• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!

by
May 17, 2020
in ದೇಶ
0
ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!
Share on WhatsAppShare on FacebookShare on Telegram

ಯಾಕೂಬ್ ಮತ್ತು ಅಮೃತ್. ಒಬ್ಬ ಹಿಂದೂ ಮತ್ತೊಬ್ಬ ಮುಸ್ಲಿಂ. ಈ ಇಬ್ಬರು ಯುವಕರ ಕುರಿತು ಈಗ ಇಡೀ ದೇಶವೇ ಮಾತನಾಡುತ್ತಿದೆ. ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರು ಪಡುತ್ತಿರುವ ಬವಣೆ ದೇಶದ ಪ್ರಭುತ್ವದ ಆತ್ಮ ಸಾಕ್ಷಿಯನ್ನು ಕೆಣಕಿದೆ. ಲಕ್ಷಾಂತರ ಕಾರ್ಮಿಕರು ಈ ಲಾಕ್ ಡೌನ್ ಸಹಿಸಿಕೊಂಡು ಬೀದಿಯಲ್ಲಿ ಕಣ್ಣೀರಾಗಿದ್ದನ್ನು ನಾವು ಕಂಡಿದ್ದೇವೆ. ಈ ಎಲ್ಲದರ ಮಧ್ಯೆ ಇದೊಂದು ಸುದ್ದಿ ಈಗ ದೇಶ ಮತ್ತೆ ಕಣ್ಣೀರಾಗುವಂತೆ ಮಾಡಿದೆ.

ADVERTISEMENT

ಯಾಕೂಬ್, ಅಮೃತ್ ಸೇರಿದಂತೆ ಒಟ್ಟು 70 ಜನ ತಲಾ 4 ಸಾವಿರ ರೂಪಾಯಿ ಕೊಟ್ಟು ಒಂದು ಟ್ರಕ್ ನಲ್ಲಿ ತಮ್ಮ ಊರಿಗೆ ಹೊರಟಿದ್ದರು. ಹೀಗಿರುವಾಗ ದಾರಿ ಮಧ್ಯೆ ಅಮೃತ್ ವಾಂತಿ ಮಾಡೋದಕ್ಕೆ ಶುರುವಿಟ್ಟುಕೊಂಡಿದ್ದಾನೆ. ತಕ್ಷಣ ಇದು ಜತೆಗಿದ್ದ ಇತರರಲ್ಲಿ ಆತಂಕ ಸೃಷ್ಟಿಮಾಡಿದೆ. ಇದು ಕರೋನಾ ಇರಬಹುದು ಎಂದು ಹೇಳಿದ್ದಾರೆ‌. ಅಲ್ಲದೆ ಅಮೃತ್ ನನ್ನು ಇಲ್ಲಿಯೇ ಅರ್ಧ ದಾರಿಗೆ ಬಿಟ್ಟುಬಿಡುವ ನಿರ್ಧಾರಕ್ಕೆ ಬಂದರು. ಅಂತೆಯೇ ಅಮೃತ್ ನನ್ನು ರಸ್ತೆ ಬದಿಯಲ್ಲಿ ಕೂರಿಸಿ ಪ್ರಯಾಣ ಮುಂದುವರೆಸಲು ಮುಂದಾದರು. ಈ ವೇಳೆ ಜೀವದ ಗೆಳಯನನ್ನು ಅರ್ಧ ದಾರಿಯಲ್ಲಿ ಬಿಡಲು ಒಪ್ಪದ ಯಾಕೂಬ್ ಅಭ್ಯಂತರ ತೋರಿದ್ದಾನೆ. ಶತಾಯಗತಾಯ ಅಮೃತ್ ನನ್ನು ಜತೆ ಕರೆದುಕೊಳ್ಳಲು ಒಪ್ಪದ‌ ಕಾರಣ ಯಾಕೂಬ್ ಕೂಡ‌ ಅಮೃತ್ ಜತೆ ಟ್ರಕ್ ನಿಂದ ಇಳಿದು ಬಿಡುತ್ತಾನೆ.

Also Read: ಕಾಲ್ನಡಿಗೆಯಲ್ಲಿ ಹೊರಟ ವಲಸೆ ಕಾರ್ಮಿಕರನ್ನ ತಡೆದು ನಿಲ್ಲಿಸಲು ʼನ್ಯಾಯಾಲಯʼಕ್ಕೂ ಅಸಾಧ್ಯ!

ಅಮೃತ್, ನಿರಂತರವಾಗಿ ವಾಂತಿ ಮಾಡುತ್ತಾ ಸುಸ್ತಾಗಿ ಹೋಗಿದ್ದ. ಆಯಾಸಹೊಂದಿದ ಅಮೃತ್ ನನ್ನು ತನ್ನ ಮಡಿಲಲ್ಲಿ ಕೂರಿಸಿ ದಾರಿಹೋಕರಿಗೆ ಕೈ ಮುಗಿದ ಯಾಕೂಬ್ ಸಹಾಯಕ್ಕಾಗಿ ಅಂಗಲಾಚಿದ. ಆದರೆ ಇದು ಕರೋನಾ ಇರಬಹುದು. ನಮಗೆ ಯಾಕೆ ಇಂಥಾ ಊಸಾಬರಿ ಅಂತೇಳಿ ಸಹಾಯ ಹಸ್ತ ಚಾಚದೆ ಮುಂದಕ್ಕೆ ನಡೆದಿದ್ದಾರೆ. ಹೀಗೆ ಸಹಾಯ ಸಿಗದೆ ಅಸಾಹಯಕನಾಗಿ ತನ್ನ ಮಡಿಲಲ್ಲಿ ಅಮೃತ್ ನನ್ನು ಮಲಗಿಸಿಕೊಂಡಿರುವಾಗಲೇ ಅಮೃತ್ ಕೊನೆಯುಸಿರೆಳೆದಿದ್ದಾನೆ.

ಆ ಬಳಿಕ ವೈಧ್ಯರ ತಂಡವೊಂದು ಬಂದು ಇಬ್ಬರನ್ನೂ ಆಸ್ಪತ್ರೆ ಸೇರಿಸಿದ್ದಾರೆ. ಅಲ್ಲದೇ ಭೋಪಾಲ್ ನ ಶಿವಪುರಿ‌ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಅಮೃತ್ ಗೆ ಹಾಗೂ ಯಾಕೂಬ್ ನಿಗೆ ಕರೋನಾ ಟೆಸ್ಟ್ ನಡೆಸಿದ್ದಾರೆ. ಟೆಸ್ಟ್ ನ ವರದಿ ಬಂದ ಬಳಿಕ ಅಮೃತ್ ಶವಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿದೆ.

Also Read: ಲಾಕ್‌ಡೌನ್:‌ 900 ಕಿ.ಮೀ‌ ಪ್ರಯಾಣ ಮಾಡಿದ ಗರ್ಭಿಣಿ, ಆಸ್ಪತ್ರೆಗೆ ದಾಖಲಿಸಲು ವೈದ್ಯರಿಂದ ನಿರಾಕರಣೆ

ಅಂದಹಾಗೆ, ಅಮೃತ್ ಮತ್ತು ಯಾಕೂಬ್ ಗುಜರಾತಿನ ಸೂರತ್ ನಿಂದ ಉತ್ತರಪ್ರದೇಶಕ್ಕೆ ಹೊರಟಿದ್ದರು. ದುರಾದೃಷ್ಟವಶಾತ್, ಅಮೃತ್ ಊರ ಸೇರಲಾಗದೆ ತನ್ನ ಗೆಳೆಯ‌ ಯಾಕೂಬ್ ಮಡಿಲಲ್ಲಿ ಅಸುನೀಗಿದ್ದಾನೆ.

Also Read: UPಯಲ್ಲಿ ಟ್ರಕ್ ಅಪಘಾತಕ್ಕೆ 23 ವಲಸೆ ಕಾರ್ಮಿಕರು ಬಲಿ

ಕರೋನಾ ಎಂಬ ಮಹಾಮಾರಿ ಕಣ್ಣೆದುರು ಬಂದು ನಿಲ್ಲುವಾಗಲೂ ಯಾಕೂಬ್ ಜೀವದ ಗೆಳಯನ ಜತೆಗೆ ಜೀವದ ಹಂಗು ತೊರೆದು ನಿಂತಿದ್ದಾನೆ. ಮಾನವೀಯ ಮೌಲ್ಯ ಸತ್ತು ಮಣ್ಣಾಗುವ ಈ ಹೊತ್ತಲಿ‌ ಯಾಕೂಬ್ ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾನೆ. ಸದ್ಯ ಯಾಕೂಬ್ ನನ್ನು ಕ್ವಾರಂಟೈನ್ ನಲ್ಲಿ‌ ಇಡಲಾಗಿದೆ.

Tags: ಅಮೃತ್ ಮತ್ತು ಯಾಕೂಬ್ಉತ್ತರಪ್ರದೇಶಪ್ರಜಾಪ್ರಭುತ್ವ
Previous Post

ರಾಹುಲ್‌ ಗಾಂಧಿ ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕದ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯೇನು?

Next Post

ಲಾಕ್‌ಡೌನ್ 4.0: ಕೇಂದ್ರ ಸರ್ಕಾರ ನೀಡಿರುವ ಸಡಿಲಿಕೆಗಳೇನು?

Related Posts

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?
Top Story

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

by ಪ್ರತಿಧ್ವನಿ
May 23, 2026
0

 ಬೆಂಗಳೂರು : ದೇಶಾದ್ಯಂತ ಇಂದು ಬೆಳಂಬೆಳಿಗ್ಗೆ ವಾಹನ ಸವಾರರಿಗೆ ಮತ್ತೊಮ್ಮೆ ಪೆಟ್ರೋಲ್‌, ಡೀಸೆಲ್ ಏರಿಕೆಯ ಬಿಸಿ ತಟ್ಟಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿಯೇ ಇಂಧನ ಕಂಪನಿಗಳು ಮೂರನೇ...

Read moreDetails
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
Next Post
ಲಾಕ್‌ಡೌನ್ 4.0: ಕೇಂದ್ರ ಸರ್ಕಾರ ನೀಡಿರುವ ಸಡಿಲಿಕೆಗಳೇನು?

ಲಾಕ್‌ಡೌನ್ 4.0: ಕೇಂದ್ರ ಸರ್ಕಾರ ನೀಡಿರುವ ಸಡಿಲಿಕೆಗಳೇನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada