ರಾಜ್ಯದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ದೇ ಒಂದು ಕಥೆ ಆದ್ರೆ, ಜೆಡಿಎಸ್ ದೇ ಮತ್ತೊಂದು ಕಥೆ, ಈ ಎರಡು ಪಕ್ಷಕ್ಕಿಂತ ಬಿನ್ನವಾದ ಗೊಂದಲ ಬಿಜೆಪಿ ಪಕ್ಷದಲ್ಲಿ ಇದೆ. ಹೌದು ಬಿಜೆಪಿ ಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಇದೀಗ ಶುರುವಾಗಿದೆ. ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಮುಂದುವರಿಸಬೇಕೆ ಅಥವಾ ಬೇರೆಯವರನ್ನು ಆಯ್ಕೆ ಮಾಡಬೇಕೆ ಎಂಬ ಚರ್ಚೆಗಳು ಬಿರುಸು ಗೊಂಡಿದೆ.

ಈ ನಡುವೆ ಬಿ.ವೈ. ವಿಜಯೇಂದ್ರ ಅವರು ದಿಢೀರನೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿ ವಾಪಸ್ ಆಗಿದ್ದಾರೆ. ಆದ್ರೆ ಆರ್. ಅಶೋಕ್ (R Ashok) ಮಾತ್ರ ಹೈಕಮಾಂಡ್ ಬೇಟಿಗೆ ಹೋಗಿ ಇನ್ನು ಬೆಂಗಳೂರಿಗೆ ವಾಪಸ್ ಆಗಿಲ್ಲ. ಒಟ್ಟಿನಲ್ಲಿ ಆರ್. ಅಶೋಕ್ ಬರುವಾಗ ಯಡಿಯೂರಪ್ಪ (B S yediyurappa) ಅವರಿಗೆ ಸಿಹಿ ಸುದ್ದಿ ತರುತ್ತಾರೋ ಅಥವಾ ಕಹಿ ಸುದ್ದಿ ತರುತ್ತಾರೋ ಕುತೂಹಲ ಮೂಡಿಸಿದೆ.
ರಾಜ್ಯಾಧ್ಯಕ್ಷ ಸ್ಥಾನ ಬದಲಾಗಲೇ ಬೇಕು:

ಬಿಜೆಪಿಯಲ್ಲಿ ಬಿ.ವೈ. ವಿಜಯೇಂದ್ರ ಅವರ ವಿರೋಧಿ ಬಣ ವಿಜಯೇಂದ್ರ ಅವರನ್ನು ಶತಾಯಗತಾಯ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲೇ ಬೇಕು, ಆ ಸ್ಥಾನಕ್ಕೆ ಸಮಥ ನಾಯಕನ ಆಯ್ಕೆ ಆಗಬೇಕು ಎಂಬ ಸಂದೇಶವನ್ನು ಹೈಕಮಾಂಡ್ಗೆ ದೂರಿದ್ದಾರೆ. ಸದಾನಂದ ಗೌಡರು ಈಗಾಗಲೇ ದೆಹಲಿ ನಾಯಕರನ್ನು ಭೇಟಿ ಮಾಡಿ ರಾಜ್ಯಾಧ್ಯಕ್ಷ ಸ್ಥಾನವನ್ನ ವಿಜಯೇಂದ್ರ ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ನ ಲಂಚಹಗರಣ ಬಯಲಿಗೆ ಎಳೆಯುವಲ್ಲಿ, ಹೋರಾಟದ ನಿಟ್ಟಿನಲ್ಲಿ, ಸಂಘನಾತ್ಮಕವಾಗಿ ಸೋತಿದ್ದಾರೆ ಹಾಗಾಗಿ ವಿಜಯೇಂದ್ರ ಬದಲಿ ರಾಜ್ಯಾದ್ಯಕ್ಷ ಸ್ಥಾನ ನೇಮಕ ಆಗಲೇ ಬೇಕು ಎಂದು ದೆಹಲಿ ನಾಯಕರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಅತೃಪ್ತರ ಬಣ, ತಟಸ್ಥ ಬಣಗಳ ಕಿತ್ತಾಟ:
ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ಗೊಂದಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಿ.ವೈ. ವಿಜಯೇಂದ್ರ ನಾಯಕತ್ವವವನ್ನು ಒಪ್ಪಲು ನಾವು ಸಿದ್ದರಿಲ್ಲ, ಸಂಘಟನಾತ್ಮಕವಾಗಿ ಅವರು ವಿಫಲರಾಗಿದ್ದಾರೆ ಹಾಗಾಗಿ ಅಧ್ಯಕ್ಷಸ್ಥಾನದಿಂದ ಅವರನ್ನು ಕೆಳಗೆ ಇಳಿಸಿ ಎಂದು ಅತೃಪ್ತರ ಬಣ ಪಟ್ಟು ಹಿಡಿದಿದೆ. ಇದಕ್ಕೆ ತಟಸ್ಥ ಬಣ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ತಿಳಿದು ಬಂದಿದೆ..

ಆದರೆ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.