ಇಂದು ಸಿಎಂ ಸಿದ್ದರಾಮಯ್ಯ (Cm siddaramaiah) ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ (Cabinet meeting) ನಡೆಯಲಿದೆ.ಈ ಸಭೆಯಲ್ಲಿ ಮೈಕ್ರೋ ಫೈನಾನ್ಸ್ (Micro finance) ಕಿರುಕುಳದ ಬಗ್ಗೆ ಚರ್ಚೆಯಾಗಲಿದ್ದು, ರಾಜ್ಯದ ಜನರ ಪರ ನಿಲ್ಲಲು ಸರ್ಕಾರ ನಿರ್ಧಾರ ಮಾಡಿದೆ.
ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದ್ದು,ಸುಗ್ರೀವಾಜ್ಙೆ ಮೂಲಕ ಹೊಸ ಕಾನೂನು ತರಲು ತೀರ್ಮಾನ ಮಾಡಲಾಗಿದೆ. ಇಂದಿನ ಸಂಪುಟ ಸಭೆಯಲ್ಲಿ ಹೊಸ ಕಾನೂನಿಗೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಈ ಹೊಸ ಕಾನೂನಿನಲ್ಲಿ ಹಣಕಾಸು ವ್ಯವಹಾರ ನಡೆಸುವವರು ಕಡ್ಡಾಯ ನೊಂದಣಿ ಮಾಡಿಸಬೇಕು,ಸಾಲನೀಡಿಕೆ,ವಸೂಲಾತಿಯಲ್ಲಿ ಪಾರದರ್ಶಕತೆ ಹೊಂದಿರಬೇಕು,ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳನ್ವಯ ಕಾರ್ಯನಿರ್ವಹಿಸಬೇಕು,ಸಂಸ್ಥೆ ಪ್ರಾರಂಭಿಸಿದ ೩೦ ದಿನದೊಳಗೆ ನೊಂದಣಿ ಕಡ್ಡಾಯ ಎಂಬ ನಿಯಮಗಳು ಜಾರಿಗೆ ಬರಲಿವೆ.

ಇನ್ನು ಯಾವುದೇ ಸಂದರ್ಭದಲ್ಲಿ ನೊಂದಣಿ ಪ್ರಾಧಿಕಾರ ಸಂಸ್ಥೆಯ ಹಕ್ಕನ್ನ ಮೊಟಕುಗೊಳಿಸಬಹುದು.ಭಾರತೀಯ ನಾಗರಿಕ ಸುರಕ್ಷತಾ ಕಾಯ್ದೆ ೧೦೩,೧೦೪ ರಡಿ ಸಂಸ್ಥೆಯನ್ನ ಸೀಜ್ ಆಂಡ್ ಸರ್ಚ್ ಮಾಡಲು ಪೊಲೀಸರಿಗೆ ಅವಕಾಶ ನೀಡುವುದು ಸೇರಿದಂತೆ, ವ್ಯಕ್ತಿಗೆ ಸಾಲ ನೀಡಿಕೆ,ಬಡ್ಡಿ ಪಾರದರ್ಶಕ ವಾಗಿರಬೇಕು ಎಂಬ ನಿಯಮಗಳು ಜಾರಿಗೆ ಬರಲಿವೆ.
ಈ ನಿಯಮಗಳ ಉಲ್ಲಂಘಿಸಿದರೆ ಅಂತಹ ಸಂಸ್ಥೆ ಇಲ್ಲವೇ ವ್ಯಕ್ತಿ ಶಿಕ್ಷೆ ಒಳಪಡಲಿದ್ದಾರೆ. ಕನಿಷ್ಠ ೬ ತಿಂಗಳ ಸಜೆ,೧೦ ಸಾವಿರ ದಂಡ ವಿಧಿಸಬಹುದು,ಗರಿಷ್ಠ ೩ ವರ್ಷ ಶಿಕ್ಷೆ ೧ ಲಕ್ಷದವರೆಗೆ ದಂಡ ವಿಧಿಸುವ ಅವಕಾಶ ನೀಡಲಾಗಿದ್ದು, ಇನ್ನಾದ್ರೂ ಈ ಫೈನಾನ್ಸ್ ಗಳ ಹಾವಳಿಗೆ ಬ್ರೇಕ್ ಬೀಳುತ್ತಾ ಕಾಡು ನೋಡಬೇಕಿದೆ.