ನಾಡಹಬ್ಬ ದಸರಾಗೆ (Dasara 2025) ಇಂದು ಅಧಿಕೃತ ಚಾಲನೆ ದೊರೆತಿದೆ. ಇಂದು ಬೆಳಿಗ್ಗೆ 10.30 ರ ಶುಭ ಲಗ್ನದಲ್ಲಿ ತಾಯಿ ಚಾಮುಂಡಿಯ ಮೂರ್ತಿಗೆ ಸಿಎಂಸಿದ್ದರಾಮಯ್ಯ, ಸಚಿವ ಹೆಚ್.ಸಿ ಮಹದೇವಪ್ಪ ಹಾಗೂ ಅತಿಥಿ ಬಾನು ಮುಷ್ತಾಕ್ (Banu mushtaq) ಅವರು (Chamundi goddess) ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನವರಾತ್ರಿಯ (Navarathri) ಪೂಜೆಗಳಿಗೆ ಚಾಲನೆ ನೀಡಿದ್ದಾರೆ.

ಆ ಮೂಲಕ ಹಲವಾರು ವಿರೋಧ ಮತ್ತು ಟೀಕೆಗಳ ನಡುವೆಯೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಾನು ಮುಷ್ತಾಕ್ ಅವರ ಮೂಲಕವೇ ದಸರಾ ಉದ್ಘಾಟನೆ ಮಾಡಿಸಿದ್ದಾರೆ. ಈ ವೇಳೆ ಮಾತನಾಡಿದ ಬಾನು ಮುಷ್ತಾಕ್ ಅವರು, ತಾಯಿ ಚಾಮುಂಡಿಯೇ ಸರ್ಕಾರದ ಮೂಲಕ ನನ್ನನ್ನು ಕರೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಹಿಂದೂ-ಮುಸ್ಲಿಂ ಭಾವೈಕ್ಯತೆ, ಸಾಮರಸ್ಯ ನಮ್ಮ ಶಕ್ತಿ, ಆರ್ಥಿಕತ್ರ ನಮ್ಮ ರೆಕ್ಕೆ. ಸೌಹಾರ್ದತೆಯ ಮೂಲಕ ಮಾತ್ರವೇ ಪ್ರಗತಿ ಸಾಧ್ಯ, ಆಕಾಶ ಯಾರನ್ನೂ ದೂರುವುದಿಲ್ಲ.. ಭೂಮಿ ಯಾರನ್ನೂ ಬೇರ್ಪಡಿಸುವುದಿಲ್ಲ.. ಹೀಗಾಗಿ ಬೇಧ ಭಾವ ಸಲ್ಲದು ಎಂದಿದ್ದಾರೆ.





