• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದೆಹಲಿ ಹಿಂಸಾಚಾರ: ಪೊಲೀಸರಿಗೆ ಛೀಮಾರಿ ಹಾಕಿದ ಹೈಕೋರ್ಟ್

by
February 27, 2020
in ದೇಶ
0
ದೆಹಲಿ ಹಿಂಸಾಚಾರ: ಪೊಲೀಸರಿಗೆ ಛೀಮಾರಿ ಹಾಕಿದ ಹೈಕೋರ್ಟ್
Share on WhatsAppShare on FacebookShare on Telegram

ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿದ್ದು, ಮೂರು ದಿನಗಳ ಬಳಿಕವೂ ಈಶಾನ್ಯ ದೆಹಲಿಯಲ್ಲಿ ತ್ವೇಷಮಯ ವಾತಾವರಣ ಮುಂದುವರಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿಲ್ಲ.

ADVERTISEMENT

ಈ ನಡುವೆ ಹಿಂಸಾಚಾರ ನಿಯಂತ್ರಣ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ದ ಕ್ರಮಕ್ಕೆ ಮುಂದಾಗದ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈಕೋರ್ಟ್, ಪ್ರಚೋದನಕಾರಿ ಭಾಷಣದ ವೀಡಿಯೋಗಳನ್ನು ವೀಕ್ಷಿಸಿ, ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಪರ್ವೇಶ್ ವರ್ಮಾ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಅಭಯ್ ವರ್ಮಾ ವಿರುದ್ಧ ಈವರೆಗೆ ಎಫ್ ಐಆರ್ ದಾಖಲಿಸಿಲ್ಲ ಏಕೆ ಎಂದು ಪ್ರಶ್ನಿಸಿದೆ. ನಗರ ಹೊತ್ತಿ ಉರಿಯುತ್ತಿದ್ದರೂ, ಎಫ್ ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿಮಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲವೇ ಎಂದು ದೆಹಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸಾಮಾಜಿಕ ಹೋರಾಟಗಾರ ಹರ್ಷ್ ಮಂದರ್ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ಪೀಠದ ಈ ಪ್ರಶ್ನೆ, ಸಿಎಎ ವಿರೋಧಿ ಹೋರಾಟಗಾರರ ವಿರುದ್ಧದ ಆಡಳಿತಪಕ್ಷದ ದ್ವೇಷ ಮತ್ತು ಹಿಂಸೆಗೆ ಕುಮ್ಮಕ್ಕು ನೀಡುವ ಪ್ರಚೋದನಕಾರಿ ಕೃತ್ಯ ಮತ್ತು ಹೇಳಿಕೆಗಳ ವಿಷಯದಲ್ಲಿ ದೆಹಲಿ ಪೊಲೀಸರೂ ಪರೋಕ್ಷವಾಗಿ ಪಾಲುದಾರರು ಎಂಬ ಜನಸಾಮಾನ್ಯರ ಭಾವನೆಗೆ ಇಂಬು ನೀಡಿದಂತಾಗಿದೆ.

ಹಾಗೆಯೇ ನ್ಯಾಯಾಂಗದ ಕಣ್ಣೆದುರೇ ದೆಹಲಿಯಲ್ಲಿ ಮತ್ತೊಮ್ಮೆ 1984ರ ಸಿಖ್ ಹತ್ಯಾಕಾಂಡದಂತಹ ದುರ್ಘಟನೆ ಸಂಭವಿಸಲು ಬಿಡುವುದಿಲ್ಲ. ಜನರ ಜೀವಕ್ಕೆ ಸುರಕ್ಷತೆ ಮತ್ತು ಭದ್ರತೆ ಖಾತ್ರಿಪಡಿಸುವುದು ಸರ್ಕಾರದ ಹೊಣೆಗಾರಿಕೆ ಎಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. ಈ ನಡುವೆ, ಸುಪ್ರೀಂಕೋರ್ಟ್ ಕೂಡ ದೆಹಲಿ ಗಲಭೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಪೊಲೀಸರಿಗೆ ಕೆಲಸ ಮಾಡುವ ಸ್ವಾತಂತ್ರ್ಯ ಮತ್ತು ವೃತ್ತಿಪರತೆಯ ಕೊರತೆಯಿಂದಾಗಿ ಹಲವು ಜೀವಗಳನ್ನು ಕಳೆದುಕೊಳ್ಳುವಂತಾಗಿದ್ದು ದುರಾದೃಷ್ಟಕರ ಎಂದು ಸಾಂದರ್ಭಿಕವಾಗಿ ಅಭಿಪ್ರಾಯಪಟ್ಟಿದೆ. ಜೊತೆಗೆ, ದೆಹಲಿ ಹಿಂಸಾಚಾರದ ಬಗ್ಗೆ ನಿರ್ಣಯ ಅಂಗೀಕರಿಸಿರುವ ಸುಪ್ರೀಂಕೋರ್ಟ್ ವಕೀಲರ ಸಂಘ(ಬಾರ್ ಅಸೋಸಿಯೇಷನ್) ಕೂಡ ಗಲಭೆ ನಿಯಂತ್ರಿಸುವಲ್ಲಿ ಪೊಲೀಸರ ವೈಫಲ್ಯವನ್ನು ಖಂಡಿಸುವುದಾಗಿ ಹೇಳಿದೆ.

ಬೆಳಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ದೆಹಲಿ ಪೊಲೀಸರ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರು ಉದ್ದೇಶಪೂರ್ವಕವಾಗಿ ನಾಲ್ವರು ಬಿಜೆಪಿ ನಾಯಕರ ಹೇಳಿಕೆಯ ವೀಡಿಯೋಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ. ಆದರೆ, ಇಂತಹ ಪ್ರಚೋದನಕಾರಿ ಹೇಳಿಕೆಗಳು ಸಿಎಎ ವಿರೋಧಿಗಳ ಕಡೆಯಿಂದಲೇ ಬಂದಿವೆ. ಅಂತಹ ವೀಡಿಯೋಗಳನ್ನು ನಾನು ಇಲ್ಲಿ ಪ್ರದರ್ಶಿಸಿದರೆ ಅದು ಇನ್ನಷ್ಟು ಪ್ರಚೋದನಕ್ಕೆ ದಾರಿಮಾಡಿಕೊಡಲಿದೆ ಎಂದರು. ಆಗ, ನ್ಯಾ. ಎಸ್ ಮುರುಳೀಧರ್ ಮತ್ತು ನ್ಯಾ. ತಲ್ವಂತ್ ಸಿಂಗ್ ಅವರನ್ನೊಳಗೊಂಡ ಪೀಠ, ಎಸ್ ಜಿ ಅವರ ಈ ಹೇಳಿಕೆಯೇ ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿದ್ಧಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಎಂದು ಪರಿಗಣಿಸಿತು. “ಹೀಗೆ ಹೇಳುವ ಮೂಲಕ ನೀವು ಪೊಲೀಸರನ್ನು ತಪ್ಪಿತಸ್ಥರನ್ನಾಗಿ ಚಿತ್ರಿಸುತ್ತಿದ್ದೀರಿ. ಸ್ವತಃ ಎಸ್ ಜಿ ಅವರೇ ಈ ಹೇಳಿಕೆಗಳು ಪ್ರಚೋದನಕಾರಿ ಎಂದು ಪರೋಕ್ಷವಾಗಿ ಒಪ್ಪಿಕೊಂಡಿರುವಾಗ ಆ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಲು ನೀವು ಮೀನಾಮೇಷ ಎಣಿಸುತ್ತಿರುವುದು ಏಕೆ? ಇಡೀ ದೇಶ ಈ ಪ್ರಶ್ನೆಯನ್ನು ಕೇಳುತ್ತಿದೆ” ಎಂದು ನ್ಯಾ. ಮುರಳೀಧರ್ ಅವರು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಆಗ, ಇದು ಎಫ್ ಐ ಆರ್ ದಾಖಲಿಸಲು ಸಕಾಲವಲ್ಲ. ದೂರುದಾರರು ಈ ವೀಡಿಯೋಗಳನ್ನೇ ಏಕೆ ತಾವು ಉಲ್ಲೇಖಿಸಿದ್ದೇವೆ ಎಂಬುದಕ್ಕೆ ಕಾರಣ ನೀಡಿಲ್ಲ. ಹಾಗಾಗಿ ಎಫ್ ಐಆರ್ ದಾಖಲಿಸಲು ಸೂಕ್ತ ಸಮಯವಲ್ಲ ಎಂದು ಎಸ್ ಜಿ ಹೇಳಿದರು. ಆದರೆ, ಆ ವಾದಕ್ಕೆ ಸೊಪ್ಪುಹಾಕದ ನ್ಯಾಯಪೀಠ, ‘ಎಫ್ ಐಆರ್ ದಾಖಲಿಸಲು ಈಗ ಸಕಾಲವಲ್ಲ ಎಂದರೆ ಇನ್ನು ಯಾವಾಗ? ಗಲಭೆಯಲ್ಲಿ ಆಸ್ತಿಪಾಸ್ತಿ ನಷ್ಟದ ಬಗ್ಗೆ ನೀವು ಎಫ್ ಐಆರ್ ಹಾಕುತ್ತಿದ್ದೀರಲ್ಲವೆ? ಹಾಗಿರುವಾಗ ಈ ಹೇಳಿಕೆಗಳ ಕುರಿತು ಎಫ್ ಐಆರ್ ದಾಖಲಿಸಲು ಯಾಕೆ ಮುಹೂರ್ತ ನೋಡುತ್ತಿದ್ದೀರಿ” ಎಂದು ಖಾರವಾಗಿ ಪ್ರಶ್ನಿಸಿತು.

ವಿಚಾರಣೆ ನಡುವೆ ನ್ಯಾಯಾಲದಲ್ಲಿ ಹಾಜರಿದ್ದ ದೆಹಲಿ ಪೊಲೀಸ್ ಅಧಿಕಾರಿ, ತಾವು ಆ ಪ್ರಚೋದನಕಾರಿ ವೀಡಿಯೋಗಳನ್ನು ನೋಡಿಯೇ ಇಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಮರಳೀಧರ್, ನಿಮ್ಮ ಕಚೇರಿಯಲ್ಲಿ ಎಷ್ಟೊಂದು ಟಿವಿಗಳಿವೆ. ಆದರೂ ಈ ವೀಡಿಯೋಗಳನ್ನು ನೀವು ನೋಡಿಲ್ಲ ಎಂದರೆ ದೆಹಲಿ ಪೊಲೀಸರ ಸ್ಥಿತಿಯ ಬಗ್ಗೆ ಕನಿಕರ ಬರುತ್ತಿದೆ ಎಂದರು. ಬಳಿಕ ನ್ಯಾಯಾಲಯದಲ್ಲಿಯೇ ಕಪಿಲ್ ಮಿಶ್ರಾ ಪ್ರಚೋದನಕಾರಿ ಹೇಳಿಕೆಯ ವೀಡಿಯೋ ವೀಕ್ಷಣೆಗೆ ನ್ಯಾಯಾಧೀಶರು ಸೂಚಿಸಿದರು. ದೂರುದಾರ ಹರ್ಷ್ ಮಂದರ್ ಪರ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವೀಸ್, ಅವರು ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮತ್ತು ಅಭಯ್ ವರ್ಮಾ ಅವರ ಪ್ರಚೋದನಕಾರಿ ಹೇಳಿಕೆಗಳೂ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿವೆ ಎಂದು ನ್ಯಾಯಪೀಠದ ಗಮನಸೆಳೆದರು. ಬಳಿಕ ಆ ಮೂವರ ಹೇಳಿಕೆಗಳ ವೀಡಿಯೋಗಳನ್ನೂ ಕಲಾಪದಲ್ಲಿ ವೀಕ್ಷಿಸಿಸಲಾಯಿತು.

ಬಳಿಕ ವಿಚಾರಣೆಯನ್ನು ನಾಳೆಗೆ ಮುಂದೂಡಿದ ನ್ಯಾಯಪೀಠ, ಮತ್ತೊಂದು ಪೀಠಕ್ಕೆ ವಿಚಾರಣೆ ಮುಂದುವರಿಸಲು ಸೂಚಿಸಿತು ಮತ್ತು ಪ್ರಚೋದನಕಾರಿ ವೀಡಿಯೋಗಳ ಕುರಿತು ಎಫ್ ಐಆರ್ ದಾಖಲಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ದೆಹಲಿ ಪೊಲೀಸ್ ಕಮೀಷನರ್ ಗೆ ನಿರ್ದೇಶನ ನೀಡಿತು. ಹಾಗೆಯೇ ಈ ಪ್ರಕರಣದಲ್ಲಿ ತನ್ನನ್ನು ವಿಚಾರಣೆಯ ವ್ಯಾಪ್ತಿಗೆ ಪರಿಗಣಿಸಬೇಕು ಎಂಬ ಕೇಂದ್ರದ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ ಜಾರಿಗೊಳಿಸಿತು.

ಒಟ್ಟಾರೆ, ಬುಧವಾರ ನ್ಯಾಯಾಲಯದ ಮಧ್ಯಪ್ರವೇಶದ ಮೂಲಕ, ದೆಹಲಿಯ ಹಿಂಸಾಚಾರದ ಹಿಂದಿನ ವ್ಯಕ್ತಿಗಳು ಮತ್ತು ಅಂತಹವರ ವಿಷಯದಲ್ಲಿ ದೆಹಲಿ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತೆರೆದುಕೊಂಡಂತಾಯಿತು.

ಈ ನಡುವೆ ದೆಹಲಿಯಲ್ಲಿ ಕಣ್ಣಳತೆಯ ದೂರದಲ್ಲೇ ವ್ಯಾಪಕ ಹಿಂಸಾಚಾರ, ಮುಸ್ಲಿಮರ ಮೇಲಿನ ಮತೀಯ ಅಟ್ಟಹಾಸಗಳು ಮೇರೆ ಮೀರಿದ್ದರೂ ಮೂರು ದಿನಗಳಿಂದ ಆ ಬಗ್ಗೆ ಮೌನವಾಗೇ ಇದ್ದ ಪ್ರಧಾನಿ ಮೋದಿಯವರು, ಬುಧವಾರ ಟ್ವೀಟ್ ಮಾಡಿ, ಶಾಂತಿ ಕಾಪಾಡುವಂತೆ ಮತ್ತು ಪರಸ್ಪರ ಸಹೋದರಭಾವದಲ್ಲಿ ಸಹಬಾಳ್ವೆ ನಡೆಸುವಂತೆ ಜನತೆಗೆ ಬಹಿರಂಗ ಕರೆ ನೀಡಿದ್ಧಾರೆ. ಶಾಂತಿ ಮತ್ತು ಸೌಹಾರ್ದ ನಮ್ಮ ಯಾವತ್ತಿನ ಮೌಲ್ಯಗಳು ಎಂಬುದನ್ನು ಜನತೆ ಮರೆಯಬಾರದು ಎಂದು ಪ್ರಧಾನಿಗಳು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

Tags: Delhi Air PollutionDelhi PoliceDelhi ViolenceJustice Muralidharಕೇಂದ್ರ ಸಚಿವ ಅನುರಾಗ್ ಠಾಕೂರ್ದೆಹಲಿ ಹಿಂಸಾಚಾರನ್ಯಾ. ಮುರಳೀಧರ್ಹೈಕೋರ್ಟ್
Previous Post

ಆಪರೇಷನ್ ಡಾಲ್ಫಿನ್ ನೋಸ್: ದೇಶದ ಭದ್ರತೆಯೂ ಕೆಸರೆರಚಾಟದ ವಸ್ತುವಾಯಿತೆ?

Next Post

ದೆಹಲಿ ಪೋಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಧೀಶರನ್ನು ವರ್ಗಾಯಿಸಿದ ಮೋದಿ ಸರ್ಕಾರ

Related Posts

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ‘ಕರ್ನಾಟಕ ಹೆರಿಟೇಜ್ ಅಂಡ್‌ ಕಲ್ಚರಲ್‌ ಫೌಂಡೇಶನ್‌ ಸ್ಥಾಪನೆ : ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಘೋಷಣೆ
Top Story

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ‘ಕರ್ನಾಟಕ ಹೆರಿಟೇಜ್ ಅಂಡ್‌ ಕಲ್ಚರಲ್‌ ಫೌಂಡೇಶನ್‌ ಸ್ಥಾಪನೆ : ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಘೋಷಣೆ

by ಪ್ರತಿಧ್ವನಿ
September 2, 2026
0

- ಸರ್ಕಾರ, CSR, NRI ಹಾಗೂ ಸಾರ್ವಜನಿಕರ ಸಹಭಾಗಿತ್ವದ ಮೂಲಕ ಸಂರಕ್ಷಣೆಗೆ ಹೊಸ ಮಾದರಿ - ಐತಿಹಾಸಿಕ ಸ್ಮಾರಕಗಳು, ಪುರಾತತ್ವ ತಾಣಗಳು ಹಾಗೂ ವಸ್ತುಸಂಗ್ರಹಾಲಯಗಳಿಗೆ ಸುಸ್ಥಿರ ಹಣಕಾಸು...

Read moreDetails
ಡಿಜಿಟಲ್‌ ಭಾರತದಲ್ಲಿ ಮಹಿಳೆ-ಸ್ತ್ರೀ ಸಂವೇದನೆ

ಡಿಜಿಟಲ್‌ ಭಾರತದಲ್ಲಿ ಮಹಿಳೆ-ಸ್ತ್ರೀ ಸಂವೇದನೆ

September 2, 2026
ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

September 1, 2026
ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

September 1, 2026
543 – ಯಥಾಸ್ಥಿತಿಯಲ್ಲಿ ಏಕೆ ಉಳಿಯಬೇಕು?

543 – ಯಥಾಸ್ಥಿತಿಯಲ್ಲಿ ಏಕೆ ಉಳಿಯಬೇಕು?

August 31, 2026
Next Post
ದೆಹಲಿ ಪೋಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಧೀಶರನ್ನು ವರ್ಗಾಯಿಸಿದ ಮೋದಿ ಸರ್ಕಾರ

ದೆಹಲಿ ಪೋಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಧೀಶರನ್ನು ವರ್ಗಾಯಿಸಿದ ಮೋದಿ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada