• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಮೋದಿ ವಿಫಲವಾಗಿರುವುದು ಏಕೆ ಗೊತ್ತಾ?       

by
May 21, 2020
in ದೇಶ
0
ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಮೋದಿ ವಿಫಲವಾಗಿರುವುದು ಏಕೆ ಗೊತ್ತಾ?       
Share on WhatsAppShare on FacebookShare on Telegram

ಕಳೆದ ಮೇ 12 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೋನಾ ಸೋಂಕಿನ ಕಾರಣದಿಂದ ತೀವ್ರ ಕುಸಿತಕ್ಕೀಡಾಗಿರುವ ದೇಶದ ಆರ್ಥಿಕ ಚೇತರಿಕೆಗೆ 20 ಲಕ್ಷ ಕೋಟಿ ರೂಪಾಯಿಗಳ ಉತ್ತೇಜನ ಪ್ಯಾಕೇಜ್ ಘೋಷಿಸಿದರು. ಈ ಘೋಷಣೆಯಲ್ಲಿ ದೇಶದ 130 ಕೋಟಿ ಜನಸಂಖ್ಯೆಗೂ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿಕೊಂಡಿದ್ದರು. ನಂತರ ಐದು ದಿನಗಳ ಕಾಲ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನ್ನು ವಿವಿಧ ರಂಗಗಳಿಗೆ, ವಲಯಗಳಿಗೆ ನೀಡುವ ಕುರಿತು ಪತ್ರಿಕಾ ಗೋಷ್ಟಿಯ ಮೂಲಕ ವಿವರಿಸಿದರು.

ADVERTISEMENT

ನಿರ್ಮಲಾ ಅವರ ವಿವರಣೆಯ ನಂತರ ಏರಿಕೆ ಕಂಡಿದ್ದ ದೇಶದ ಷೇರು ಮಾರುಕಟ್ಟೆಗಳು ಕುಸಿತ ದಾಖಲಿಸಿದವು. ದೇಶದ ಬಹುತೇಕ ಆರ್ಥಿಕ ತಜ್ಞರು ಈ 20 ಲಕ್ಷ ಕೋಟಿಯ ಪ್ಯಾಕೇಜ್ ದೇಶದ ಒಟ್ಟು ಜಿಡಿಪಿಯ ಶೇಕಡಾ 1 ರಷ್ಟು ಮಾತ್ರ ಎಂಬ ವಿಷಯ ಬಹಿರಂಗಪಡಿಸುತಿದ್ದಂತೆ ಡಾಲರ್ ಎದುರು ರೂಪಾಯಿ ಕೂಡ ಕುಸಿತ ದಾಖಲಿಸಿತು. ಬಹುಶಃ ದೇಶದ ರೇಟಿಂಗ್ ಸಂಸ್ಥೆಗಳು ಜಿಡಿಪಿ ದರವನ್ನು ಇಳಿಕೆ ತೋರಿಸುತ್ತವೆ ಎಂಬ ಕಾರಣಕ್ಕೆ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸಲಾಗಿದೆ ಎನ್ನಲಾಗಿದೆ. ದೇಶವು ಒಟ್ಟು ಜಿಡಿಪಿಯ ಶೇಕಡಾ 77 ರಷ್ಟು ಆಂತರಿಕ ಸಾಲವನ್ನು ಹೊಂದಿದ್ದು ವಿತ್ತೀಯ ಕೊರತೆ ಈ ಬಾರಿ ಎರಡಂಕಿ ತಲುಪುವ ಸಾದ್ಯತೆ ನಿಚ್ಚಳವಾಗಿದೆ. ಸರಕಾರ ಈಗಾಗಲೇ ಬಾಂಡ್ ಬಿಡುಗಡೆಯ ಮೂಲಕ ಹಣ ಸಂಗ್ರಹಣೆಗೆ ಸಿದ್ದತೆ ಮಾಡಿಕೊಂಡಿದೆ.

ಹಿರಿಯ ಆರ್ಥಿಕ ತಜ್ಞ ಪ್ರಾಚಿ ಮಿಶ್ರಾ ಅವರ ಪ್ರಕಾರ ದೇಶದ ಜಿಡಿಪಿ 2020 ರ ಮಾರ್ಚ್ ವೇಳೆಗೆ ಶೇಕಡಾ 5 ರಷ್ಟು ಕುಸಿತ ದಾಖಲಿಸಿದೆ. ಈ ಋಣಾತ್ಮಕ ಹಿನ್ನಡೆ ದೇಶ ಎಂದೂ ಕಂಡಿರಲಿಲ್ಲ ಎಂದೂ ಅವರು ಹೇಳುತ್ತಾರೆ. ಉದ್ಯಮಗಳು ಮತ್ತು ಕೈಗಾರಿಕೆಗಳಿಗೆ ತೀವ್ರ ಅರ್ಥಿಕ ಹೊಡೆತ ಬಿದ್ದಿದ್ದು ಕೋಟಿಗಟ್ಟಲೆ ಉದ್ಯೋಗ ನಷ್ಟವಾಗಲಿದೆ. ಉದ್ಯಮಗಳು ಸರಕಾರದ ನೆರವಿಲ್ಲದೆ ಚೇತರಿಸಿಕೊಳ್ಳಲು ಸಾದ್ಯವೇ ಇಲ್ಲ ಎಂದು ಅವರು ಹೇಳಿದರು.

ಮತ್ತೋರ್ವ ತಜ್ಞ ಅಭಿಷೇಕ್ ಗುಪ್ತಾ ಅವರ ಪ್ರಕಾರ ಈಗಿನ ಕರೋನಾ ಸೋಂಕು ಭೀತಿಗಿಂತಲೂ ಮೊದಲೇ ದೇಶವು ಆರ್ಥಿಕ ಹಿಂಜರಿತವನ್ನು ಎದುರಿಸುತಿತ್ತು. ಜಿಡಿಪಿಯ ಕುಸಿತದ ನಡುವೆಯೂ ಕೇಂದ್ರ ಸರಕಾರ ಕಳೆದ ಬಜೆಟ್ ನಲ್ಲಿ ವಿತ್ತೀಯ ಕೊರತೆಯನ್ನು ಶೇಕಡಾ 3.5 ರಷ್ಟಕ್ಕೆ ಇಳಿಸುವ ಗುರಿ ಹಾಕಿಕೊಂಡಿತ್ತು. ಇದೀಗ ಆರ್ಥಿಕ ಕುಸಿತದ ಕಾರಣದಿಂದಾಗಿ ವಿತ್ತೀಯ ಕೊರತೆ ದೇಶದ ಜಿಡಿಪಿಯ ಶೇಕಡಾ 7.4ರಷ್ಟು ಕುಸಿಯಲಿದೆ. ಇದು 1991 ರ ಮಟ್ಟವಾಗಿದೆ.

HSBC ಹೋಲ್ಡಿಂಗ್ಸ್ ಪ್ರಕಾರ ದೇಶದ ವಿತ್ತೀಯ ಕೊರತೆ ಶೇ 13.3 ಕ್ಕೆ ಕುಸಿತ ದಾಖಲಿಸಲಿದೆ. ಮೊನ್ನೆ ಘೋಷಿಸಿರುವ ಅತಿ ಸಣ್ಣ , ಸಣ್ಣ ಮತ್ತು ಮದ್ಯಮ ವರ್ಗದ ಕೈಗಾರಿಕೆಗಳ ಪುನಶ್ಚೇತನ ಪ್ಯಾಕೇಜ್ ನಲ್ಲಿ ಜಿಡಿಪಿಯ ಶೇಕಡಾ 2.1 ರಷ್ಟು ನೆರವು ಘೋಷಿಸಲಾಗಿದೆ. ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಕೈಗಾರಿಕೆಗಳಿಗೆ ನೆರವು ಸಾಲದೆ ಸಾಲದ ಸುಸ್ತಿದಾರ ಆಗಲಿವೆ. ಈ ಹಿಂದೆ ದೇಶದ ಆಂತರಿಕ ಸಾಲ ಜಿಡಿಪಿಯ ಶೇಕಡಾ 71 ರಷ್ಟಿದ್ದುದು ಕೂಡಲೇ ಶೇಕಡಾ 77 ಕ್ಕೆ ಏರಿಕೆ ದಾಖಲಿಸಿದ್ದುದನ್ನೂ ಅದು ಉಲ್ಲೇಖಿಸಿದೆ.

ಈ ರೀತಿ ದೇಶದ ಆರ್ಥಿಕ ಬೆಳವಣಿಗೆಯನ್ನು ರೇಟಿಂಗ್ ಕಂಪೆನಿಗಳು ನಕಾರಾತ್ಮಕವಾಗಿ ಬಿಂಬಿಸಿರುವುದು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರನ್ನು ಸೆಳೆಯುವಲ್ಲಿಯೂ ಹಿಂಜರಿಕೆ ಆಗಲಿದೆ ಎನ್ನಲಾಗಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಬುನಾದಿ ಪ್ರಬಲವಾಗಿದ್ದು ಇತರ ಅನೇಕ ದೇಶಗಳ ಆರ್ಥಿಕತೆಗಿಂತ ಉತ್ತಮವಾಗಿದೆ ಎಂದು ಹೇಳುತಿದ್ದಾರೆ.

ಸರಕಾರ ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ರಿಸರ್ವ್ ಬ್ಯಾಂಕಿನ ಮೊರೆ ಹೋಗಿದ್ದು ಸಾಲ ಮಾರುಕಟ್ಟೆಗೆ ಹಣದ ಹರಿವನ್ನು ಹೆಚ್ಚಿಸಲು ಸರಕಾರ ಬಿಡುಗಡೆ ಮಾಡುವ ಬಾಂಡ್ ಗಳ ಖರೀದಿಗೆ ಮುಂದಾಗಬೇಕೆಂದು ಕೋರಿದೆ. ಈಗ ಸರಕಾರವು ತನ್ನ ಹಣಕಾಸು ಪರಿಸ್ಥಿತಿಯನ್ನು ಉತ್ತಮಗೊಳಿಸುವುದರ ಜತೆಗೇ ದೇಶದ ಆರ್ಥಿಕತೆ, ಉತ್ಪಾದನೆ, ಜಿಡಿಪಿ ಬೆಳವಣಿಗೆ ಮತ್ತು ಆದಾಯನ್ನೂ ಹೆಚ್ಚಿಸುವತ್ತ ಚಿಂತೆ ಮಾಡಬೇಕಿದೆ. ಆದರೆ ಇದೆಲ್ಲವನ್ನೂ ಪರಿಣಾಮಕಾರಿಯಾಗಿ ಮಾಡಬಲ್ಲಂಥ ನಿರ್ವಹಿಸಬಲ್ಲಂತ ತಜ್ಞರ ಕೊರತೆಯನ್ನು ಆಡಳಿತರೂಢ ಪಕ್ಷ ಎದುರಿಸುತ್ತಿದ್ದು ದೂರದೃಷ್ಟಿಯ ಆರ್ಥಿಕ ಪ್ಯಾಕೇಜ್ ಘೋಷಿಸಬೇಕಿದೆ.

ಮೊದಲಿಗೆ ದೇಶದ ಕೆಳ ವರ್ಗಗಳ ಅಭಿವೃದ್ದಿಗೆ ಹೆಚ್ಚಿನ ನೆರವಿನ ಅಗತ್ಯವಿದೆ. ಇಂದು ವಲಸೆ ಕಾರ್ಮಿಕರ ಬದುಕು ಅತಂತ್ರವಾಗಿದೆ. ಸಾವಿರಾರು ಕಿಲೋಮೀಟರ್ ಗಳಷ್ಟು ದೂರ ಪ್ರಯಾಣಿಸಿ ಕೆಲಸ ಮಾಡುವ ಕಾರ್ಮಿಕರಲ್ಲಿ ಇಂದು ಖರೀದಿಸುವ ಸಾಮರ್ಥ್ಯ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಇವರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಿಸಲು ಸರಕಾರ ಆರ್ಥಿಕ ನೆರವು ನೀಡಬೇಕಿದೆ. ಆ ಮೂಲಕ ದೇಶೀ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಬೇಕಿದೆ. ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಯಾವುದೇ ರೀತಿಯ ನೆರವನ್ನು ಇನ್ನೂ ಘೋಷಿಸಿಲ್ಲ. ಇದೂ ಕೂಡ ಚೇತರಿಕೆಗೆ ತೊಡಕಾಗಬಹುದು. ಕೇಂದ್ರ ಸರಕಾರ ಕೂಡಲೇ ಪುನಶ್ಚೇತನಕ್ಕೆ ತುರ್ತು ಕ್ರಮ ಕೈಗೊಂಡಲ್ಲಿ ಮಾತ್ರ ಈ ಹಿಂಜರಿತದಿಂದ ಹೊರಬರಲು ಸಾಧ್ಯ.

Tags: ‌ covid-19‌ ಪ್ರಧಾನಿ ಮೋದಿNirmala sitharamaPM Modiಕೋವಿಡ್-19ನಿರ್ಮಲಾ ಸೀತಾರಾಮನ್
Previous Post

1605ಕ್ಕೆ ಏರಿದ ಕರೋನಾ ಸೋಂಕಿತರ ಸಂಖ್ಯೆ; ಹೊಸದಾಗಿ 15 ಮಂದಿ ಗುಣಮುಖ

Next Post

ಮೇ 22ರಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ.!

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಮೇ 22ರಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ.!

ಮೇ 22ರಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ.!

Please login to join discussion

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
Top Story

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada