• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ʼಸೋಶಿಯಲ್‌ ಡಿಸ್ಟೆನ್ಸ್‌ʼ ಅನ್ನೋದು ಶಾಪ ಎಂದು ಭಾವಿಸದಿರಿ

by
March 28, 2020
in ದೇಶ
0
ʼಸೋಶಿಯಲ್‌ ಡಿಸ್ಟೆನ್ಸ್‌ʼ ಅನ್ನೋದು ಶಾಪ ಎಂದು ಭಾವಿಸದಿರಿ
Share on WhatsAppShare on FacebookShare on Telegram

ಕರೋನಾ ಹೆಮ್ಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಸಾವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಶಿಖರದತ್ತ ಸಾಗುತ್ತಿದೆ. ಕರೋನಾ ವೈರಸ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಸಾಮಾನ್ಯ ಜನರು ಭಯಭೀತಗೊಂಡಿದ್ದಾರೆ. ಸರ್ಕಾರಗಳು ʼಸೋಶಿಯಲ್ ಡಿಸ್ಟೆನ್ಸ್ʼ ಮಾಡಿಕೊಂಡರೆ ಕರೋನಾ ವೈರಸ್ ಚೈನ್‌ ಲಿಂಕ್ ತುಂಡರಿಸುವ ಸಾಧ್ಯತೆ ಬಗ್ಗೆ ಮಾತಾಡುತ್ತಿದೆ. ಇದೊಂದೇ ಸದ್ಯಕ್ಕೆ ಕರೋನಾ ಮಹಾಮಾರಿ ತಡೆಯಲು ಇರುವ ಮಾರ್ಗ ಎನ್ನುವ ಕಾರಣಕ್ಕೆ ಇಡೀ ದೇಶವನ್ನೇ 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದಾರೆ. ಸರ್ಕಾರ ಮಾಡಿರುವ ಆದೇಶ ಮುರಿದು ಹೊರ ಪ್ರಪಂಚಕ್ಕೆ ಬರುವಂತಿಲ್ಲ. ಒಂದು ವೇಳೆ ಹೊರಗಡೆ ಅಡ್ಡಾಡಿದ್ರೆ ಪೊಲೀಸರಿಂದ ಪೆಟ್ಟು ತಿನ್ನುವ ಪರಿಸ್ಥಿತಿ ಇದೆ. ಮನೆಯಲ್ಲೂ ಸುಮ್ಮನೆ ಕೂರಲಾಗದೆ, ಹೊರಗಡೆ ಸುತ್ತಾಟ ಮಾಡಲೂ ಸಾಧ್ಯವಾಗದೆ ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಒತ್ತಡದಲ್ಲಿ ಸಾವಿಗೆ ಶರಣಾಗುತ್ತಿದ್ದಾರೆ. ಕೊಲೆ ಮಾಡುವ ಹಂತಕ್ಕೂ ಮುಂದಾಗುತ್ತಿದ್ದಾರೆ.

ADVERTISEMENT

ಭಾರತ ಬಡತನವನ್ನೇ ಹಾಸು ಹೊತ್ತು ಮಲಗಿದ್ದ ರಾಷ್ಟ್ರ. 21ನೇ ಶತಮಾನದಿಂದ ಈಚೆಗೆ ಭಾರತ ಮಧ್ಯಮ ವರ್ಗದ ಕಡೆಗೆ ಪ್ರಯಾಣ ಬೆಳೆಸಿದೆ. ಈಗಲೂ ಬಹುತೇಕ ಮಂದಿ ಜೀವನೋಪಾಯಕ್ಕಾಗಿ ಕೂಲಿಯನ್ನೇ ನಂಬಿ ಬದುಕುತ್ತಿದ್ದಾರೆ. ಕೆಳವರ್ಗದ ಜನರು ಕಷ್ಟಪಟ್ಟು ದುಡಿಯುವಾಗ ಸಾಕಷ್ಟು ದುಶ್ಚಟಗಳಿಗೆ ಪಾಲುದಾರ ಆಗಿರುತ್ತಾರೆ. ಇದೀಗ 21 ದಿನಗಳ ಕಾಲ ಇಡೀ ದೇಶವೇ ಲಾಕ್‌ಡೌನ್ ಎಂದಿರುವುದು ಕೂಲಿ ಕಾರ್ಮಿಕ ಜನರನ್ನು ನಿದ್ರೆಗೆಡಿಸಿದೆ. ಕಾಲ ಕಳೆಯುವುದಕ್ಕೆ ಪರ್ಯಾಯ ಮಾರ್ಗಗಳೇ ಕಾಣಿಸದೆ ಆತ್ಮಹತ್ಯೆ ಎಂದು ಕೂಪಕ್ಕೆ ಮುಂದಾಗುತ್ತಿದ್ದಾರೆ. ಕೇವಲ ಬಡವರು ಮಾತ್ರವಲ್ಲ ಶ್ರೀಮಂತರಲ್ಲದ ಮಧ್ಯಮ ವರ್ಗದ ಜನರೂ ಕೂಡ ತಮ್ಮ ದೈನಂದಿನ ಚಟಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಅಥವಾ ದಿನನಿತ್ಯ ನಡೆಸಿಕೊಂಡು ಬಂದಿರುವ ಕೆಲಸಗಳನ್ನು ಮಾಡಲಾಗದೆ ಮನಸ್ಸು ಕೆಡುತ್ತಿದೆ. ಮುಂದೇನು ಎನ್ನುವುದನ್ನು ಅರಿಯದೆ ಸಾವಿಗೆ ಶರಣಾಗುತ್ತಿದ್ದಾರೆ. ಇನ್ನೊಂದಿಷ್ಟು ಮಂದಿ ಕರೋನಾ ಹರಡುತ್ತೆ ಎನ್ನುವ ಭೀತಿಯಲ್ಲೇ ಮನೆಯಲ್ಲಿ ಮೈಮುದುರಿ ಕುಳಿತಿದ್ದಾರೆ. ಮನೆ ಜನರನ್ನೂ ಹೆದರಿಸುತ್ತಿದ್ದಾರೆ.

ಜನರನ್ನು ಸಾವಿನ ಕುಣಿಕೆಯಿಂದ ಪಾರು ಮಾಡಲು ಅಗತ್ಯ ಇರುವ ʼಸೋಶಿಯಲ್ ಡಿಸ್ಟೆನ್ಸ್ʼ ಮಾಡುವ ಏಕೈಕ ಉದ್ದೇಶದಿಂದ ಕೇಂದ್ರ ಸರ್ಕಾರ 21 ದಿನಗಳ ಕಾಲ ದೇಶವನ್ನು ಲಾಕ್‌ಡೌನ್ಮಾಡಿದೆ. ʼಮನೆಯಲ್ಲೇ ಇರಿ ಜೀವ ಉಳಿಸಿಕೊಳ್ಳಿʼ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಆದರೆ ಮನೆಯಲ್ಲಿ ಮಾನಸಿಕ ಕ್ಷೋಭೆಗೆ ತುತ್ತಾಗುತ್ತಿರುವ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿಕೊಳ್ತಿದ್ದಾರೆ. ಮಹಾರಾಷ್ಟ್ರದ ಕಾಂದಿವಳಿಯಲ್ಲಿ ತಮ್ಮ ಮಾತು ಕೇಳದೆ ಮನೆಯಿಂದ ಹೊರಕ್ಕೆ ಹೋಗಿದ್ದ ಎನ್ನುವ ಏಕೈಕ ಕಾರಣಕ್ಕೆ ಶುರುವಾದ ಜಗಳ ಹತ್ಯೆಯಲ್ಲಿ ಅಂತ್ಯವಾಗಿದೆ. 28 ವರ್ಷದ ದುರ್ಗೇಶ್ ಠಾಕೂರ್ ಎಂಬಾತನನ್ನು ರಾಜೇಶ್ ಠಾಕೂರ್ ಎಂಬಾತ ಹತ್ಯೆ ಮಾಡಿದ್ದಾನೆ. ಕಾಂದಿವಳಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ಲಾಕ್‌ಡೌನ್ಆದೇಶ ಉಲ್ಲಂಘನೆ ಮಾಡಿ ಪದೇ ಪದೇ ಮನೆಯಿಂದ ಹೊರಕ್ಕೆ ಹೋಗಿ ಬರುತ್ತಿದ್ದ. ಅದೇ ಕಾರಣಕ್ಕೆ ಜಗಳ ನಡೀತು. ಅತಿರೇಕಕ್ಕೆ ಹೋದಾಗ ಕರೋನಾ ಭಯದಲ್ಲಿ ಹತ್ಯೆ ಮಾಡಿದೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಕರೋನಾ ಆತಂಕದಿಂದ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಅಬ್ಬೆಟ್ಟು ಎಂಬಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 55 ವರ್ಷದ ಸದಾಶಿವ ಶೆಟ್ಟಿ ನೇಣಿಗೆ ಶರಣಾಗುವ ಮುನ್ನ ಕರೋನಾ ಭಯ ಹುಟ್ಟಿಸಿದೆ ಎಂದು ಪತ್ರ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಮೊನ್ನೆಯಷ್ಟೇ ಉಡುಪಿಯ ಬಹ್ಮಾವರದ ಉಪ್ಪೂರಿ ಗೋಪಾಲಕೃಷ್ಣ ಮಡಿವಾಳ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು. ಕೆಎಸ್ಆರ್ಟಿಸಿ ಬಸ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ಮಡಿವಾಳ, ಕರೋನಾ ಸುದ್ದಿಗಳ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ದೇಶವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ ಬಳಿಕ ಇನ್ನು ಮೂರ್ನಾಲ್ಕು ದಿನಗಳಿಗೆ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿವೆ. ಇಷ್ಟು ದಿನಗಳ ಕಾಲ ಸಂಗ್ರಹ ಮಾಡಿದ್ದ ವಸ್ತುಗಳು ಖಾಲಿಯಾಗುತ್ತ ಬಂದ ಬಳಿಕ ಮತ್ತೊಂದು ರೀತಿಯ ಸಂಕಷ್ಟಗಳು ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಖಿನ್ನತೆಯಿಂದ ಹೊರ ಬರುವ ಮಾರ್ಗಗಳನ್ನು ಜನರೇ ಆಯ್ಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಕರೋನಾ ವೈರಸ್ ಗೆ ಅಥವಾ ಕೇಂದ್ರ, ರಾಜ್ಯ ಸರ್ಕಾರಕ್ಕೆ ಶಾಪ ಹಾಕುತ್ತ ಕುಳಿತರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಕೇಂದ್ರ, ಅಥವಾ ರಾಜ್ಯ ಸರ್ಕಾರ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ನಮ್ಮ ಜೀವ ಉಳಿಸಿಕೊಳ್ಳುವ ಅನಿವಾರ್ಯತೆ ಇರುವ ಏಕೈಕ ಕಾರಣದಿಂದ ಎಲ್ಲವನ್ನೂ ಅನುಭವಿಸುವ ಅನಿವಾರ್ಯತೆಯೂ ಇದೆ. ಖಿನ್ನತೆಯಿಂದ ಹೊರ ಬರಲು ಏನು ಮಾಡಬೇಕು ಎನ್ನುವ ಬಗ್ಗೆ ಇಂದೇ ನಿರ್ಧಾರ ಮಾಡಿ. ಒಬ್ಬರೇ ಕುಳೀತು ಕರೋನಾ ಬಗ್ಗೆ ಯೋಚನೆ ಮಾಡಿದರೆ ಖಿನ್ನತೆ ಕಟ್ಟಿಟ್ಟ ಬುತ್ತಿ. ನ್ಯೂಸ್ ಚಾನಲ್‌ ಗಳನ್ನು ನೋಡಿದರೆ ಬದುಕುವುದೇ ಬೇಡ ಎನಿಸುತ್ತದೆ. ವಾಟ್ಸಪ್, ಫೇಸ್ಬುಕ್ ಕೂಡ ನಿಮ್ಮನ್ನು ಬದುಕಿಸುವ ಸಾಧ್ಯತೆ ಕಡಿಮೆ. ಎಲ್ಲೆಲ್ಲೂ ಭಯಹುಟ್ಟಿಸುವ ವರದಿಗಳೇ ಬರುತ್ತಿವೆ. ಹಾಗಾಗಿ ಮೊಬೈಲ್ ಹಾಗೂ ಸಿನಿಮಾಗಳು, ಮನರಂಜನೆ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಎಲ್ಲದರಿಂದಲೂ ಆದಷ್ಟು ಅಂತರ ಕಾಯ್ದುಕೊಳ್ಳಿ. ಮೊಬೈಲ್ ನಲ್ಲಿ ಓದುವ ಹವ್ಯಾಸ ಇದ್ದರೆ ಸಕಾರಾತ್ಮಕ ಸುದ್ದಿಗಳನ್ನಷ್ಟೇ ಓದಿ.

ಖಿನ್ನತೆಗೆ ಒಳಗಗಾಬೇಡಿ, ದುಡುಕಿನ ನಿರ್ಧಾರಗಳು ಬೇಡವೇ ಬೇಡ. ಸಾಧ್ಯವಾದಷ್ಟು ಕರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ. ನೀವು ಉಳ್ಳವರಾಗಿದ್ದರೆ, ಅನ್ನದ ಪೊಟ್ಟಣಗಳನ್ನು ಮಾಡಿಕೊಂಡು ಬೀದಿಯಲ್ಲಿ ಬಿದ್ದಿರುವ ನಿರ್ಗತಿಕರಿಗೆ ಕೊಟ್ಟು ಬನ್ನಿ. ʼಸೋಶಿಯಲ್ ಡಿಸ್ಟೆನ್ಸ್ʼ ಕಾಯ್ದುಕೊಂಡು ರಸ್ತೆಯಲ್ಲಿ ನಿಂತಿರುವ ಪೊಲೀಸರಿಗೂ ಆಹಾರ ಕೊಡಿ. ಉಳಿದ ಸಮಯದಲ್ಲಿ ಮನೆ ಮಂದಿಯೆಲ್ಲಾ ಕುಳಿತು ಆಟವಾಡಿ. ಎಲ್ಲರೂ ಸೇರಿಕೊಂಡು ಅಡುಗೆ ಮಾಡಿ. ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಿ. ಕರೋನಾ ಎಂಬ ಮಹಾಮಾರಿ ಬಂದಿದ್ದರಿಂದ ನಾನು ಪುಸ್ತಕ ಪ್ರೇಮಿಯಾದೆ ಎಂದಾದರೂ ಹೇಳಿಕೊಳ್ಳಬಹುದು. ಹೆಚ್ಚು ಜನರು ಸೇರುವ ಪ್ರದೇಶಕ್ಕೆ ಹೋಗದೆ, ಮನೆಯಲ್ಲೇ ಕುಳಿತು ಖಿನ್ನತೆಗೂ ಒಳಗಾಗದೆ, ನಿಮ್ಮ ವ್ಯಾಪ್ತಿಯಲ್ಲಿ ಏನೇನು ಮಾಡಬಹುದು ಎನ್ನುವುದನ್ನು ಒಮ್ಮೆ ಲಿಸ್ಟ್ ಮಾಡಿಕೊಳ್ಳಿ. ಅದರಲ್ಲಿ ಸಾಧ್ಯವಾಗಿದ್ದನ್ನು ಮಾಡುತ್ತಾ ಸಾಗಿ. ಮನಸ್ಸಿಗೂ ಖುಷಿ ಆಗುವಂತೆ ಮಾಡಿ. ಖಿನ್ನತೆಯನ್ನು ಓಡಿಸಿ, ಕರೋನಾ ತೊಲಗಿಸಿ. ಎಲ್ಲರೂ ಬದುಕಿದರೆ ನಾವು ಬದುಕೋಣ, ಇಲ್ಲದಿದ್ದರೆ ಬೇಡ ಎನ್ನುವ ದೃಢ ನಿರ್ಧಾರ ಕೈಗೊಳ್ಳಿ. ಕರೋನಾ ಬಗ್ಗೆ ಭಯ ಬೇಕಿಲ್ಲ.

Tags: Corona Outbreaknation lockdownsocial distanceಕರೋನಾ ವೈರಸ್‌ಭಾರತ ಲಾಕ್‌ಡೌನ್‌ಸಾಮಾಜಿಕ ಅಂತರ
Previous Post

ಸಜ್ಜಾಗದ ವೈದ್ಯಕೀಯ ವ್ಯವಸ್ಥೆಯ ನಡುವೆ ಕರೋನಾ ಸುನಾಮಿಗೆ ಕ್ಷಣಗಣನೆ ಆರಂಭ!

Next Post

ಕರೋನಾ ಸೋಂಕನ್ನೂ ಕೋಮುವಾದಿ ಅಜೆಂಡಾದ ಅಸ್ತ್ರ ಮಾಡಿಕೊಂಡ ಮಾಧ್ಯಮ!

Related Posts

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ
Top Story

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

by ಪ್ರತಿಧ್ವನಿ
December 13, 2025
0

ಅರ್ಜೆಂಟೀನಾದ ಫುಟ್‌ಬಾಲ್(Football)  ಮಾಂತ್ರಿಕ ಲೆಜೆಂಡ್‌ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಭೇಟಿ ನೀಡಿದ್ದಾರೆ. ಗೋಟ್ ಇಂಡಿಯಾ ಟೂರ್ 2025 (GOAT India Tour) ಅಡಿಯಲ್ಲಿ ಭಾರತ...

Read moreDetails

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025

ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ…!! ‌ ಯತೀಂದ್ರಗೆ ಕೌಂಟರ್‌ ನೀಡಿದ ಇಕ್ಬಾಲ್‌ ಹುಸೇನ್.

December 12, 2025
Next Post
ಕರೋನಾ ಸೋಂಕನ್ನೂ ಕೋಮುವಾದಿ ಅಜೆಂಡಾದ ಅಸ್ತ್ರ ಮಾಡಿಕೊಂಡ ಮಾಧ್ಯಮ!

ಕರೋನಾ ಸೋಂಕನ್ನೂ ಕೋಮುವಾದಿ ಅಜೆಂಡಾದ ಅಸ್ತ್ರ ಮಾಡಿಕೊಂಡ ಮಾಧ್ಯಮ!

Please login to join discussion

Recent News

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ
Top Story

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

by ಪ್ರತಿಧ್ವನಿ
December 13, 2025
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ
Top Story

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

by ಪ್ರತಿಧ್ವನಿ
December 13, 2025
Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ
Top Story

Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

by ಪ್ರತಿಧ್ವನಿ
December 13, 2025
ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ
Top Story

ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ

by ಪ್ರತಿಧ್ವನಿ
December 13, 2025
ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ
Health Care

ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ

by ನಾ ದಿವಾಕರ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada