ಬೆಂಗಳೂರು : ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (Enforcement Directorate) ದಾಳಿ ನಡೆಸಿದೆ. ಬೆಂಗಳೂರಿನ ಅಶೋಕನಗರದಲ್ಲಿರುವ ಹ್ಯಾರಿಸ್ ನಿವಾಸ ಹಾಗೂ ಮೊಹಮ್ಮದ್ ನಲಪಾಡ್ ಮನೆಯ ಮೇಲೆ ದಾಳಿ ನಡೆದಿದೆ. ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

ಸಿಆರ್ಪಿಎಫ್ ಪೊಲೀಸರ ಭದ್ರತೆಯಲ್ಲಿ ಅಶೋಕನಗರದ ಶಾಸಕ ಹ್ಯಾರೀಸ್ ನಿವಾಸದಲ್ಲಿ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು, ಹ್ಯಾಕರ್ ಶ್ರೀಕಿ ಜೊತೆಗೆ ಹ್ಯಾರೀಸ್ ಪುತ್ರ ನಲಪಾಡ್ ಆರ್ಥಿಕ ವ್ಯವಹಾರದ ನಂಟಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಪ್ರಮುಖವಾಗಿ ಶ್ರೀಕಿ ಶ್ರೀಕೃಷ್ಣ ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಆಗಿದ್ದಾನೆ. ಕೋಟಿ ಕೋಟಿ ಮೌಲ್ಯದ ಕ್ರಿಪ್ಟೋಕರೆನ್ಸಿ ಕಳ್ಳತನ ಮತ್ತು ಹ್ಯಾಕಿಂಗ್ ಮಾಡಿದ್ದ ಶ್ರೀಕಿ ಅಂತಾರಾಷ್ಟ್ರೀಯ ಹ್ಯಾಕರ್ ಆಗಿದ್ದಾನೆ. ಖ್ಯಾತ ಬಿಟ್ಫೈನೆಕ್ಸ್ (Bitfinex) ಹಾಗೂ ಯುನೋಕಾಯಿನ್ (Unocoin) ತರಹದ ಎಕ್ಸ್ಚೇಂಜ್ಗಳನ್ನು ಹ್ಯಾಕ್ ಮಾಡಿದ್ದನು ಎಂಬ ಆರೋಪವೂ ಇದೆ. ಇನ್ನೂ ಈತನು ನೂರಾರು ಬಿಟ್ಕಾಯಿನ್ಗಳನ್ನು ಕದ್ದು, ಪ್ರಭಾವಿಗಳಿಗೆ ಮಾರಾಟ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ. ಕಳೆದ 2017 ರಲ್ಲಿ ಯುನೋಕಾಯಿನ್ (Unocoin) ಹ್ಯಾಕಿಂಗ್ ಮೂಲಕ ಸುಮಾರು 60.6 ಬಿಟ್ಕಾಯಿನ್ಗಳ ಕಳ್ಳತನ ಮಾಡಿದ್ದ. ಅಲ್ಲದೆ ಬಿಟ್ ಫೈನೆಕ್ಸ್ ( Bitfinex )ಎಂಬ ಅಂತರರಾಷ್ಟ್ರೀಯ ಎಕ್ಸ್ಚೇಂಜ್ನಿಂದ 400 ಬಿಟ್ಕಾಯಿನ್ಗಳನ್ನು ಕದ್ದಿರುವುದಾಗಿಈ ಹಿಂದೆ ಶ್ರೀಕಿ ಒಪ್ಪಿಕೊಂಡಿದ್ದನು.
ಇದನ್ನೂ ಓದಿ : ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್ ಬೆಂಬಲಿಸಿ : ತಮಿಳಿಗರಿಗೆ ಮೋಹನ್ ಕೊಂಡಜ್ಜಿ ಕರೆ
ಶ್ರೀಕಿ ಬಂಧಿಸಿದ್ದ ಸಿಸಿಬಿ..
ಅಲ್ಲದೆ ತಾನು ಕದ್ದ ಬಿಟ್ಕಾಯಿನ್ಗಳನ್ನು ‘ಘೋಸ್ಟ್ ಪ್ರೊಟೊಕಾಲ್’ ಮೂಲಕ ಅಡಗಿಸಿಟ್ಟಿದ್ದ ಶ್ರೀಕಿ, ಆ ಬಳಿಕ ವರ್ಗಾವಣೆ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಸಿಸಿಬಿ, ಸಿಐಡಿ ಈಗ ಎಸ್ ಐ ಟಿ ತನಿಖೆ ಜಾರಿಯಲ್ಲಿದೆ. ಶ್ರೀಕಿಯನ್ನ ಅರೆಸ್ಟ್ ಮಾಡಿ ಸಿಸಿಬಿ ಕೋಕಾ ಕಾಯ್ದೆಯನ್ನೂ ಜಾರಿಗೊಳಿಸಿತ್ತು.
ಈ ಪ್ರಕರಣದ ತನಿಖೆ ಕರ್ನಾಟಕ ಪೊಲೀಸರು ದಾಖಲಿಸಿದ ಅನೇಕ ಎಫ್ಐಆರ್ಗಳು ಮತ್ತು ಚಾರ್ಜ್ಶೀಟ್ಗಳ ಆಧಾರದ ಮೇಲೆ ನಡೆಯುತ್ತಿದೆ. ಮುಖ್ಯವಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೆಬ್ಸೈಟ್ಗಳ ಹ್ಯಾಕಿಂಗ್, ಬಿಟ್ಕಾಯಿನ್ ಕಳವು, ದಬ್ಬಾಳಿಕೆ (extortion) ಹಾಗೂ Narcotic Drugs and Psychotropic Substances Act, 1985 ಉಲ್ಲಂಘನೆಗಳಿಗೆ ಸಂಬಂಧಿಸಿದೆ ಆರೋಪಗಳು ಈತನ ಹೆಚ್ಚಾಗಿವೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಚಾರಣೆ..?
ಈತನ ವಿಚಾರದಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕಾಗುತ್ತದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿಯೂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. (Prevention of Money Laundering Act) 2002ರ ಕಾಯ್ದೆಯ ಅಡಿಯಲ್ಲಿ ನಡೆದ ತನಿಖೆಯ ವಿಧಾನವನ್ನು ನೋಡಿದಾಗ ಹಂತ ಹಂತದಲ್ಲೂ ಆರೋಪಿಯ ಚಲನವಲನಗಳ ಮೇಲೆ ನಿಗಾ ಇಟ್ಟಿರುತ್ತದೆ ಅಧಿಕಾರಿಗಳ ತಂಡ (modus operandi) . ಹೀಗಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ತನಿಖಾ ಪ್ರಕ್ರಿಯೆ ಹೇಗಿರುತ್ತದೆ ಎಂದು ಅರಿತುಕೊಂಡಾಗ.

- ವೆಬ್ಸೈಟ್ಗಳು/ವಾಲೆಟ್ಗಳನ್ನು ಹ್ಯಾಕ್ ಮಾಡಿ ವರ್ಚುವಲ್ ಡಿಜಿಟಲ್ ಆಸ್ತಿಗಳನ್ನು (VDAs) ಕಳವು ಮಾಡುವುದು (ಅಪರಾಧದ ಆದಾಯ). ಇದರ ಬಗ್ಗೆಯೂ ಕೂಲಂಕುಷ ತನಿಖೆಯಾಗುತ್ತದೆ.
- ಅಲ್ಲದೆ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಡೇಟಾ/ಹಣ ಕಳವು ಮಾಡುವುದು (ಅಪರಾಧದ ಆದಾಯ), ಕಳುವಾದ VDAs ಅನ್ನು ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್ಫಾರ್ಮ್ಗಳ ಮೂಲಕ ಮಾರಾಟ ಮಾಡುವುದು (Routing). ಇದರ ಕುರಿತೂ ಅಧಿಕಾರಿಗಳಿಂದ ತೀವ್ರ ಮಾಹಿತಿ ಕಲೆ ಹಾಕಲಾಕಲಾಗುತ್ತದೆ.
- ಇನ್ನೂ ಮಾರಾಟದಿಂದ ಬಂದ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡುವುದು (Layering), ಆ ಹಣವನ್ನು ಶ್ರೀಕೃಷ್ಣ ಮತ್ತು ಅವರ ಸಹಚರರು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದು ಸೇರಿದಂತೆ ನಾನಾ ಆಯಾಮಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಯುತ್ತಿದೆ.
ಕೇಸ್ ಇರೋದು ಶ್ರೀಕಿ ಮೇಲೆ ಹ್ಯಾರಿಸ್ ಮನೆ ಮೇಲ್ಯಾಕೆ ದಾಳಿ..?
ಇಂದು ಬೆಳಂಬೆಳಿಗ್ಗೆ ಇಡಿ ಅಧಿಕಾರಿಗಳು ಬೆಂಗಳೂರಿನ ಶಾಂತಿ ನಗರದ ಶಾಸಕ ಎನ್.ಎ.ಹ್ಯಾರಿಸ್ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಅಲ್ಲದೆ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪ್ಪಾಡ್ ಮನೆ ಮೇಲೂ ದಾಳಿಯಾಗಿದೆ. ಆದರೆ ಇಡಿ ದಾಳಿಗೂ ನಲಪ್ಪಾಡ್ಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಅಸಲಿಗೆ ನಲಪ್ಪಾಡ್ ಹ್ಯಾಕರ್ ಶ್ರೀಕಿ ಜೊತೆಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳಂಬೆಳಿಗ್ಗೆ ಹ್ಯಾರಿಸ್ ಮನೆ ಬಾಗಿಲು ತಟ್ಟಿದ್ದಾರೆ. ದಾಳಿಯ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಿದೆ.
ನನಗೆ ಇದರ ಬಗ್ಗೆ ಏನೂ ಗೊತ್ತಿಲ್ಲಾ..
ಇನ್ನೂ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದು, ಇದರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.






