• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಳಗಾವಿಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ ;ಶನಿವಾರಸಂತೆಯ ಇಬ್ಬರ ಬಂಧನ

ಪ್ರತಿಧ್ವನಿ by ಪ್ರತಿಧ್ವನಿ
October 19, 2024
in Top Story, ಇತರೆ / Others
0
Share on WhatsAppShare on FacebookShare on Telegram

ಬೆಳಗಾವಿ: ಬೆಳಗಾವಿಯ ಆಂಜನೇಯ ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆ ಪೋಲೀಸರು ಗುರುವಾರ ಪತ್ನಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉದ್ಯಮಿ ಪತ್ನಿ ಉಮಾ ಪದ್ಮಣ್ಣವರ (41), ಅವರ ಫೇಸ್‌ಬುಕ್‌ ಸ್ನೇಹಿತ, ಶನಿವಾರಸಂತೆ ಗ್ರಾಮದ ಶೋಭಿತ್‌ ಗೌಡ (30) ಮತ್ತು ಶನಿವಾರಸಂತೆಯ ಪವನ್‌ (27) ಬಂಧಿತ ಆರೋಪಿಗಳು.ಈಗ ಮೂವರನ್ನು ಹಿಂಡಲಗಾದಲ್ಲಿರುವ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ADVERTISEMENT

ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿ ಸಂತೋಷ್‌ ಪದ್ದಣ್ಣನವರ (47) ಅಕ್ಟೋಬರ್‌ ೯ ರ ಸಂಜೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಕ್ಟೋಬರ್‌ 10 ರಂದು ವೀರಶೈವ ಸಂಪ್ರದಾಯದಂತೆ ಅಂತ್ಯ ಕ್ರಿಯೆಯೂ ನಡೆದಿತ್ತು. ಮೃತರ ದುಖಃ ತಪ್ತ ಮಗಳಾದ ಬೆಂಗಳೂರಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಸಂಜನಾ ಗೆ ಅಪ್ಪನ ಕೊನೆ ಕ್ಷಣಗಳನ್ನು ನೋಡುವ ಉತ್ಕಟ ಕುತೂಹಲ ಆಗಿದೆ. ಆಕೆ ಅಕ್ಟೋಬರ್‌ ೧೨ ರಂದು ತಾಯಿಯೊಡನೆ ಅಂದಿನ ಕ್ಷಣಗಳ ವೀಡಿಯೋ ತೋರಿಸಲು ಒತ್ತಾಯಿಸಿದ್ದಾಳೆ. ಆಗ ತಾಯಿ ಅದಕ್ಕೇನು ಈಗಲೇ ಅರ್ಜೆಂಟ್‌ ? ಸ್ನಾನ ಮಾಡಿ ಊಟ ಮಾಡಿ ಬಾ ನಂತರ ನೋಡದರಾಯ್ತು ಅಂದಿದ್ದಾಳೆ. ಆದರೆ ಮಗಳು ಬರುವಷ್ಟರಲ್ಲಿ ೮ ನೇ ತರಗತಿ ಒದುತ್ತಿರುವ ಮಗನಿಗೆ ಹೇಳಿ ಅಂದಿನ ಸಂಪೂರ್ಣ ಸಿಸಿಟಿವಿ ವೀಡಿಯೋಗಳನ್ನು ಡಿಲೀಟ್‌ ಮಾಡಿಸಿದ್ದಾಳೆ. ಉದ್ಯಮಿಯ ಮೂರು ಅಂತಸ್ತಿನ ಮನೆಯಲ್ಲೇ ಸುಮಾರು 15 ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದರು.

ಇದರಿಂದ ಸಂದೇಹ ಮತ್ತು ಸಿಟ್ಟುಗೊಂಡ ಮಗಳು ಸಾವಿನ ತನಿಖೆ ನಡೆಸುವಂತೆ ಪೋಲೀಸರಿಗೆ ಅಕ್ಟೋಬರ್‌ ೧೫ ರಂದು ದೂರು ಕೊಟ್ಟಿದ್ದಾಳೆ. ಕ್ಷಿಪ್ರ ತನಿಖೆ ಕೈಗೊಂಡ ಪೋಲೀಸರು ಎದುರು ಮನೆಯ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ೧೬ ರಂದೇ ಮೂವರನ್ನೂ ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಮಾಳಮಾರುತಿ ಇನ್ಸ್‌ಪೆಕ್ಟರ್‌ ಜಾಕೀರ್‌ ಅವರು ಕೆಲ ತಿಂಗಳ ಬಳಿಕ ಪುನಃ ಇಬ್ಬರೂ ಸಂಪರ್ಕದಲ್ಲಿ ಇದ್ದಾರೆ. ಪತಿಯಿಂದ ಸಂಪರ್ಕಕ್ಕೆ ಅಡ್ಡಿ ಎಂದು ಭಾವಿಸಿದ ಪತ್ನಿ ಆತನನ್ನೆ ಮುಗಿಸಿಬಿಡಲು ಯೋಜನೆ ರೂಪಿಸಿದ್ದಾಳೆ. ಅದರಂತೆ ಶೋಭಿತ್‌ ಮತ್ತು ಆತನ ಸ್ನೇಹಿತ ರಾಮನ್‌ ಕುಟ್ಟಿ ಎಂಬುವವರ ಮಗ ಪವನ್‌ ನನ್ನು ಕರೆದುಕೊಂಡು ಬೆಳಗಾವಿಗೆ ಅಕ್ಟೋಬರ್‌ ೭ ರಂದೇ ಬಂದು ಲಾಡ್ಜ್‌ ನಲ್ಲಿ ಉಳಿದುಕೊಂಡಿದ್ದಾರೆ. ಅಕ್ಟೋಬರ್‌ ೯ ರಂದು ಮದ್ಯಾಹ್ನ ಊಟದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟಿದ್ದರಿಂದ ನಿದ್ರೆಗೆ ಜಾರಿದ್ದ ಉದ್ಯಮಿಯನ್ನು ಈರ್ವರೂ 7 ಘಂಟೆಗೆ ಮನೆಗೆ ತೆರಳಿ ಉಸಿರುಗಟ್ಟಿಸಿ ಕೊಂದು 7.55 ಕ್ಕೆ ಹೊರಬಂದಿದ್ದಾರೆ. ಇದು ಎದುರು ಮನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಜಾಕೀರ್‌ ತಿಳಿಸಿದರು.

ಇದೀಗ ಬುಧವಾರ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೂವರೂ ಆರೋಪಿಗಳಿಗೂ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಧುನಿಕ ತಂತ್ರಜ್ಞಾನದಿಂದ ಡಿಲೀಟ್‌ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಮರು ಪಡೆಯುವುದಾಗಿ ತಿಳಿಸಿದ ಇನ್ಸಪೆಕ್ಟರ್‌ ಜಾಕೀರ್‌ ಅವರು ಅದರಲ್ಲಿ ಕೊಲೆಯ ನೇರ ದ್ಶಶ್ಯಾವಳಿಯೂ ಸಿಗಲಿದೆ ಎಂದು ತಿಳಿಸಿದರು. ಕೊಲೆ ನಡೆಸಿ ಇಬ್ಬರೂ ಆರೋಪಿಗಳೂ ಲಾಡ್ಜ್‌ ನಲ್ಲಿಯೇ ಇದ್ದುದರಿಂದ ಬೆಳಗಾವಿ ಪೋಲೀಸರು ಆರೋಪಿಗಳನ್ನು ಅಲ್ಲಿಯೇ ಬಂಧಿಸಿದ್ದಾರೆ.ಮೃತರ ಬಗ್ಗೆ ಅಕ್ಕ ಪಕ್ಕದ ನಿವಾಸಿಗಳಲ್ಲಿ ಅಷ್ಟೇನೂ ಒಳ್ಳೆ ಅಭಿಪ್ರಾಯ ಇರಲಿಲ್ಲ. ಖಾಸಗೀ ಲೇವಾದೇವಿ ಮಾಡುತಿದ್ದ ಉದ್ಯಮಿ ಮೀಟರ್ ಬಡ್ಡಿ ವಸೂಲಿ‌ ಮಾಡುತಿದ್ದರೆಂಬ ಆರೋಪಗಳೂ ಇದ್ದವು.

Tags: BelgaumBusinessman wife Uma PadmanvaraMalamaruthi stationReal estate businessman murderedTwo arrested on Saturday
Previous Post

ಪ್ರವಾಸಕ್ಕೆ ಮಡಿಕೇರಿಗೆ ಬಂದಿದ್ದ ಪಿಯು ವಿದ್ಯಾರ್ಥಿನಿಯರಿಗೆ ಬಿಯರ್‌ ಕುಡಿದು ಡ್ಯಾನ್ಸ್‌ ಮಾಡುವಂತೆ ಒತ್ತಾಯ;ಮಕ್ಕಳ ಆಯೋಗದಲ್ಲಿ ದೂರು ದಾಖಲು

Next Post

ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ;ಆರೋಪಿ ಅರ್ಜಿ ಸಂಬಂಧ ನೋಟೀಸ್‌ ಜಾರಿ ಮಾಡಿದ ಕೋರ್ಟ್‌

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post

ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ;ಆರೋಪಿ ಅರ್ಜಿ ಸಂಬಂಧ ನೋಟೀಸ್‌ ಜಾರಿ ಮಾಡಿದ ಕೋರ್ಟ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada