• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಜೀವ ಸೃಷ್ಟಿಯ ಹಾದಿಯಲ್ಲಿ ವೀರ್ಯಾಣು ಈಜಲ್ಲ; ಉರುಳುತ್ತೆ!

by
August 13, 2020
in ದೇಶ
0
ಜೀವ ಸೃಷ್ಟಿಯ ಹಾದಿಯಲ್ಲಿ ವೀರ್ಯಾಣು ಈಜಲ್ಲ; ಉರುಳುತ್ತೆ!
Share on WhatsAppShare on FacebookShare on Telegram

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಾನವ ಸಂತಾನಾಭಿವೃದ್ಧಿಯಲ್ಲಿ ಮಾತ್ರವಲ್ಲದೆ ಜಗದ ಜೀವಜಾಲದ ಮುಂದುವರಿಕೆಯ ಮೂಲಧಾತು ವೀರ್ಯಾಣು. ಜೀವ ಸೃಷ್ಟಿಯ ಮೂಲ ಈ ವೀರ್ಯಾಣು ಎಂದು ಮನುಷ್ಯ ಕಂಡುಕೊಂಡು ಬರೋಬ್ಬರಿ ಸರಿಸುಮಾರು 350 ವರ್ಷಗಳಾಗಿವೆ. ವಿಪರ್ಯಾಸವೆಂದರೆ; ಈ ಮೂರೂವರೆ ಶತಮಾನ ಕಾಲವೂ ನಮ್ಮದೇ ಹುಟ್ಟಿನ ಮೂಲವಾದ ಈ ವೀರ್ಯಾಣು ನಮ್ಮನ್ನೇ ಮೂರ್ಖರನ್ನಾಗಿಸುತ್ತಲೇ ಬಂದಿದೆ!

ADVERTISEMENT

ಹೌದು, ವೀರ್ಯಾಣುವಿನ ಕುರಿತ ಹೊಸ ಸಂಶೋಧನೆ ಈ ಶತಮಾನಗಳ ಮೂರ್ಖತನದ ಮೇಲೆ ಬೆಳಕು ಚೆಲ್ಲಿದೆ. ಆಂಟೊನಿ ವ್ಯಾನ್ ಲೀವ್ಯುನ್ಹಾಕ್ ಎಂಬಾತ 17ನೇ ಶತಮಾನದಲ್ಲಿ ರೂಪಿಸಿದ ಜಗತ್ತಿನ ಮೊದಲ ಮೈಕ್ರೋಸ್ಕೋಪ್, ಮನುಷ್ಯನಿಗೆ ಸೂಕ್ಷ್ಮಾಣು ಜೀವ ಲೋಕದ ಪರಿಚಯ ನೀಡಿತು. ಆತ ತನ್ನ ಅದೇ ಮೈಕ್ರೋಸ್ಕೋಪ್ ಬಳಸಿ 1677ರಲ್ಲಿ ವೀರ್ಯಾಣು ಸೇರಿದಂತೆ ಮಾನವ ಜೀವಕೋಶ ಮತ್ತಿತರ ಹಲವು ಸೂಕ್ಷ್ಮ ರಚನೆಗಳನ್ನು ಕಂಡುಹಿಡಿದ. ಆತ ಅಂದು ವಿರ್ಯಾಣುವನ್ನು ‘ಲಿವಿಂಗ್ ಅನಿಮಾಲ್ಕ್ಯೂಲ್’ ಎಂದು ಹೆಸರಿಸಿ ‘ಅದಕ್ಕೊಂದು ಬಾಲವಿದ್ದು, ಅದು ಈಜುವಾಗ ಹಾವಿನಂತೆ ಬಳಕುತ್ತದೆ, ನೀರಿನ ಈಲ್ ಮೀನಿನಂತೆ ವೀರ್ಯಾಣು ಸಾಗುತ್ತದೆ’ ಎಂದು ವಿವರಿಸಿದ್ದ. ಅವತ್ತಿನಿಂದ ಇವತ್ತಿನವರೆಗೆ ಮೈಕ್ರೋಸ್ಕೋಪ್ ನಲ್ಲಿ, ಜೀವ ವಿಜ್ಞಾನದಲ್ಲಿ, ವೈದ್ಯ ವಿಜ್ಞಾನದಲ್ಲಿ ಸಾವಿರಾರು ಬದಲಾವಣೆಗಳಾದರೂ, ಕ್ರಾಂತಿಕಾರಕ ಸಂಶೋಧನೆಗಳಾದರೂ, ವೀರ್ಯಾಣುವಿನ ಚಲನೆಯ ವಿಷಯದಲ್ಲಿ ಮಾತ್ರ ಆತ ಹೇಳಿದ್ದೇ ಸತ್ಯವಾಗಿತ್ತು ಮತ್ತು ಅದನ್ನೇ ಎಲ್ಲರೂ ನಂಬಿಕೊಂಡುಬಂದಿದ್ದರು!

ಎಷ್ಟರಮಟ್ಟಿಗೆ ಎಂದರೆ, ಸಂತಾನ ಸಮಸ್ಯೆಯ ವಿಷಯದಲ್ಲಿ ವೈದ್ಯಕೀಯವಾಗಿ ಬಹಳ ಮಖ್ಯವಾಗುವುದು ವೀರ್ಯಾಣು ಮತ್ತು ಅಂಡಾಣುಗಳ ಆರೋಗ್ಯ ಮತ್ತು ಸ್ಥಿರತೆ. ಆ ವಿಷಯ ನಿರ್ಣಯಿಸಲು ನೆರವಾಗುವುದು ವೀರ್ಯಾಣುವಿನ ಚಲನೆ ವೇಗ ಮತ್ತು ಚುರುಕುತನ. ಜಗತ್ತಿನ ಸಂತಾನ ಸಮಸ್ಯೆಯ ಪೈಕಿ ಶೇ.50ರಷ್ಟು ಸಮಸ್ಯೆಯ ಮೂಲ ಇರುವುದು ಪುರುಷರ ವೀರ್ಯಾಣುವಿಗೆ ಸಂಬಂಧಿಸಿದಂತೆಯೇ. ಹಾಗಾಗಿ ವೀರ್ಯಾಣುವಿನ ಸಂಖ್ಯೆ ಮತ್ತು ಅದರ ಸಕ್ರಿಯತೆಯ ಮೇಲೆ ಬಹುತೇಕ ದಂಪತಿಗಳ ಭವಿಷ್ಯದ ಪೀಳಿಗೆಯ ಭವಿಷ್ಯವೇ ನಿರ್ಧಾರವಾಗುತ್ತದೆ. ಆದರೆ, ವೀರ್ಯಾಣುವಿನ ಚುರುಕುತನ ನಿರ್ಧಾರಿಸುವ ಅಂಶಗಳಲ್ಲಿ ಅದರ ಚಲನೆ ಕ್ರಮ ಮತ್ತು ವೇಗ ಕೂಡ ಮುಖ್ಯವಾದುದು. ವಿಚಿತ್ರವೆಂದರೆ; ಈ ಮುನ್ನೂರೈವತ್ತು ವರ್ಷ ಕಾಲವೂ ನಮ್ಮ ವಿಜ್ಞಾನ, ವೈದ್ಯಕೀಯ ಜಗತ್ತು ವೀರ್ಯಾಣುಗಳು, ಆಂಟೊನಿ ವ್ಯಾನ್ ಹೇಳಿದಂತೆ ಈಜುತ್ತವೆ ಎಂದೇ ನಂಬಿಕೊಂಡು ಬಂದಿತ್ತು. ಹಾಗೆ ‘ಈಜುವ’ ಅದರ ಸ್ವಭಾವ, ವೇಗದ ಮೇಲೆ ಅದರ ಬಲಿಷ್ಟತೆ, ದೌರ್ಬಲ್ಯಗಳನ್ನು ಅಳೆಯಲಾಗುತ್ತಿತ್ತು!

ಆದರೆ, ಈಗ ಬ್ರಿಸ್ಟಾಲ್ ವಿಶ್ವವಿದ್ಯಾಲಯದ ಹರ್ಮೆಸ್ ಗಡೆಲಾ ಮತ್ತು ಅವರ ತಂಡ 3 ಡಿ ಮೈಕ್ರೋಸ್ಕೋಪ್ ಬಳಸಿ ನಡೆಸಿದ ವೀರ್ಯಾಣು ಚಲನೆಯ ಅಧ್ಯಯನ ಬೇರೆಯದೇ ಸತ್ಯವನ್ನು ತೆರೆದಿಟ್ಟಿದೆ. ಆ ಅಧ್ಯಯನದ ಪ್ರಕಾರ, ವೀರ್ಯಾಣು ಅಂಡಾಣುವಿನೊಂದಿಗೆ ಸಂಪರ್ಕ ಸಾಧಿಸಲು ಚಲಿಸುವ ರೀತಿ ಈಜುವುದಲ್ಲ. ಬದಲಾಗಿ ಅದು ಸ್ಪಿನ್(ಏಕ ಕಾಲಕ್ಕೆ ಉರುಟುರುಟಾಗಿ ಸುತ್ತುತ್ತಾ, ಮುಂದೆ ಚಲಿಸುವುದು) ಮಾಡುತ್ತಾ ಮುಂದೆ ಚಲಿಸುತ್ತದೆ. ಸೆಕೆಂಡಿಗೆ 20 ಕ್ಕಿಂತ ಹೆಚ್ಚು ಬಾರಿ ಸ್ಪಿನ್ ಮಾಡುವ ವೀರ್ಯಾಣುವಿನ ಬಾಲ, ಈ ಮೊದಲು ತಿಳಿದಂತೆ ಎರಡೂ ಕಡೆ ಬೀಸದೆ, ಕೇವಲ ಒಂದು ಕಡೆ ಮಾತ್ರ ಬೀಸುತ್ತದೆ. ಆದರೂ, ಇದ್ದಲ್ಲಿಯೇ ಸುತ್ತುಹಾಕುವ ಬದಲು ಅದು ಮುಂದೆ ಚಲಿಸಲು ಅದರ ಸ್ಪಿನಿಂಗ್ ಸಹಾಯಕವಾಗಿದೆ. ವೀರ್ಯಾಣುವಿನ ದೇಹದ ಸ್ಪಿನ್ನಿಂಗ್ ಕೇವಲ 3 ಡಿ ಮೈಕ್ರೋಸ್ಕೋಪ್ ನಲ್ಲಿ ಮಾತ್ರ ಕಾಣುತ್ತದೆ ವಿನಃ, ಈಗ ಸಾಮಾನ್ಯವಾಗಿ ಬಳಕೆಯಲ್ಲಿರುವ 2 ಡಿ ಮೈಕ್ರೋಸ್ಕೋಪಿನಲ್ಲಿ ಅದು ಕಾಣಿಸದು.

ಹಾಗಾಗಿ, ಈಗ ವೈದ್ಯಕೀಯ ಲಾಬುಗಳಲ್ಲಿ ವೀರ್ಯಾಣುವಿನ ಕ್ಷಮತೆ ಅಳೆಯಲು ಬಳಸುವ ಅದರ ಚಲನೆಯ ವೇಗ ಮತ್ತು ಚುರುಕುತನದ ಕುರಿತ ಮಾನದಂಡಗಳು ಕೂಡ ಬದಲಾಗಬೇಕಿದೆ. ಈಜುತ್ತಾ ಚಲಿಸುವ ರೀತಿಗೂ, ಸ್ಪಿನ್ ಮಾಡುತ್ತಾ ಚಲಿಸುವ ರೀತಿಗೂ ಮೂಲಭೂತವಾಗಿ ವ್ಯತ್ಯಾಸ ಇರುವುದರಿಂದ ಆ ವಿಧಾನಗಳಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ. ಅಂದರೆ, ಪುರುಷರ ವೀರ್ಯಾಣು ಕ್ಷಮತೆ ಮತ್ತು ಸಂತಾನಶಕ್ತಿಯ ನಿರ್ಧಾರಕ ಅಂಶಗಳಲ್ಲಿ ಕೂಡ ಈ ಸಂಶೋಧನೆಯಿಂದಾಗಿ ಕ್ರಾಂತಿಕಾರಕ ಬದಲಾವಣೆಗಳಾಗಲಿವೆ. ವೀರ್ಯದ ಗುಣಮಟ್ಟದ ನಿರ್ಧಾರದಲ್ಲಿ ಕೂಡ ಬದಲಾವಣೆಯಾಗಬೇಕಿದೆ ಎಂದು ಹರ್ಮೆಸ್ ಗಡೆಲಾ ಹೇಳಿದ್ದಾರೆ.

ಸಂತಾನ ಸೃಷ್ಟಿಗೆ ಒಂದು ಹಿಮಾಲಯ ಪರ್ವತವನ್ನೇ ಏರಿದಷ್ಟು ಶ್ರಮಿಸಬೇಕಾದ ವೀರ್ಯಾಣು(ಅದರ ಗಾತ್ರ ಮತ್ತು ಕ್ರಮಿಸುವ ದೂರದ ಲೆಕ್ಕದಲ್ಲಿ), ಈ ಮೊದಲು ಅಂದುಕೊಂಡಂತೆ ಸರಾಗವಾಗಿ ಈಜಿ ಸಾಗುವುದಿಲ್ಲ; ಬದಲಾಗಿ ಸ್ಪಿನ್ ಮಾಡುತ್ತಾ ಉರುಳುರುಳಿ ಸಾಗುತ್ತದೆ ಎಂದರೆ, ಅದರ ಆ ಪಯಣ ಇನ್ನೆಷ್ಟು ಶ್ರಮದಾಯಕವಲ್ಲವೆ? ಒಂದು ಜೀವ ಸೃಷ್ಟಿಯ ಹಿಂದಿನ ಆ ಬಡಪಾಯಿ ವೀರ್ಯಾಣುವಿನ ಶ್ರಮವನ್ನು ನಿಖರವಾಗಿ ಗುರುತಿಸುವ ಪ್ರಯತ್ನ ಕೊನೇ ಪಕ್ಷ ಈಗಲಾದರೂ ಆಯಿತಲ್ಲ ಎಂದು ಗಂಡು ಹೈಕಳು ನಿಟ್ಟುಸಿರು ಬಿಡಬಹುದು! ಹಾಗಾಗಿ ಈಗ ಬದುಕು ಎಂದರೆ ಈಸಬೇಕು, ಇದ್ದು ಜೈಸಬೇಕು ಅಲ್ಲ; ಉರುಳಬೇಕು, ಉರುಳುರುಳಿ ಏಳಬೇಕು!

Previous Post

ಕರ್ನಾಟಕ: ಆಗಸ್ಟ್ 12 ರ ಕೋವಿಡ್‌ ಅಂಕಿ ಅಂಶ

Next Post

ಕೇರಳ- ಕರ್ನಾಟಕ: ಅಂತಾರಾಜ್ಯ ಗಡಿ ಮುಚ್ಚುವಾಗ ಇದ್ದ ಮುಂಜಾಗ್ರತೆ ತೆರವಿಗೆ ಇಲ್ಲದಾಯ್ತೇಕೆ?

Related Posts

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ
Top Story

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

by ಪ್ರತಿಧ್ವನಿ
December 18, 2025
0

ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು( Bhagavad Gita) ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು...

Read moreDetails
ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

December 17, 2025

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್..

December 17, 2025
Next Post
ಕೇರಳ- ಕರ್ನಾಟಕ: ಅಂತಾರಾಜ್ಯ ಗಡಿ ಮುಚ್ಚುವಾಗ ಇದ್ದ ಮುಂಜಾಗ್ರತೆ ತೆರವಿಗೆ ಇಲ್ಲದಾಯ್ತೇಕೆ?

ಕೇರಳ- ಕರ್ನಾಟಕ: ಅಂತಾರಾಜ್ಯ ಗಡಿ ಮುಚ್ಚುವಾಗ ಇದ್ದ ಮುಂಜಾಗ್ರತೆ ತೆರವಿಗೆ ಇಲ್ಲದಾಯ್ತೇಕೆ?

Please login to join discussion

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada