ಮುಸ್ಲಿಂ ಸಮುದಾಯದವರಿಗೆ (Muslim community) ಮತದಾನದ ಹಕ್ಕು ನೀಡಬಾರದು ಎಂದು ಚಂದ್ರಶೇಖರ್ ಸ್ವಾಮೀಜಿ (Chandrashekar swamiji) ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟಂತೆ ಇದೀಗ ಅವರ ವಿರುದ್ಧ ಜಾಮೀನು ರಹಿತ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಈ ಪ್ರಕರಣ ಸಂಬಂಧ ಉಪ್ಪಾರಪೇಟೆ ಪೊಲೀಸರು ತನಿಖೆ ಆರಂಭಿಸಿದ್ದು,ಈಗಾಗಲೇ ದೂರುದಾರನಿಂದ ಹೇಳಿಕೆಯ ವಿಡಿಯೋ ಕ್ಲಿಪ್ (video clip) ಪಡೆದುಕೊಂಡಿದ್ದಾರೆ.

ಈ ಕ್ಲಿಪ್ ನಲ್ಲಿ ಸ್ವಾಮೀಜಿ ಹೇಳಿಕೆ ಬಗ್ಗೆ ಪರಿಶೀಲನೆ ಮಾಡಿ, ಆನಂತರ ಅದನ್ನ ಎಫ್ ಎಸ್ ಎಲ್ (FSL) ಗೆ ಕಳಿಸಲು ತಯಾರಿ ನಡೆಸಿದ್ದಾರೆ. ಇನ್ನು ಅಗತ್ಯ ಇದ್ರೆ ಸ್ವಾಮೀಜಿಯನ್ನ ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. BNS 299 ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BNS 299 ಪ್ರಕಾರ ಉದ್ದೇಶಪೂರ್ವಕವಾಗಿ ಧರ್ಮ ಅಥವಾ ಧಾರ್ಮಿಕ ನಂಬಿಕೆ ಅವಮಾನಿಸಿ ಪ್ರಚೋದಿಸುವುದು ಎಂಬ ಆರೋಪದಡಿ ಕೇಸ್ ಫೈಲ್ ಆಗಿದ್ದು, ಸ್ವಾಮೀಜಿಗೆ ನೊಟೀಸ್ ಕೊಟ್ಟು ವಿಚಾರಣೆ ನಡೆಸಲಿರೋ ಪೊಲೀಸರು ಅವಶ್ಯಕತೆ ಇದ್ರೆ ಯಾವುದೇ ಕ್ಷಣದಲ್ಲಾದರೂ ಬಂಧನ ಮಾಡುವ ಸಾಧ್ಯತೆಯಿದೆ.