• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಚೀನಾದೊಂದಿಗೆ ಭಾರತ ಯುದ್ಧ ಮಾಡಲು ಸಾಧ್ಯವಿಲ್ಲವೆಂದು ಬೆದರಿಕೆ ಒಡ್ಡಿದ ಚೀನಾ

by
June 23, 2020
in ದೇಶ
0
ಚೀನಾದೊಂದಿಗೆ ಭಾರತ ಯುದ್ಧ ಮಾಡಲು ಸಾಧ್ಯವಿಲ್ಲವೆಂದು ಬೆದರಿಕೆ ಒಡ್ಡಿದ ಚೀನಾ
Share on WhatsAppShare on FacebookShare on Telegram

ಏಷ್ಯಾದ ಅತೀ ದೊಡ್ಡ ಮತ್ತು ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೈತ್ಯ ಚೀನಾ ಮತ್ತು ಭಾರತದ ನಡುವೆ ಇದೀಗ ಗಡಿ ಬಿಕ್ಕಟ್ಟು ತೀವ್ರಗೊಂಡಿದೆ. ಚೀನಾದೊಂದಿಗೆ ಹಿಮಾಲಯ ಪ್ರಾಂತ್ಯದಲ್ಲಿ ಸುಮಾರು 2500 ಕಿಲೋಮೀಟರ್‌ ಉದ್ದದ ಗಡಿಯನ್ನು ಹಂಚಿಕೊಂಡಿರುವ ಚೀನಾ ಮತ್ತು ಭಾರತದ ಸಂಭಂದಕ್ಕೆ ಸುಮಾರು 7 ದಶಕಗಳ ಇತಿಹಾಸವೇ ಇದೆ. ಈಗ ಭಾರತ ಮತ್ತು ಚೀನಾ ಎರಡೂ ದೇಶಗಳಲ್ಲಿ ಜನತೆಯಲ್ಲಿ ಬಹು ಚರ್ಚಿತವಾಗುತ್ತಿರುವ ವಿಷಯವೆಂದರೆ ಗಡಿ ಘರ್ಷಣೆಯದ್ದೇ ಆಗಿದೆ. ಮೊದಲಿನಿಂದಲೂ ಕಮ್ಯನಿಸ್ಟ್‌ ರಾಷ್ಟ್ರವಾಗಿರುವ ಚೀನಾದಲ್ಲಿ ಸ್ವತಂತ್ರ ಪತ್ರಿಕೋದ್ಯಮವಿಲ್ಲ. ಅಷ್ಟೇ ಅಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಓರ್ವ ನಾಗರಿಕನಿಗೆ ನೀಡಿರುವ ಮೂಲಭೂತ ಹಕ್ಕುಗಳನ್ನೂ ಮೊಟಕುಗೊಳಿಸಲಾಗಿದೆ.

ADVERTISEMENT

ಕಳೆದ ಜೂನ್‌ 15 ರಂದು ಗಾಲ್ವಾನ್‌ ಕಣಿವೆಯಲ್ಲಿ ನಡೆದ ಚೀನಾ -ಭಾರತ ಸೈನಿಕ ತಂಡಗಳ ಮುಖಾಮುಖಿಯಲ್ಲಿ ಎರಡೂ ಸೇನೆಗಳ ಸೈನಿಕರು ಮೃತರಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ಅದರೆ ಚೀನಾ ಕಡೆಯ ಸೈನಿಕರ ಸಾವಿನ ವರದಿಯನ್ನು ಚೀನಾ ಈವರೆಗೂ ಮಾಧ್ಯಮಗಳಿಗೆ ಬಿಡುಗಡೆ ಮಾಡಲಿಲ್ಲ. ಕಳೆದ 45 ದಿನಗಳಿಂದಲೂ ಚೀನಾ ಮತ್ತು ಭಾರತದ ಸೇನೆಗಳ ನಡುವೆ ಗಡಿಯಲ್ಲಿ ತಿಕ್ಕಾಟ ನಡೆದೇ ಇದೆ. ಇಲ್ಲಿ ಎರಡೂ ದೇಶಗಳ ಲೆಫ್ಟಿನೆಂಟ್‌ ಜನರಲ್‌ ಮಟ್ಟದ ಅಧಿಕಾರಿಗಳ ನಡುವೆ ಹಲವು ಸುತ್ತಿನ ಮಾತುಕತೆಗಳೂ ನಡೆದಿವೆಯಾದರೂ ಗಡಿ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ. 2017 ರಲ್ಲಿ ಡೋಕ್ಲಾಮ್ನಲ್ಲೂ ಇದೇ ರೀತಿ ಬಿಕ್ಕಟ್ಟು ತಲೆದೋರಿದ್ದಾಗ ಎರಡೂ ದೇಶಗಳ ನಡುವಿನ ಮಾತುಕತೆಯಲ್ಲಿ ಬಗೆಹರಿಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ. ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಗಡಿ ಭಾಗದಲ್ಲಿ ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಹೆಚ್ಚಿಸಲು ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದೇ ಚೀನಾದ ಕಣ್ಣನ್ನು ಕೆಂಪಗಾಗಿಸಿದೆ.

1962 ರ ಯುದ್ದದಲ್ಲಿ ಚೀನಾವು ನಮ್ಮ ದೇಶದ ಆಕ್ಸಾಯಿ ಚಿನ್‌ ಪ್ರದೇಶವನ್ನು ಆಕ್ರಮಿಸಿಕೊಂಡಿತು. ಈಗ ರಸ್ತೆ ನಿರ್ಮಾಣ ಮಾಡಿರುವುದು ಆಕ್ಸಾಯಿ ಚಿನ್‌ ಪ್ರದೇಶಕ್ಕೆ ಹತ್ತಿರದಲ್ಲಿದ್ದು ಭಾರತ ಮುಂದೆ ಈ ಪ್ರದೇಶದ ಮೇಲೆ ಹಕ್ಕು ಸಾಧಿಸಬಹುದೆಂದು ಚೀನಾ ಈಗ ಗಡಿಯಲ್ಲಿ ಕ್ಯಾತೇ ತೆಗೆದಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ . ಅದೇನೇ ಇರಲಿ ಚೀನಾ ತನ್ನ ಸುತ್ತಲಿನ ಎಲ್ಲ ದೇಶಗಳ ನಡುವೆಯೂ ಗಡಿಯಲ್ಲಿ ಸಂಘರ್ಷವನ್ನು ಹೊಂದಿದೆ. ಅಷ್ಟೇ ಅಲ್ಲ ಸುತ್ತಲಿನ ಇತರ ದೆಶಗಳ ಮೇಲಿನ ಭೂ ಪ್ರದೇಶವನ್ನು ಸಮಯ ಸಿಕ್ಕಾಗ ಆಕ್ರಮಿಸಿಕೊಳ್ಳುತ್ತಲೇ ಬಂದಿದೆ. ಟಿಬೆಟ್‌ ನ ಆಕ್ರಮಣವನ್ನು ಮಾಡಿಯೇ 70 ವರ್ಷಗಳಾಗಿವೆ. ಈ ಅಕ್ರಮಣವನ್ನು ಮಾಡದಿದ್ದರೆ ಚೀನಾ ಭಾರತದೊಂದಿಗೆ ಗಡಿ ಹಂಚಿಕೊಳ್ಳುವುದು ಸಾದ್ಯವಿರಲಿಲ್ಲ. ಮೊದಲಿಗೆ ಈ ಕುತಂತ್ರಿ ಚೀನಾ ಎರಡು ಹೆಜ್ಜೆ ಮುಂದಿಡುತ್ತದೆ ನಂತರ ಮಾತುಕತೆಗಳಾದ ಮೇಲೆ ಒಂದು ಹೆಜ್ಜೆ ಹಿಂತೆಗೆಯುತ್ತದೆ. ಆಗ ಒಂದು ಹೆಜ್ಜೆ ಉಚಿತವಾಗಿ ಭೂಮಿ ಸಿಕ್ಕಂತಾಯಿತು. ಇದು ಚೀನಾದ ನಿಜವಾದ ಮನೋಭಾವ.

ಚೀನಾದಿಂದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗುತಿದ್ದಂತೆ ಭಾರತದ ಜನತೆಯಲ್ಲಿ ರಾ಼ಷ್ಟ್ರೀಯತೆಯ ಭಾವನೆ ಮತ್ತು ಚೀನಾ ವಿರೋಧೀ ಮನೋಭಾವನೆ ಹೆಚ್ಚಗುತ್ತಿದೆ ಎಂದು ಚೀನಾದ ಸರ್ಕಾರೀ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ. ಜತೆಗೇ ಭಾರತದ ತಜ್ಞರು ಚೀನಾ ಜತೆ ಸಂಘರ್ಷಕ್ಕೆ ಇಳಿಯದಂತೆ ಮತ್ತು ರಾಷ್ಟ್ರೀಯತೆಯನ್ನು ಕಡಿಮೆ ಮಾಡುವಂತೆ ಹೇಳಿದ್ದಾರೆ ಎಂದೂ ಪತ್ರಿಕೆ ವರದಿ ಮಾಡಿದೆ. ಅದಷ್ಟೇ ಅಲ್ಲ ಚೀನಾ ಜತೆ ಸಂಘರ್ಷಕ್ಕೆ ಇಳಿದರೆ ಭಾರತಕ್ಕೆ 1962 ಕ್ಕಿಂತಲೂ ಹೆಚ್ಚಿನ ಹಾನಿ ಅಗಲಿದೆ ಎಂದೂ ಪರೋಕ್ಷ ಬೆದರಿಕೆ ಒಡ್ಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಮಾತನಾಡಿ ಗಡಿಯಲ್ಲಿ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ನೀಡಿರುವುದಾಗಿ ಪ್ರಕಟಿಸಿದ್ದಾರೆ ಅಷ್ಟೇ ಅಲ್ಲ ಗಾಲ್ವನ್‌ ಪ್ರದೇಶದಲ್ಲಿ ಚೀನಾ ಸೈನ್ಯವು ಭಾರತದ ಭೂಮಿಯನ್ನು ಅತಿಕ್ರಮಣ ಮಾಡಿಲ್ಲ ಎಂದೂ ಹೇಳಿದ್ದಾರೆ. ಗ್ಲೋಬಲ್‌ ಟೈಮ್ಸ್‌ ಪ್ರಕಾರ ಮೋದಿ ಅವರು ಎರಡೂ ದೇಶಗಳ ಉದ್ವಿಗ್ನತೆಯನ್ನು ಶಮನ ಮಾಡಲು ಪ್ರಯತ್ನಿಸುತಿದ್ದಾರೆ ಅಷ್ಟೇ ಅಲ್ಲ ದೇಶದಲ್ಲಿರುವ ರಾಷ್ಟ್ರೀಯವಾದಿಗಳನ್ನು ಕಟುವಾದಿಗಳನ್ನೂ ಸಮಾಧಾನಿಸುವಂತೆ ಮಾತಾಡುತಿದ್ದಾರೆ.

ಸದ್ಯಕ್ಕೆ, ಭಾರತವು ತನ್ನದೇ ಆದ ಸಾಂಕ್ರಾಮಿಕ ಮತ್ತು ಆರ್ಥಿಕ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು, ನೆರೆಹೊರೆಯವರೊಂದಿಗೆ ಘರ್ಷಣೆ ಮಾಡಿಕೊಳ್ಳುವುದರಿಂದ ಭಾರತಕ್ಕೆ ಯಾವುದೇ ರೀತಿಯಲ್ಲೂ ಒಳ್ಳೆಯದಾಗುವುದಿಲ್ಲ, ಏಕೆಂದರೆ ನಕಾರಾತ್ಮಕ ಅಂಶಗಳಿಂದ ಭಾರತವನ್ನು ಇನ್ನಷ್ಟು ಹಾನಿಗೊಳಿಸುತ್ತದೆ. ಗಡಿ ಸಂಘರ್ಷವನ್ನು ತಪ್ಪಿಸುವ ಪ್ರಯತ್ನದಲ್ಲಿ ಚೀನಾ ಬಹಳ ಸಂಯಮದಿಂದ ವರ್ತಿಸಿದೆ, ಆದರೆ ಇದರರ್ಥ ಚೀನಾ ಯಾವುದೇ ದೇಶದಿಂದ, ವಿಶೇಷವಾಗಿ ಭಾರತದ ಪ್ರಚೋದನೆ ಅಥವಾ ಆಕ್ರಮಣಶೀಲತೆಗೆ ಹೆದರುತ್ತಿದೆ ಎಂದಲ್ಲ. ಚೀನಾದ ಮಿಲಿಟರಿ ವೀಕ್ಷಕರು, ಚೀನಾದ ಮುಖ್ಯ ಸೈನಿಕರನ್ನು ಒಳಗೊಂಡ ಉಲ್ಬಣಗೊಂಡ, ದೊಡ್ಡ-ಪ್ರಮಾಣದ ಮಿಲಿಟರಿ ಸಂಘರ್ಷವು ಸಂಭವಿಸಿದಲ್ಲಿ, ಅದು 1962 ರಲ್ಲಿ ನಡೆದ ಯುದ್ಧದಂತೆಯೇ ಆಗಲಿದೆ ಇದರಿಂದ , ಭಾರತಕ್ಕೆ ಪ್ರತಿಕೂಲವಾದ ಪರಿಣಾಮ ಅಗಲಿದೆ

ಏಕೆಂದರೆ ಚೀನಾದ ಮಿಲಿಟರಿಯು ಎಲ್ಲಾ ಸೈನಿಕರು, ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಒಟ್ಟಿಗೆ ಸಂಯೋಜಿಸುವ ಮಾಹಿತಿಯುಕ್ತ ಯುದ್ಧ ವ್ಯವಸ್ಥೆಯನ್ನು ಹೊಂದಿದೆ, ಆದರೆ ಬಹಳ ಶಿಸ್ತುಬದ್ಧ ಸೈನಿಕರು ಮತ್ತು ಅಧಿಕಾರಿಗಳನ್ನು ಸುಧಾರಿತ ಯುದ್ಧತಂತ್ರದ ಅರಿವಿನೊಂದಿಗೆ ಹೊಂದಿದೆ ಎಂದು ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ಹೇಗಾದರೂ, ಸಂಘರ್ಷವು ಭುಗಿಲೆದ್ದರೆ, ಸಾರಿಗೆ ಮತ್ತು ಮಿಲಿಟರಿ ಉದ್ಯಮದ ಮೇಲೆ ಚೀನಾದ ಅಗಾಧ ಅನುಕೂಲಗಳು ಪೀಪಲ್ಸ್ ಲಿಬರೇಶನ್ ಆರ್ಮಿಗೆ ಮುಂಚೂಣಿಯಲ್ಲಿರುವ ಭಾರತದ ವಿರುದ್ಧ ಸಂಪೂರ್ಣ ಕಾರ್ಯತಂತ್ರದ ಮತ್ತು ಯುದ್ಧತಂತ್ರದ ಲಾಭವನ್ನು ಪಡೆಯಲು ಸಹಾಯ ಮಾಡುತ್ತದೆ. ಇದಕ್ಕಾಗಿಯೇ ಭಾರತವು ದಶಕಗಳಲ್ಲಿ ಪಿಎಲ್‌ಎ ವಿರುದ್ಧ ಪೂರ್ಣ ಪ್ರಮಾಣದ ದಾಳಿ ನಡೆಸಲು ಧೈರ್ಯ ಮಾಡಿಲ್ಲ ಆದರೆ ಸಾಂದರ್ಭಿಕವಾಗಿ ಕೆಳಮಟ್ಟದ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಎಂದು ಪತ್ರಿಕೆ ಹೇಳಿಕೊಂಡಿದೆ. ಭಾರತೀಯ ಪಡೆಗಳು ವಿವಿಧ ದೇಶಗಳಿಂದ ಖರೀದಿಸಿದ ಶಸ್ತ್ರಾಸ್ತ್ರಗಳನ್ನು ಬಳಸುತ್ತವೆ, ಅವುಗಳು ಪರಸ್ಪರ ಸಮನ್ವಯ ಸಾಧಿಸುವುದಿಲ್ಲ, ತಮ್ಮದೇ ಆದ ಜಲಾಂತರ್ಗಾಮಿ ನೌಕೆಯನ್ನು ಡಾಕ್ ಯಾರ್ಡ್‌ನಲ್ಲಿ ಸ್ಫೋಟಿಸಬಹುದು ಮತ್ತು ಸ್ನೇಹಪರ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಬಹುದು ಎಂದು ತಮ್ಮ ಶಿಸ್ತುಬದ್ಧ ಸೈನಿಕರನ್ನು ಉಲ್ಲೇಖಿಸಬಾರದು ಎಂದು ವರದಿ ಹೇಳಿದೆ. ಭಾರತದೊಳಗಿನ ವೈಚಾರಿಕ ದನಿಗಳು ಚೀನಾ ಎದುರು ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಪ್ಪುಗಳನ್ನು ಪುನರಾವರ್ತಿಸದಂತೆ ಮೋದಿಗೆ ಕರೆ ನೀಡುತ್ತಿವೆ.

ಭಾರತೀಯ ಅರ್ಥಶಾಸ್ತ್ರಜ್ಞ ಸ್ವಾಮಿನಾಥನ್ ಅಯ್ಯರ್ ಅವರು ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಚೀನಾ ಮತ್ತು ಭಾರತದ ನಡುವಿನ ಅಂತರವು ಮಿಲಿಟರಿ ಮತ್ತು ಆರ್ಥಿಕವಾಗಿ 1962 ಕ್ಕೆ ಹೋಲಿಸಿದರೆ ಐದು ಪಟ್ಟು ದೊಡ್ಡದಾಗಿದೆ ಎಂದು ಹೇಳಿದರು. ಸಂಭಾವ್ಯ ಸ್ವರಕ್ಷಣೆ ಪ್ರತಿದಾಳಿಯಲ್ಲಿ, ಚೀನಾ ತನ್ನದೇ ಆದ ಭೂಪ್ರದೇಶವನ್ನು ಭದ್ರಪಡಿಸಿಕೊಳ್ಳುತ್ತದೆ ಮತ್ತು ವಿಜಯಶಾಲಿಯಾಗಿ ಹೊರಹೊಮ್ಮಿದ ನಂತರ ಭಾರತದ ಭೂಪ್ರದೇಶವನ್ನು ಪಡೆದುಕೊಳ್ಳುವುದಿಲ್ಲ, ಆದರೆ ಯುದ್ಧವು ಭಾರತವನ್ನು ತೀವ್ರವಾಗಿ ಹಾನಿಗೀಡು ಮಾಡುತ್ತದೆ ಮತ್ತು , ಜಾಗತಿಕ ಸ್ಥಾನ ಮತ್ತು ಆರ್ಥಿಕತೆಯು ದಶಕಗಳ ಹಿಂದಕ್ಕೆ ಹೋಗುತ್ತದೆ ಎಂದು ಚೀನಾದ ವಿಶ್ಲೇಷಕರು ಹೇಳಿದ್ದಾರೆ ಎಂದೂ ಗ್ಲೋಬಲ್‌ ಟೈಮ್ಸ್‌ ವರದಿ ಹೇಳಿದೆ.

ಆದರೆ ಚೀನಾದ ಸರ್ಕಾರೀ ನಿಯಂತ್ರಣದಲ್ಲಿರುವ ಮಾಧ್ಯಮವು ಏನೇ ಬರೆದುಕೊಂಡಿದ್ದರೂ ಕೂಡ ಪರೋಕ್ಷ ರೀತಿಯಲ್ಲಿ ಭಾರತಕ್ಕೆ ಬೆದರಿಕೆ ಒಡ್ಡುತ್ತಿದೆ ಎಂದು ನಮ್ಮ ರಕ್ಞಣಾ ತಜ್ಞರ ಅಭಿಪ್ರಾಯವಾಗಿದೆ. ಈ ಮದ್ಯೆ ಗಾಲ್ವಾನ್‌ ಕಣಿವೆಯನ್ನು ತನ್ನದೆಂದು ಚೀನಾ ಹೇಳಿಕೊಂಡಿರುವುದು ಮಾತುಕತೆಗೆ ಹಿನ್ನಡೆ ಆಗಲಿದೆ ಎನ್ನಲಾಗಿದೆ.

Tags: ಚೀನಾ-ಭಾರತ ಗಡಿ ಬಿಕ್ಕಟ್ಟು
Previous Post

ಕೋವಿಡ್-19 ಚಿಕಿತ್ಸೆ ಹೆಸರಲ್ಲಿ ಸೈಬರ್ ದಾಳಿ; SBI, CERTin ಎಚ್ಚರಿಕೆ

Next Post

ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ

ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada