• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

COVID-19; ಫೆಬ್ರವರಿ ಆರಂಭದಲ್ಲಿಯೇ ತನ್ನ ದತ್ತಾಂಶ ಪ್ರಕಟ ನಿಲ್ಲಿಸಿದ IDSP

by
May 15, 2020
in ದೇಶ
0
COVID-19; ಫೆಬ್ರವರಿ ಆರಂಭದಲ್ಲಿಯೇ ತನ್ನ ದತ್ತಾಂಶ ಪ್ರಕಟ ನಿಲ್ಲಿಸಿದ IDSP
Share on WhatsAppShare on FacebookShare on Telegram

ಫೆಬ್ರವರಿ ಆರಂಭದ ವಾರದಲ್ಲಿ ದೇಶದಲ್ಲಿ ಕೇವಲ ಮೂರು ಕೋವಿಡ್-19‌ ಪ್ರಕರಣಗಳಷ್ಟೇ ಪತ್ತೆಯಾಗಿದ್ದವು ಎಂದು Integrated Disease Surveillance Programme (IDSP) ತನ್ನ ವಾರದ ವರದಿಯಲ್ಲಿ ದಾಖಲಿಸಿಕೊಂಡಿದ್ದವು. ಈ IDSP ಅನ್ನೋದು ದೇಶದಲ್ಲಿ ಕಳೆದ ಒಂದು ದಶಕದಿಂದ ವರುಷದ ಪ್ರತಿವಾರ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯ ಪತ್ತೆಹಚ್ಚುವ ಕೆಲಸ ಮಾಡಿಕೊಂಡಿದ್ದು, ಮಾತ್ರವಲ್ಲದೇ ತನ್ನದೇ ಅಧಿಕೃತ ವೆಬ್‌ಸೈಟ್‌ ನಲ್ಲಿ ಅದು ಪ್ರಕಟಿಸುತ್ತದೆ. ಮಾತ್ರವಲ್ಲದೇ IDSP ಅತ್ಯಂತ ವಿಶ್ವಾಸಾರ್ಹ ಅಂಕಿ ಅಂಶವನ್ನ ಇಡಬಲ್ಲ ಸಂಸ್ಥೆಯೂ ಆಗಿದೆ. ಆದರೆ ಕೋವಿಡ್-19‌ ಸಮಯದಲ್ಲಿ ಇನ್ನೂ ಹೆಚ್ಚು ನಿಖರವಾಗಿ ಅಂಕಿ-ಅಂಶ ನೀಡಬೇಕಿದ್ದ IDSP ಫೆಬ್ರವರಿ 2 ಕ್ಕೆ ತನ್ನ ಕೊನೆಯ ವರದಿಯನ್ನ ದಾಖಲಿಸಿ, ಆನಂತರ ಯಾವುದೇ ಒಂದು ಅಂಕಿ ಅಂಶವನ್ನೂ ಅದು ಪ್ರಕಟಿಸಿಲ್ಲ.

ADVERTISEMENT

ಇಂತಹ ಸಂದರ್ಭದಲ್ಲಿ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (NCDC) ಜವಾಬ್ದಾರಿ ಮಹತ್ವದ್ದಾಗಬೇಕಿತ್ತು. ಆದರೆ ಕೋವಿಡ್-19‌ ಸಮಯದಲ್ಲಿ ಅದೇನು ಮಾಡುತ್ತಿದೆ ಅನ್ನೋದನ್ನ ತಜ್ಞರೊಬ್ಬರು ಪ್ರಶ್ನಿಸುತ್ತಾರೆ. ಜಾಗತಿಕ ಮಟ್ಟದಲ್ಲಿ CDC ಯಾವ ರೀತಿ ಸಾಂಕ್ರಾಮಿಕ ರೋಗದ ನಿಯಂತ್ರಣ ಜವಾಬ್ದಾರಿ ನಿರ್ವಹಿಸುತ್ತೋ, ಅದೇ ರೀತಿ ಭಾರತದಲ್ಲಿ ICMR ಆ ಕೆಲಸವನ್ನ ನಿರ್ವಹಿಸಬೇಕಿದೆ. ಅದಕ್ಕೆ ಪೂರಕವಾಗಿ NCDC ಕೆಲಸ ನಿರ್ವಹಿಸಬೇಕಿತ್ತು. ಆದರೆ ಅದೇ ಈ ಸಮಯದಲ್ಲಿ ಕಾರ್ಯನಿರ್ವಹಿಸದೇ ಕಣ್ಮರೆಯಾಗಿದೆ ಅನ್ನೋದಾಗಿ ತಜ್ಞರು ಅಚ್ಚರಿ ಪಡುತ್ತಾರೆ. ಕಳೆದ ಮೂರು ತಿಂಗಳ ಕೋವಿಡ್-19‌ ಹೋರಾಟದ ಸಮಯದಲ್ಲೂ NCDC ಇದುವರೆಗೂ ತನ್ನಲ್ಲಿರುವ ಅಂಕಿ ಅಂಶವನ್ನ ಶೇರ್‌ ಮಾಡಿಕೊಂಡಿದ್ದಾಗಲೀ, ಇಲ್ಲವೇ ಸಾಂಕ್ರಾಮಿಕ ರೋಗ ಕುರಿತ ಮೀಟಿಂಗ್‌ಗಳಲ್ಲಿ ಭಾಗವಹಿಸಿದ್ದಾಗಲೀ ಮಾಡಲಿಲ್ಲ ಎಂದು ICMR ನ ಓರ್ವ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

IDPS, 2004 ರಲ್ಲಿ SARS, ಸಿಂಡ್ರೋಮ್‌ ರೋಗಗಳ ಬಳಿಕ ಅಸ್ತಿತ್ವಕ್ಕೆ ಬಂತು. ಇದಕ್ಕೆ ವಿಶ್ವ ಬ್ಯಾಂಕ್‌ ದೇಣಿಗೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಅಥವಾ ಸೋಂಕಿನ ಮುನ್ಸೂಚನೆ ಬಗ್ಗೆ ಮಾಹಿತಿಯನ್ನ ಈ ಸಂಸ್ಥೆಯು ಕಲೆ ಹಾಕುತ್ತದೆ. ಇದನ್ನ ಭಾರತದಲ್ಲಿ NCDC ಅಡಿಯಲ್ಲಿ ತಂದು ರೋಗಗಳ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಘಟಕಗಳನ್ನ ಹೊಂದಿವೆ. ಅಲ್ಲದೇ NCDC ಕೂಡಾ ಆರಂಭದಲ್ಲಿ ಮಲೇರಿಯಾ, ಡೆಂಗ್ಯೂ ಮುಂತಾದ ರೋಗಗಳ ಅಂಕಿ ಅಂಶ ಕಲೆ ಹಾಕುವಲ್ಲಿ ಅತ್ಯಂತ ಯಶಸ್ವಿಯೂ ಆಗಿತ್ತು.

ಆದರೆ ಅದರಡಿಯಲ್ಲಿರುವ IDPS ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಅಂಕಿ ಅಂಶ ಕಲೆ ಹಾಕಿ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಬೇಕಿತ್ತು. ವಿಶೇಷವಾಗಿ IDPS ಏರ್‌ ಪೋರ್ಟ್‌, ಕ್ವಾರೆಂಟೈನ್‌ ಕೇಂದ್ರ ಹಾಗೂ ಇನ್ನಿತರ ಮೂಲಗಳಿಂದ ಮಾಹಿತಿ ಕಲೆ ಹಾಕಿ ಆರೋಗ್ಯ ಸಚಿವಾಲಯಕ್ಕೆ ನೀಡಿದರೆ, ಲ್ಯಾಬ್‌ಗಳಿಂದ ಬಂದ ವರದಿ ಆಧರಿಸಿ ICMR ತನ್ನ ವರದಿಯನ್ನ ಆರೋಗ್ಯ ಸಚಿವಾಲಯಕ್ಕೆ ನೀಡುತ್ತದೆ. ಹೀಗೆ ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟವಾಗಿ ಎರಡು ಮೂಲಗಳಿಂದ ರೋಗಿಗಳ ಅಂಕಿ ಅಂಶ ಹಾಗೂ ಇನ್ನಿತರ ಮಾಹಿತಿಗಳನ್ನ ಸಂಗ್ರಹಿಸುತ್ತದೆ. ಆದರೆ ಫೆಬ್ರವರಿ 2 ರ ನಂತರ IDPS ಯಾವೊಂದು ಅಂಕಿ ಅಂಶವನ್ನೂ ಬಹಿರಂಗಪಡಿಸಿಲ್ಲ.

ಇಷ್ಟೆಲ್ಲವೂ ಆದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯವನ್ನೇ ಪ್ರಶ್ನೆ ಮಾಡೇ ಮಾಡಲಾಗುತ್ತದೆ. ಅಂತೆಯೇ IDPS ಅಂಕಿ ಅಂಶ ಬಹಿರಂಗ ಪಡಿಸದೇ ಇರುವ ಕುರಿತು ಖುದ್ದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಹಾಜರಿದ್ದ ಸಭೆಯಲ್ಲಿಯೇ ಪ್ರಶ್ನೆ ಎತ್ತಲಾಯಿತು. ಮಾರ್ಚ್‌ 27 ರಂದು ಉನ್ನತ ಮಟ್ಟದ ಸಮಿತಿ ರಚಿಸಿದ ನಾಲ್ಕೇ ದಿನಗಳಲ್ಲಿ ನಡೆದ ಮೊದಲ ಸಭೆಯಲ್ಲಿಯೇ ಈ ಪ್ರಶ್ನೆ ಆರೋಗ್ಯ ಸಚಿವರಿಗೆ ಎದುರಾಯಿತು. ಆದರೆ ಆರೋಗ್ಯ ಸಚಿವರ ಪ್ರತಿಕ್ರಿಯೆ ಮಾತ್ರ ಅದನ್ನ ಸಮರ್ಥಿಸುವಂತೆ ಇತ್ತು. ಅವರು IDPS ದತ್ತಾಂಶವನ್ನ ಸಾರ್ವಜನಿಕಗೊಳಿಸಲು ಇಚ್ಛಿಸುವುದಿಲ್ಲ ಎಂದರು. ಇದನ್ನ ʼಆಂತರಿಕ ತಜ್ಞರುʼ ತಿಳಿಸಿದ್ದಾಗಿ ಹೇಳಿದ್ದಾರೆ. ಆದರೆ ಆಂತರಿಕ ತಜ್ಞರು ಯಾಕಾಗಿ NCDC ದತ್ತಾಂಶವನ್ನ ಬಹಿರಂಗಪಡಿಸಲು ಇಚ್ಛಿಸುತ್ತಿಲ್ಲ ಎಂದು ಹರ್ಷವರ್ಧನ್‌ ಕಾರಣ ತಿಳಿಸಿರಲಿಲ್ಲ ಎಂದು ಆ ಸಭೆಯಲ್ಲಿ ಭಾಗವಹಿಸಿದ್ದ ವಿಜ್ಞಾನಿಯೊಬ್ಬರು ʼಕಾರವಾನ್‌ʼ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆದರೆ ಈ ʼಆಂತರಿಕ ತಜ್ಞರುʼ ಯಾರು ಎನ್ನುವುದು ಗೊತ್ತಾಗಲೇ ಇಲ್ಲ ಅಂತಾ ತಜ್ಞರೊಬ್ಬರು ಹೇಳುತ್ತಾರೆ. ಏಕೆಂದರೆ ದೇಶದಲ್ಲಿ ICMR ಎಲ್ಲಾ ವಿಭಾಗಗಳನ್ನು ಹೊಂದಿದ್ದು, ಜೊತೆಗೆ ICMR ಅವುಗಳಿಗೆಲ್ಲ ಮುಂದಾಳತ್ವ ನೀಡುತ್ತಿದೆ. ಆದರೆ ಸರಕಾರದ ನಿರ್ಧಾರಗಳ ಮುಂದೆ ಅದು ಕೂಡಾ ʼರಬ್ಬರ್‌ ಸ್ಟ್ಯಾಂಪ್‌ʼನಂತೆ ಆಗಿಬಿಟ್ಟಿದೆ ಅನ್ನೋದು ತಜ್ಞರ ಮಾತು. ಅಲ್ಲದೇ IDPS ಹಾಗೂ ICMR ನಡುವೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಸಂವಹನ ನಡೆಯುತ್ತಿಲ್ಲ.

“ಎರಡೂ ಸಂಸ್ಥೆಗಳು (IDPS ಹಾಗೂ ICMR) ದತ್ತಾಂಶ ಕಲೆಹಾಕುವಲ್ಲಿ ತಮ್ಮದೇ ಮೂಲಗಳನ್ನ ಹೊಂದಿದ್ದಾರೆ. ಮಾತ್ರವಲ್ಲದೇ ಅಂತಹ ಅಧಿಕಾರವಿರುವ ಈ ಎರಡೂ ಸಂಸ್ಥೆಗಳು ತನ್ನಲ್ಲಿರುವ ಯಾವುದೇ ದತ್ತಾಂಶಗಳನ್ನು ಬಿಟ್ಟು ಕೊಡಬೇಕಿಲ್ಲ. ಆದರೆ ಸಾರ್ವಜನಿಕರಿಗೆ ಇಲ್ಲವೇ ಸಂಶೋಧಕರಿಗೆ ಈ ಅಂಕಿ ಅಂಶಗಳು ಸಿಗುತ್ತಿದ್ದರೆ, ಕರೋನಾ ಸೋಂಕು ಯಾವ ಹಂತದಲ್ಲಿದೆ ಮತ್ತು ಯಾವ ಹಂತ ತಲುಪೀತು ಅನ್ನೋದರ ಕುರಿತು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇದು NCDC ಹಾಗೂ ICMR ನಡುವಿನ ಸಾಂಸ್ಥಿಕ ಯುದ್ಧದಂತೆ ಭಾಸವಾಗುತ್ತಿದೆ” ಎಂದು ಇನ್ನೋರ್ವ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳುತ್ತಾರೆ.

ಮತ್ತೋರ್ವ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, NCDC ತನ್ನಲ್ಲಿರುವ ದತ್ತಾಂಶವನ್ನ ICMR ಗೆ ನೀಡುವ ಸಂಪ್ರದಾಯವಿದೆ. ಆದರೆ NCDC ಗೆ ICMR ಮಾಹಿತಿ ನೀಡಬೇಕಾಗಿಲ್ಲ. ಮಾತ್ರವಲ್ಲದೇ ತನ್ನ academic partners ಎನಿಸಿಕೊಂಡಿರುವ All India Institute of Medical Sciences ಹಾಗೂ ಇನ್ನಿತರ ಸಂಸ್ಥೆಗಳಿಗೂ ನೀಡುವಂತಿಲ್ಲ ಎನ್ನುತ್ತಾರೆ.

ಹೀಗಾಗಿ ದತ್ತಾಂಶವಿಲ್ಲದೇ ಪರೀಕ್ಷೆಗಳನ್ನ ನಡೆಸುವುದು ಅಸಾಧ್ಯದ ಮಾತು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಮಾತ್ರವಲ್ಲದೇ IDSP ತನ್ನ ದತ್ತಾಂಶಗಳನ್ನ ಯಾಕಾಗಿ ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ ಅಪ್ಲೋಡ್‌ ಮಾಡುತ್ತಿಲ್ಲ ಅನ್ನೋದಕ್ಕೆ ಇದುವರೆಗೂ ಖಚಿತ ಮಾಹಿತಿ ಲಭ್ಯವಾಗುತ್ತಿಲ್ಲ. ಕರೋನಾ ಸೋಂಕು ತಡೆಗಟ್ಟುವಲ್ಲಿ ಸರಕಾರ ಎದುರಿಸಿದ ಕೊರತೆಯೇ ಇಲ್ಲೂ ಎದುರಾಗಿದೆಯೇ ಅನ್ನೋ ಪ್ರಶ್ನೆಯನ್ನ ಸಹಜ ಮೂಡಿಸುವಂತೆ ಮಾಡಿದೆ.

Tags: ‌ ಕೋವಿಡ್-19Covid 19ICMRIDPSNCDCಎನ್‌ ಸಿಡಿಸಿಐಡಿಎಸ್‌ಪಿಐಸಿಎಂಆರ್
Previous Post

ಕೋವಿಡ್‌-19 ಮತ್ತು ಲಾಕ್‌ಡೌನ್‌ನ ಪ್ರಭಾವಗಳ ಕುರಿತಾಗಿ ಮಾಜಿ ಐಎಎಸ್‌ ಅಧಿಕಾರಿ ಶಶಿಕಾಂತ್ ಸೆಂಥಿಲ್‌

Next Post

ನನ್ನ ಬೆಳೆ ನನ್ನ ಹಕ್ಕು- ಸಿಎಂ BSY

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ನನ್ನ ಬೆಳೆ ನನ್ನ ಹಕ್ಕು- ಸಿಎಂ BSY

ನನ್ನ ಬೆಳೆ ನನ್ನ ಹಕ್ಕು- ಸಿಎಂ BSY

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada