
ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲವು ವಿಚಾರಣೆಯನ್ನು ಡಿಸೆಂಬರ್ 09, ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ನಟ ದರ್ಶನ್ ಪರ ವಕೀಲ C.V. ನಾಗೇಶ್ ಅವರು “ದರ್ಶನ್ ಅವರಿಗೆ ನೀಡಲಾಗಿರುವ ವೈದ್ಯಕೀಯ ಮಧ್ಯಂತರ ಜಾಮೀನು ವಿಸ್ತರಣೆ ಕೋರಿದರು. ಇದಕ್ಕೆ ದರ್ಶನ್ ಮೆಡಿಕಲ್ ಬೇಲ್ ರದ್ದುಗೊಳಿಸಿ ಎಂದು SPP ಪ್ರತಿವಾದ ಮಾಡಿದರು.




