ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿ, ʼಸಿಂಗಂʼ ಎಂದೇ ಪ್ರಖ್ಯಾತರಾಗಿದ್ದ ಕುಪ್ಪುಸ್ವಾಮಿ ಅಣ್ಣಾಮಲೈ ಅವರು, ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೆ ಬಿಜೆಪಿ ಸೇರಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಕುರಿತಾಗಿ ಹೇಳಿಕೆ ನೀಡಿರುವ ಅಣ್ಣಾಮಲೈ, “ನಾನು ʼನೈಸರ್ಗಿಕʼವಾಗಿ ಬಿಜೆಪಿಯೊಂದಿಗೆ ಬೆರೆಯುತ್ತೇನೆ. ಬಿಜೆಪಿಯ ವಿಶಾಲವಾದ ದೂರದೃಷ್ಟಿತ್ವ ನನ್ನ ಆಲೋಚನೆಗಳೊಂದಿಗೆ ಬೆಸೆದಿವೆ. ಪಕ್ಷದೊಂದಿಗೆ ಬೆರೆತು ಬಿಜೆಪಿಯನ್ನು ತಮಿಳುನಾಡಿನಲ್ಲಿ ಇನ್ನಷ್ಟು ಬೆಳೆಸುವ ಅವಕಾಶ ನನಗೆ ಒದಗಿ ಬಂದಿದೆ,” ಎಂದು ಹೇಳಿದ್ದಾರೆ.
“ತಮಿಳುನಾಡುನಲ್ಲಿರುವ ದ್ರಾವಿಡ ರಾಜಕೀಯ ಪಕ್ಷಗಳು, ಆಯಾ ಪಕ್ಷಗಳ ನಿಜವಾದ ಸಿದ್ದಾಂತಗಳನ್ನು ಮರೆತಿವೆ. ಅಣ್ಣಾದೊರೈ, ಪೆರಿಯಾರ್ ಮತ್ತು ಎಂಜಿಆರ್ ಅವರ ಸಿದ್ದಾಂತಗಳು ಈಗಿನ ರಾಝಕೀಯ ನಾಯಕರ ಸಿದ್ದಾಂತಗಳಿಗಿಂತ ಭಿನ್ನವಾಗಿದ್ದವು,” ಎಂದು ಎಂಜಿಆರ್ ನಂತರದ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ರಾಜಕೀಯ ನಾಯಕರ ಮೇಲೆ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ತಮಿಳುನಾಡಿನ ಚೆನ್ನೈ ಮತ್ತು ಕೊಯಂಬತ್ತೂರು ಪ್ರದೇಶಗಳಲ್ಲಿ ಬಿಜೆಪಿ ಬಲಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆಂದು ಹೇಳಲಾಗಿದೆ.
ಅಣ್ಣಾಮಲೈ ಬಿಜೆಪಿ ಸೇರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಹಸಿಬಿಸಿ ಚರ್ಚೆ ನಡೆಯುತ್ತಿದ್ದು, ಬಿಜೆಪಿಯ ನಾಯಕರು ಅಣ್ಣಾಮಲೈ ಅವರಿಗೆ ಸ್ವಾಗತ ಕೋರಿದ್ದಾರೆ. ತಮಿಳು ಗುಣಲಕ್ಷಣ ಹೊಂದಿರುವ ಹಿಂದುತ್ವವೇ? ಎಂಬ ಪ್ರಶ್ನೆಯನ್ನೂ ಕೆಲವರು ಮಾಡಿದ್ದಾರೆ.
ಇನ್ನು ಕೆಲವರು, ಅಣ್ಣಾಮಲೈ ರಾಜಕೀಯಕ್ಕೆ ಸೇರದೇ ಪೊಲೀಸ್ ಇಲಾಖೆಯಿಂದಲೇ ಜನಸೇವೆ ಮಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೇರುವುದರಿಂದ ಇನ್ನು ಮುಂದೆ ಸುಳ್ಳು ಹೇಳುವುದನ್ನು ಕಲಿಯಬೇಕಿದೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ಕೇಡರ್ನ ನಿವೃತ್ತಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಇಂದು ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ.
ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರುತ್ತಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ.ಅವರಿಗೆ ಹೃದಯಪೂರ್ವಕ ಸ್ವಾಗತ. pic.twitter.com/iDqL3SEoaf— Dr Sudhakar K (@mla_sudhakar) August 25, 2020
K Annamalai: “I am a natural fit in BJP”.
He also importantly says “today's Dravidian Parties are not following ideals of Annadurai, Periyar and MGR”. So he will attack post-MGR leadership. No one hates MGR anyway.
Hindutva with Tamizh characteristics?https://t.co/GAHyptTJ34— Pradip Varma (@Pradip_K_Varma) August 25, 2020
ಅಣ್ಣಾಮಲೈ ಒಬ್ಬ ಪೋಲಿಸ್ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕಿತ್ತೇ ಹೊರತು ಒಬ್ಬ ರಾಜಕಾರಣಿಯಾಗಲ್ಲ.
ಈಗ ಇರುವ ರಾಜಕಾರಣಿಗಳನ್ನು ನೋಡಿದರೆ ಸಾಕು ಜನರು ಎಷ್ಟು ಸುಖ ಸಂತೋಷದಿಂದ ಇದ್ದಾರೆ ಅಂತ ಗೊತ್ತಾಗುತ್ತೆ.— ಕೃಷ್ಣಂ ವಂದೇ ಜಗದ್ಗುರುಂ (@PK_Chiguru) August 25, 2020
ಹಾಗಾದರೆ ಇವತ್ತಿನಿಂದ ಸುಳ್ಳು ಹೇಳುವುದನ್ನ ಕಲಿಯಲೇ ಬೇಕು
— Ravikumar H (@Ravikum70679423) August 25, 2020






