• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Serial

ಸಿಎಂ ಡಿಕೆಶಿಗೆ ಜಮೀರ್‌ ಪತ್ರದ ಸಂಚಲನ : ವಿಜಯನಗರದ ಜವಾಬ್ದಾರಿ ಬೇಡವೆನ್ನಲು ವಸತಿ ಸಚಿವರ ಕಾರಣವೇನು..?

ವಿಜಯನಗರಕ್ಕೆ ಬಸವಂತಪ್ಪ ನೇಮಿಸಿದ ಸಿಎಂ ಡಿಕೆ ಶಿವಕುಮಾರ್..

ಪ್ರತಿಧ್ವನಿ by ಪ್ರತಿಧ್ವನಿ
August 14, 2026
in Serial, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಸಿಎಂ ಡಿಕೆಶಿಗೆ ಜಮೀರ್‌ ಪತ್ರದ ಸಂಚಲನ : ವಿಜಯನಗರದ ಜವಾಬ್ದಾರಿ ಬೇಡವೆನ್ನಲು ವಸತಿ ಸಚಿವರ ಕಾರಣವೇನು..?
Share on WhatsAppShare on FacebookShare on Telegram

ಬೆಂಗಳೂರು : ಖಾತೆಯ ಹಂಚಿಕೆಯ ಅಸಮಾಧಾನದ ನಡುವೆಯೇ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಆದೇಶವನ್ನು ತಿರಸ್ಕರಿಸಿದ್ದಾರೆ.

ADVERTISEMENT
Basangouda Patil Yatnal : ಸಿಎಂ ಡಿಕೆಶಿ ಈಗೀಗ ಹೆಚ್ಚು ಡೈಲಾಗ್‌ಗಳನ್ನು ಹೊಡೆಯುತ್ತಿದ್ದಾರೆ..!

ಆಗಸ್ಟ್‌ ೧೫ ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸುವ ಹೊಣೆಗಾರಿಕೆಯಿಂದ ಬಿಡುಗಡೆಗೊಳಿಸುವಂತೆ ಜಮೀರ್‌ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಜಮೀರ್‌ ಅಹ್ಮದ್‌ ಖಾನ್‌ ಅವರು ಕಾರಣ ನೀಡಿದ್ದು, ಜಿಬಿಎ ಸೇರಿದಂತೆ ಇತರ ಚುನಾವಣೆಗಳಲ್ಲಿ ಪಕ್ಷವನ್ನು ಬಲ ಪಡಿಸುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪತ್ರದ ಸಾರಾಂಶದಲ್ಲೇನಿದೆ..?

ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಬರೆದ ಪತ್ರದಲ್ಲಿ ಜಮೀರ್‌ ಅಹ್ಮದ್‌ ಖಾನ್‌, ದಿನಾಂಕ 11.08.2026 ರ ಆದೇಶದನ್ವಯ ನನ್ನನ್ನು ವಿಜಯನಗರ ಜಿಲ್ಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಹೊಣೆಗಾರಿಕೆಯನ್ನು ನೀಡಿರುವುದು ಸರಿಯಷ್ಟೇ. ಆದರೆ, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಬಿಎಂಪಿ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆ ಉಪಚುನಾವಣೆ ಹಾಗೂ ಪಕ್ಷ ಸಂಘಟನೆಯ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ನಿಭಾಯಿಸಲು ಸಮಯದ ಅಭಾವ ಇರುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಆದುದರಿಂದ ನನಗೆ ರಾಜ್ಯದ ಯಾವುದೇ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ನೀಡದಂತೆ ತಮ್ಮಲ್ಲಿ ಕೋರುತ್ತೇನೆ. ಮುಂದುವರೆದಂತೆ ದಿನಾಂಕ: 15.08.2026 ರಂದು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಹೊಣೆಗಾರಿಕೆ ನೀಡಿದ್ದು, ನಾನು ಹಾಜರಾಗಲು ಸಾಧ್ಯವಾಗದ ಕಾರಣ ಅದರಿಂದ ವಿನಾಯಿತಿ ನೀಡಲು ತಮ್ಮಲ್ಲಿ ಕೋರಲಾಗಿದೆ. ಇನ್ನು ಸದರಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವ ಹೊಣೆಗಾರಿಕೆಯನ್ನು ನೀಡಲಾಗಿದ್ದು, ಈಗಾಗಲೇ ಈ ಸಂಬಂಧ ವರದಿಯನ್ನು ಸಲ್ಲಿಸಲಾಗಿರುತ್ತದೆ” ಎಂದು ಜಮೀರ್ ಅವರು ತಮ್ಮ ಪತ್ರದಲ್ಲಿ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಕೋರಿದ್ದಾರೆ.

ವಿಜಯನಗರಕ್ಕೆ ಬಸವಂತಪ್ಪ..

ಹೀಗಾಗಿ ಜಮೀರ್‌ ಮನವಿಗೆ ಸ್ಪಂದಿಸಿರುವ ಸಿಎಂ ಡಿಕೆ ಶಿವಕುಮಾರ್‌ ತಕ್ಷಣವೇ ನೂತನ ಆದೇಶ ಹೊರಡಿಸಿದ್ದಾರೆ. ಅದರ ಪ್ರಕಾರ, ಈ ಹಿಂದೆ ಉಡುಪಿ ಜಿಲ್ಲೆಯ ಧ್ವಜಾರೋಹಣಕ್ಕೆ ನಿಯೋಜನೆಗೊಂಡಿದ್ದ ಮುಜರಾಯಿ ಸಚಿವ ಬಸವಂತಪ್ಪ ಅವರನ್ನು ವಿಜಯನಗರ ಜಿಲ್ಲೆಗೆ ಧ್ವಜಾರೋಹಣಕ್ಕೆ ವರ್ಗಾಯಿಸಲಾಗಿದೆ. ಅಲ್ಲದೆ ಬಸವಂತಪ್ಪ ಅವರ ಜಾಗತಕ್ಕೆ ಉಡುಪಿ ಜಿಲ್ಲೆಯ ಧ್ವಜಾರೋಹಣದ ಜವಾಬ್ದಾರಿಯನ್ನು ಆಹರಾ ಸಚಿವ ಸಚಿವ ರಿಜ್ವಾನ್ ಅರ್ಷದ್ ಅವರನ್ನು ನೇಮಕ ಮಾಡುವ ಮೂಲಕ ಮುಖ್ಯಮಂತ್ರಿಯವರು ಆದೇಶ ಹೊರಡಿಸಿದ್ದಾರೆ.

Previous Post

ಸಂಸತ್‌ ಗದ್ದಲ:ಪ್ರಶ್ನೋತ್ತರ ವೇಳೆಯೇ ರದ್ದು! ದೇಶಕ್ಕಾಗುವ ನಷ್ಟವೇಷ್ಟು?

Next Post

ಶ್ರೀನಿವಾಸ ಮಾನೆಗೆ ಡಿಕೆಶಿ ಬಿಗ್‌ ಗಿಫ್ಟ್‌ : ಯುವ ಶಾಸಕನಿಗೆ ಮಹತ್ವದ ಸ್ಥಾನ ನೀಡಿದ ಸಿಎಂ..!

Related Posts

ಅರ್ಮಾನ್ ಮಲ್ಲಿಕ್ ದನಿಯಲ್ಲಿ “ರಾಶಿ” ಸಾಂಗ್‌ ಬಂತು
ಕರ್ನಾಟಕ

ಅರ್ಮಾನ್ ಮಲ್ಲಿಕ್ ದನಿಯಲ್ಲಿ “ರಾಶಿ” ಸಾಂಗ್‌ ಬಂತು

by ಪ್ರತಿಧ್ವನಿ
August 14, 2026
0

ಬೆಂಗಳೂರು: ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ ಅವರು ನಿರ್ಮಿಸಿರುವ , ವಿಜಯ್ ಪಾಳೇಗಾರ್ ನಿರ್ದೇಶಿಸಿರುವ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್...

Read moreDetails
ಶಾಸಕರ ತೀವ್ರ ವಿರೋಧ, ಡಿಕೆಶಿಗೆ ಮುಜುಗರ : ಈ ಗಂಭೀರ ಆದೇಶ ವಾಪಸ್‌ಗೆ ಸಿಎಂ ಸೂಚನೆ

ಶಾಸಕರ ತೀವ್ರ ವಿರೋಧ, ಡಿಕೆಶಿಗೆ ಮುಜುಗರ : ಈ ಗಂಭೀರ ಆದೇಶ ವಾಪಸ್‌ಗೆ ಸಿಎಂ ಸೂಚನೆ

August 14, 2026
ಅಂದು ಕಾರ್ ಕಾರ್‌ ಹಿಟ್ ಸಾಂಗು ಇಂದು ರನ್ ರನ್ ಸಾಂಗು!

ಅಂದು ಕಾರ್ ಕಾರ್‌ ಹಿಟ್ ಸಾಂಗು ಇಂದು ರನ್ ರನ್ ಸಾಂಗು!

August 14, 2026
NAB IFFM Awards Night 2026: ಕನ್ನಡ ನಟ ರಿಷಭ್ ಶೆಟ್ಟಿಗೆ ಗೌರವ

NAB IFFM Awards Night 2026: ಕನ್ನಡ ನಟ ರಿಷಭ್ ಶೆಟ್ಟಿಗೆ ಗೌರವ

August 14, 2026
‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

August 14, 2026
Next Post
ಶ್ರೀನಿವಾಸ ಮಾನೆಗೆ ಡಿಕೆಶಿ ಬಿಗ್‌ ಗಿಫ್ಟ್‌ : ಯುವ ಶಾಸಕನಿಗೆ ಮಹತ್ವದ ಸ್ಥಾನ ನೀಡಿದ ಸಿಎಂ..!

ಶ್ರೀನಿವಾಸ ಮಾನೆಗೆ ಡಿಕೆಶಿ ಬಿಗ್‌ ಗಿಫ್ಟ್‌ : ಯುವ ಶಾಸಕನಿಗೆ ಮಹತ್ವದ ಸ್ಥಾನ ನೀಡಿದ ಸಿಎಂ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada