
ಅಮಿತ್ ಷಾ ಜೊತೆಗೆ ವೇದಿಕೆ ಹಂಚಿಕೊಂಡ ಬೆನ್ನಲ್ಲೇ ಈ ರೀತಿಯ ವಿಚಾರ ಗುಸುಗುಸು ಪಿಸುಪಿಸು ಅನ್ನೋ ರೀತಿಯದಲ್ಲಿ ಅಲ್ಲಲ್ಲಿ ಚರ್ಚೆ ಆಗ್ತಿದೆ. ಬಿಜೆಪಿಗೆ ಡಿ.ಕೆ ಶಿವಕುಮಾರ್ ಅವರನ್ನು ಸ್ವಾಗತಿಸಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೇರವಾಗಿಯೇ ಉತ್ತರ ಕೊಟ್ಟಿರುವ ಡಿ.ಕೆ ಶಿವಕುಮಾರ್, ಅಲ್ಲಾರಿ ನಾನ್ಯಾಕೆ ಬೇರೆ ಧರ್ಮಕ್ಕೆ ಹೋಗಲಿ, ನನಗೆ ಎಲ್ಲಾ ಧರ್ಮದ ಬಗ್ಗೆಯೂ ಪ್ರೀತಿ ಇದೆ. ನನಗೆ ಮಾನವ ಧರ್ಮಕ್ಕೆ ಜಯವಾಗಲಿ. ಯಾರಾದರೂ ಅರ್ಜಿ ಹಾಕೊಂಡಿದ್ದಾರ? ಬಿಜೆಪಿಗೆ ಹೋಗಲು ಎಂದಿದ್ದಾರೆ.

ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮದಲ್ಲಿ ಹುಟ್ಟಿ, ಭೌದ ಧರ್ಮ ಸೇರಿದ್ರು. ಅದು ಅವರ ವಯಕ್ತಿಕ ನಿರ್ಧಾರ.ಕುಂಭಮೇಳಕ್ಕೆ ಜಾತಿ ಇದೆಯಾ..? ನೀರಿಗೆ ಏನಾದರೂ ಜಾತಿ ಇದೆಯಾ..? ಇದು ಕಮ್ಯೂನಲ್ ಇಶ್ಯೂ ಅಲ್ಲ. ನಮ್ಮ ನೀರು, ಗಂಗಾ ನದಿ, ಕಾವೇರಿ ನಮ್ಮ ಪವಿತ್ರ ನದಿಗಳು. ನಮ್ಮ ಸ್ಪೀಕರ್ ಯು.ಟಿ ಖಾದರ್ ಕೂಡ ಕುಂಭಮೇಳಕ್ಕೆ ಬಂದಿದ್ರು. ಸ್ಪೀಕರ್ ಹೇಳಿದ್ರು, ಕುಂಭಮೇಳಕ್ಕೆ ಹೋಗಬೇಕು ಡಿಕೆ ಅಂತಾ. ನಾನು ಅಲ್ಲಿ ಸಂಘಟನೆ ನೋಡಿದ್ದೇನೆ. ಕೆಲವು ಆರತಿ ಬಗ್ಗೆ ನಿನ್ನೆಯೂ ತಿಳಿದಿದ್ದೇನೆ. ಕೆಲವು ಅನುಭವಗಳು ಟ್ರಾವೆಲ್ ಮಾಡಿದಾಗಲೇ ಸಿಗುತ್ತವೆ ಎಂದಿದ್ದಾರೆ.

ಸಾವಿರ ಜನ ವಿರೋಧ ಮಾಡಲಿ ರಿ, ನನ್ನ ನಂಬಿಕೆ. ನಾನು ನೊಣವಿನಕೆರೆ ಮಠಕ್ಕೆ ಹೋಗ್ತೇನೆ. ನಮ್ಮವರೇ ಕೇಳ್ತಾರೆ ನನಗೆ, ನಮ್ಮಲ್ಲಿ ಬರಲ್ಲ ಅಲ್ಲಿ ಹೋಗ್ತೀಯಾ ಅಂತಾ. ನನ್ನ ಕ್ಷೇತ್ರದಲ್ಲಿ ನನಗೆ ವೋಟ್ ಹಾಕಿರೊರು ಎಸ್ಸಿ, ಎಸ್ಟಿ ಸಮುದಾಯದ ಜನ. ನನಗೆ ಶೇಕಡ 99ರಷ್ಟು ಬ್ರಹ್ಮಣರು ವೋಟ್ ಹಾಕ್ತಾರೆ. ಬ್ರಾಹ್ಮಣರೆಲ್ಲ ಬಿಜೆಪಿ ಎಂದು ಮಾಡಿಬಿಡೊಕಾಗುತ್ತಾ ? ಜಾತಿ ಮೇಲೆ ರಾಜಕಾರಣ ಮಾಡಲ್ಲ, ನೀತಿ ಮೇಲೆ ರಾಜಕಾರಣ ಮಾಡ್ತೇನೆ ಎಂದಿದ್ದಾರೆ. ನಾನು ಎಲ್ಲ ಧರ್ಮದವರನ್ನ ಲೆಕ್ಕ ಹಾಕಿಯೇ ಸ್ಥಾನ ಮಾನ ಕೊಡೊದು ಅಂತಾನೂ ಹೇಳಿದ್ದಾರೆ.

ರಾಜ್ಯದಲ್ಲಿ ಡಿಸಿಎಂ ಆಗಿದ್ದೇನೆ. ಧಾರ್ಮಿಕ ದತ್ತಿ ಇಲಾಖೆ ಮುಚ್ಚಿ ಬಿಡಿ. ಬಿಜೆಪಿಯವರು ಯಾಕೆ ವಕ್ಪ್ ಬೋರ್ಡ್ ಮುಚ್ಚೋಕಾಗಿಲ್ಲ. ಸಂವಿಧಾನ ಹಕ್ಕು ಇದೆ. ಅವರು ಬೇರೆ ನೀರು ಕುಡಿತಾರ..? ಭೂಮಿಗೆ ಧರ್ಮ ಇದೆಯಾ ನೀರಿಗೆ ಜಾತಿ ಇದೆಯಾ..? ಎಸ್ ಎಂ ಕೃಷ್ಣ ಕಾಲದಲ್ಲಿ ಪಾಂಚಜನ್ಯ ಯಾತ್ರೆ ಮಾಡಿದ್ವು, ಸಿಎಂ ಲಿಂಗಪ್ಪ ಕೈಯಲ್ಲಿ ಶಂಖ ಉದಿಸಿದ್ದೆ. ಕೆಲವರು ಹೋಗಿ ಸೋನಿಯಾ ಗಾಂಧಿಗೆ ಕಂಪ್ಲೇಂಟ್ ಮಾಡಿದ್ರು. ಬಿಜೆಪಿದು ಎಂದು ಕಂಪ್ಲೇಂಟ್ ಹೇಳಿದ್ರು. ಎಲ್ಲಾ ಬರೆದು ಕೊಟ್ಟಿದ್ದೇವಾ..? ಹಿಂದೂಗಳೆಲ್ಲ ನಿಮ್ಮವರೇ ಎಂದು. ಸಿದ್ದರಾಮಯ್ಯ ಹೆಸರು ಬದಲಾವಣೆ ಮಾಡಲಾಗುತ್ತಾ..? ನನ್ನ ಹೆಸರು ಬದಲಾವಣೆ ಮಾಡಲಾಗುತ್ತಾ? ರಾಹುಲ್ ಗಾಂಧಿ ಶಿವಭಕ್ತ ಎಂದಿದ್ದಾರೆ.