
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಲ್ಲಿಯೇ ಇದ್ರು ಕನ್ನಡಿಗರ ಪರ ನಿಲ್ಲಲ್ಲ. ದಿನೇಶ್ ಗುಂಡೂರಾವ್ ಬಳಿಕ ಲಕ್ಷ್ಮಿ ಹೆಬ್ಬಾಳ್ಕಾರ್ ಕನ್ನಡಿಗರ ಪರ ಇಲ್ಲ ಅಂತ ಹೇಳಿದ್ದೆ. ಆಗ ಡಿಕೆ ಶಿವಕುಮಾರ್ ಆ ರೀತಿ ಅಲ್ಲ ಅಂತ ಸರ್ರನೆ ಹೇಳಿಕೊಂಡು ಬಂದ. ಆಗ ನಾನು ಏಯ್ ಡಿಕೆ ಶಿವಕುಮಾರ್ ಸುಮ್ನೆ ಇರಯ್ಯ ಅಂತ ಹೇಳಿದ್ದೆ ಎಂದಿದ್ದಾರೆ ವಾಟಾಳ್ ನಾಗರಾಜ್.

ಕನ್ನಡ ಒಕ್ಕೂಟದಿಂದ ಮಾರ್ಚ್ 3ಕ್ಕೆ ರಾಜಭವನ ಮುತ್ತಿಗೆ ಹಾಕ್ತೇವೆ ಎಂದಿರುವ ವಾಟಾಳ್ ನಾಗರಾಜ್, ಮಾರ್ಚ್ 7 ರಂದು ಬೆಳಗಾವಿ ಚಲೋ, ಮಾರ್ಚ್ 11 ರಂದು ಮೇಕೆದಾಡಿಗಾಗಿ ಅತ್ತಿಬೆಲೆ ಗಡಿ ಬಂದ್ ಮಾಡ್ತೇವೆ. ಮಾರ್ಚ್ 14 ರಂದು ಮಂಡ್ಯ, ಮೈಸೂರು, ರಾಮನಗರ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಾರ್ಚ್ 16ಕ್ಕೆ ಹೊಸಕೋಟೆ ಟೋಲ್ ಬಂದ್ ಮಾಡುತ್ತೇವೆ ಎಂದಿದ್ದಾರೆ.

ಮಾರ್ಚ್ 22ಕ್ಕೆ ಅಖಂಡ ಕರ್ನಾಟಕ ಬಂದ್ ಮಾಡುವ ಮೂಲಕ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ಆಚರಣೆ ಮಾಡಲಾಗುವುದು ಎಂದಿದ್ದಾರೆ. ಮಾರ್ಚ್ 22 ರ ಶನಿವಾರದಂದು ಬಂದ್ಗೆ ಕರೆ ನೀಡಲಾಗಿದೆ. ಬಂದ್ ಯಶಸ್ಸಿಗೆ ಕರೆ ಕೊಟ್ಟಿದ್ದಾರೆ ವಾಟಾಳ್ ನಾಗರಾಜ್. ಇದು ಕನ್ನಡಿಗರ ಉಳಿವಿಗಾಗಿ ಬಂದ್ ಕರೆ ನೀಡಲಾಗಿದೆ ಎಂದಿದ್ದಾರೆ. ಬಂದ್ಗೆ ಗೈರಾದ ಎಲ್ಲಾ ಸಂಘಟನೆಗಳು ಸಾಥ್ ನೀಡುವಂತೆ ಮನವಿ ಮಾಡಲಾಗಿದೆ.

ಕರವೇ ನಾರಾಯಣಗೌಡರಿಗೂ ಕರೆ ಕೊಡುತ್ತೇವೆ, ಪ್ರವೀಣ್ ಶೆಟ್ಟಿಯವರಿಗೂ ಕರೆ ಕೊಡುತ್ತೇನೆ. ವಿಶೇಷವಾಗಿ ಮುಖ್ಯಮಂತ್ರಿ ಬೆಂಬಲ ಕೊಡಬೇಕು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಲ್ಲಾ ಬಸ್ಗಳನ್ನ ನಿಲ್ಲಿಸಬೇಕು. ಹೋಟೆಲ್ ಗಳು ಒಂದು ದಿನ ಮುಚ್ಚಬೇಕು. ಸಿನಿಮಾ ಥಿಯೇಟರ್ಗಳು ಒಂದು ದಿನ ಮುಂಚೆಯೇ ಮುಚ್ಚಬೇಕು. ಮಾರ್ಚ್ 22 ರ ಶನಿವಾರದಂದು ಬಂದ್ ನಡೆಯಲಿದೆ ಎಂದಿದ್ದಾರೆ. ಬಂದ್ ಯಶಸ್ಸಿಗೆ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ.