ಧಾರವಾಡದಲ್ಲಿ (Dharwad) ದಲಿತಪರ ಸಂಘಟನೆಗಳಿಂದ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆ,ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಪ್ರತಿಭಟನೆಯಲ್ಲಿ ಕೈ ಶಾಸಕ ಪ್ರಸಾದ್ ಅಬ್ಬಯ್ಯ (Prasad abbayya) ಭಾಗಿಯಾಗಿದ್ದಾರೆ.ಧಾರವಾಡ ಜ್ಯುಬಿಲಿ ಸರ್ಕಲ್ ನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಅಬ್ಬಯ್ಯ ಬೆಂಬಲ ಸೂಚಿಸಿದ್ದು, ಗೃಹ ಸಚಿವ ಅಮಿತ್ ಶಾ (Amit shah) ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅಂಬೇಡ್ಕರ್ (Ambedkar ) ಅಂದ್ರೆ ನಮಗೆ ಪ್ರಾಣ, ನಮಗೆ ಉಸಿರು.ಇವತ್ತು ಅಂತಹ ವಿಶ್ವಮಾನವ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದನ್ನು ನಾವು ಯಾರು ಸಹಿಸಿಕೊಳ್ಳುವುದಿಲ್ಲ.ಒಮ್ಮೊಮ್ಮೆ ನಮಗೆ ಅವಮಾನ ಆದರೆ ಸಹಿಸಿಕೊಳ್ಳಬಲ್ಲೆವು. ಆದರೆ ಅಂಬೇಡ್ಕರ್ ಗೆ ಅವಮಾನ ಮಾಡಿದ್ರೆ ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ನಮ್ಮಲ್ಲಿ ಸಾವಿರಾರೂ ವರ್ಷಗಳಿಂದ ಅಸ್ಪೃಶ್ಯತೆ ಇತ್ತು.ನಾವು ಯಾರು ಮನುಷ್ಯರೆಂಬ ಭಾವನೆ ಇರಲಿಲ್ಲ.ಆದರೆ ನಮ್ಮ ರಕ್ಷಣೆ ಮಾಡಲು ಬಂದವರು ಅಂಬೇಡ್ಕರ್ ಅವರು. ನಮಗೆ ಎಲ್ಲಾ ಹಕ್ಕುಗಳನ್ನು ಕೊಟ್ಟವರು ಬಂದವರು ಅಂಬೇಡ್ಕರ್. ನಾವು ಮನಷ್ಯರಾಗಿ ಬಾಳುವ ಶಕ್ತಿ ಕೊಟ್ಟವರು ಅಂಬೇಡ್ಕರ್.ನಾವು ನೋಡಿದ ದೇವರು ಅಂಬೇಡ್ಕರ್ ಎಂದು ಹೇಳಿದ್ದಾರೆ.

ಹೀಗಾಗಿ ನಮಗೆ ಅಂಬೇಡ್ಕರ ಕೊಟ್ಟ ಸಂವಿಧಾನವೇ ಸ್ವರ್ಗ. ಅಮಿತ್ ಶಾ ಬೇಕಿದ್ರೆ ಬೇರೆ ಸ್ವರ್ಗಕ್ಕೆ ಹೋಗಲಿ,ಸಂವಿಧಾನ, ಸ್ವಾತಂತ್ರ್ಯ ಸೇನಾನಿ ಗೌರವಿಸಬೇಕು.ಆದರೆ ಇದನ್ನು ಅಮಿತ್ ಶಾ ಪಾಲಿಸುತ್ತಿಲ್ಲ.ನಿವು ಅಧಿಕಾರಕ್ಕೆ ಬಂದಿರೋದು ಅಂಬೇಡ್ಕರ್ ಕೊಟ್ಟಿರೋ ಭಿಕ್ಷೆಯಿಂದ ಎಂದು ಅಬ್ಬಯ್ಯ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ನಾಲಿಗೆ ಮೇಲ ಹಿಡಿತ ಇಟ್ಟು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.