಶ್ವಸಂಸ್ಥೆಯ ಆಯೋಗ ಸದಸ್ಯ ಸ್ಥಾನಕ್ಕೆ ಚೀನಾವನ್ನು ಹಿಂದಿಕ್ಕಿ ಆಯ್ಕೆಯಾದ ಭಾರತ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada