ಬೆಂಗಳೂರು ಆರಮನೆ ಆಸ್ತಿ ವಿಚಾರಕ್ಕೆ (Banagalore palace property) ಸಂಬಂಧಪಟ್ಟಂತೆ ಸುಗ್ರೀವಾಜ್ಞೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಯ ಬಗ್ಗೆ ಸುತ್ತೂರಿನಲ್ಲಿ ಸಂಸದ ಯದುವೀರ್ (Yaduveer) ಪ್ರತಿಕ್ರಿಯಿಸಿದ್ದಾರೆ.ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಪರಿಹಾರ ಕೊಡುವ ಅಗತ್ಯವಿಲ್ಲ.

ಟಿಡಿಆರ್ ಸರ್ಟಿಫಿಕೇಟ್ (TDR certificate) ಕೊಟ್ಟರೆ ಸಾಕು.ಪರಿಹಾರದ ಬದಲಿಗೆ ಕೊಡುವ ಟಿಡಿಆರ್ ಕೊಟ್ಟರೆ ಸಾಕು ಎಂದು ಹೇಳಿದ್ದಾರೆ.ಈ ವಿಚಾರದಲ್ಲಿ ಸರ್ಕಾರದ ಟಿಡಿಆರ್ ಕೊಡುತ್ತಿಲ್ಲ.ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಸರ್ಕಾರ ಅವರ ಕೈಲಿ ಇದೆ, ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಇದ್ದಾಗ ನಮ್ಮ ಮುಂದೆ ಯಾಕೆ ಬರುತ್ತಾರೆ.ಸಾರ್ವಜನಿಕ ಹಿತದೃಷ್ಟಿಗಾಗಿ ಅಂದರೆ ನಮ್ಮ ಆಸ್ತಿನೇ ಬೇಕಾ.? ಎಂದು ಪ್ರಶ್ನೆ ಮಾಡಿದ್ದಾರೆ.
ಸಾಮಾನ್ಯವಾಗಿ ಸರ್ಕಾರ ಈ ರೀತಿಯ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಪರಿಹಾರ ಕೊಡ್ತಾರೆ. ಹಿಂದೆ ಸದಾಶಿವ ನಗರ ಕೂಡ ಬೆಂಗಳೂರು ಅರಮನೆಗೆ ಸೇರಿತ್ತು.ನಾವು ಆಗಲೇ ಸಾಮಾಜಿಕ ನ್ಯಾಯದಲ್ಲಿ ಬಹಳಷ್ಟು ಜಮೀನು ಕೊಟ್ಟಿದ್ದೇವೆ.ಸಾಮಾನ್ಯರಿಗೆ ಏನೂ ಕಾನೂನು ಇದೆ ಅದು ನಮಗೂ ಇದೆ ಎಂದು ಯದುವೀರ್ ಹೇಳಿದ್ದಾರೆ.

ನಾವು ಕೂಡ ಸರ್ಕಾರಕ್ಕೆ ಟಿಡಿಆರ್ ಬದಲು ನಗದು ರೂಪದಲ್ಲಿ ಪರಿಹಾರ ಹೇಳಬಹುದಿತ್ತು.ಆದರೆ ನಮ್ಮ ಸರ್ಕಾರದ ಖಜಾನೆಗೆ ದಕ್ಕೆ ಆಗುತ್ತೆ ಅಂತ ನಾವು ಟಿಡಿಆರ್ ಗೆ ಒಪ್ಪಿಕೊಂಡಿದ್ದೇವೆ. ಈ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟ್ ಆದೇಶ ಇದೆ.ರಾಜ್ಯ ಸರ್ಕಾರದಿಂದ ಟಿಡಿಆರ್ ಕೊಡುವ ಮೂಲಕ ರಾಜ್ಯ ಸರ್ಕಾರದಿಂದ ಒಂದು ಸರ್ಟಿಫಿಕೇಟ್ ಕೊಡಬೇಕೇ ಹೊರತು ಒಂದು ಪೈಸೇನೂ ಕೊಡಬೇಕಾಗಿಲ್ಲ ಎಂದು ಸುತ್ತೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ.