
ಪಂಚಕುಲ (ಹರಿಯಾಣ): ವೈವಾಹಿಕ ಜೀವನದಲ್ಲಿ ಸಮಸ್ಯೆಗಳು, ಕೌಟುಂಬಿಕ ಕಲಹಗಳು, ಮತ್ತು ಭಿನ್ನಾಪ್ರಾಯಗಳು ಹೆಚ್ಚಾಗುತ್ತಿರುವ ಇತ್ತೀಚಿನ ದಿನಗಳಲ್ಲಿ, ಹಲವು ದಂಪತಿಗಳು ವಿವಾಹ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬುದನ್ನು ನಾವು ನಿತ್ಯ ನೋಡುತ್ತೇವೆ.

ಆದರೆ, 43 ವರ್ಷಗಳ ನಂತರ, ವೃದ್ಧ ದಂಪತಿಯೊಬ್ಬರು ತಮ್ಮ ವಿವಾಹವಿಚ್ಛೇದನಕ್ಕೆ ಹೈಕೋರ್ಟ್ ಮೂಲಕ ಒಪ್ಪಿಗೆಯಾದ ಒಂದು ವಿಚಿತ್ರ ಪ್ರಕರಣ ಹರಿಯಾಣದಿಂದ ವರದಿಯಾಗಿದೆ. ಈ ಪ್ರಕರಣದಲ್ಲಿ, ವೃದ್ಧ ಪತಿ ತಮ್ಮ ಪತ್ನಿಗೆ 3.7 ಕೋಟಿ ರೂಪಾಯಿ ದೇಣಿಗೆ ಮತ್ತು ಶಾಶ್ವತ ಜೀವನಾಂಶಕ್ಕಾಗಿ ತನ್ನ ಜಮೀನನ್ನು ಮಾರಲು ಒಪ್ಪಿದ್ದಾನೆ.
ಪಂಚಕುಲಲಿರುವ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಹೈಕೋರ್ಟ್ನಲ್ಲಿ ನಡೆಯುವ ಪ್ರಕರಣವು ಕಳೆದ ಕೆಲವು ದಿನಗಳಿಂದ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಹರಿಯಾಣದ ಕರ್ನಾಲ್ ಜಿಲ್ಲೆಯ ಈ ವೃದ್ಧ ದಂಪತಿ 1980 ರಲ್ಲಿ ವಿವಾಹವಾದರು.ಆದರೆ ದೈವಿಕವಾಗಿ ಅವುಗಳ ಸಂಬಂಧ ಹದಗೆಟ್ಟಿತ್ತು. 2006 ರಲ್ಲಿ ಪತಿ ಮತ್ತು ಪತ್ನಿ ಬೇರೆ ಬೇರೆಯಾಗಿದ್ದರು. 69 ವರ್ಷದ ಪತಿ ಮತ್ತು 73 ವರ್ಷದ ಪತ್ನಿಯ ಮನಸ್ಸುಗಳು ಸಾಕಷ್ಟು ವಿಭಿನ್ನವಾಗಿದ್ದವು,
ಈ ಹಿನ್ನೆಲೆಯಲ್ಲಿ ಅವರು 18 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದರು. 2006 ರ ಮೇ 8 ರಂದು, ಅವರು ಪರಸ್ಪರವಾಗಿ ಬೇರೆ ಆಗಿರುವುದಕ್ಕೆ ತೀರ್ಮಾನಿಸಿದರು. 2013 ರಲ್ಲಿ, ಪತಿ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿ ಪತ್ನಿಯಿಂದ ಮಾನಸಿಕ ಕ್ರೌರ್ಯ ಆಗುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಆ ಸಮಯದಲ್ಲಿ ಕುಟುಂಬ ನ್ಯಾಯಾಲಯವು ತಮ್ಮ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು.
ನಂತರ, ಈ ಪ್ರಕರಣವು ಹರಿಯಾಣ ಹೈಕೋರ್ಟ್ಗೆ ಸಾಗಿತು. ಹೈಕೋರ್ಟ್ ಮಧ್ಯಸ್ಥಿಕೆ ಮೂಲಕ, 2024 ರ ನವೆಂಬರ್ 4 ರಂದು ವಿಚಾರಣೆ ಆರಂಭವಾಯಿತು. ಪತ್ನಿಗೆ 3.7 ಕೋಟಿ ರೂಪಾಯಿ ಜೀವನಾಂಶ ನೀಡಲು ಪತಿ ಒಪ್ಪಿದಂತೆ, ಈ ಪ್ರಕರಣವು ತೀರ್ಮಾನಗೊಂಡಿದೆ. . ಪತಿ, ಕೃಷಿ ಭೂಮಿಯನ್ನು ಮಾರಾಟ ಮಾಡಿ 2.16 ಕೋಟಿ ರೂಪಾಯಿಗಳನ್ನು ಡಿಡಿ ಮೂಲಕ ಮತ್ತು ಉಳಿದ 50 ಲಕ್ಷ ರೂಪಾಯಿಯನ್ನು ಕಬ್ಬು ಮತ್ತು ಇತರ ಬೆಳೆಗಳಿಂದ ಬರುವ ಆದಾಯದಿಂದ ಪತ್ನಿಗೆ ಕೊಡಲು ಒಪ್ಪಿಕೊಂಡಿದ್ದಾರೆ. ಈ ವಾರದಲ್ಲೇ ಹಣ ಪಾವತಿ ಆಗಲಿದೆ.
ಇದರ ಜೊತೆಗೆ, ಪತಿ ತಮ್ಮ ಪ್ರಾಣ ಹೋರಿದ ಬಳಿಕ, ತನ್ನ ಆಸ್ತಿಯ ಮೇಲಿನ ಎಲ್ಲಾ ಹಕ್ಕುಗಳನ್ನು ಪತ್ನಿ ಮತ್ತು ಮಕ್ಕಳಿಗೆ ನೀಡುವುದಾಗಿ ಒಪ್ಪಿಗೆ ನೀಡಿದ್ದಾರೆ . ಹೈಕೋರ್ಟ್ನ ನ್ಯಾಯಮೂರ್ತಿ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಗಜಿತ್ ಸಿಂಗ್ ಬೇಡಿ ಅವರ ನೇತೃತ್ವದಲ್ಲಿ, ಈ ವಿಚ್ಛೇದನ ಪ್ರಕ್ರಿಯೆಗೆ ಅಂತಿಮ ಮುದ್ರೆ ಹಾಕಲಾಯಿತು.