ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅದ್ರಲ್ಲೂ ಸಿಎಂ ಸಿದ್ದರಾಮಯ್ಯಗೆ (Cm siddaramaiah) ಜಾತಿ ಜನಗಣತಿ ವರದಿ (Caste census report) ಸದ್ಯ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇಷ್ಟೂ ದಿನಗಳ ಕಾಲ ಜಾತಿಗಣತಿ ವರದಿ ಬಿಡುಗಡೆ ಮಾಡೇ ಮಾಡ್ತೀನಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಆದ್ರೆ, ಈಗ ಸಿದ್ದು ಗೆ ಹೊಸ ಟೆನ್ಸನ್ ಶುರುವಾಗಿದೆ.
ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗ ನಾಯಕರು ಜಾತಿಗಣತಿ ವರದಿ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸ್ತಿದ್ದಾರೆ. ಸದ್ಯ ಜಾತಿ ಗಣತಿ ಜಾರಿ ಕುರಿತು ಚರ್ಚಿಸೋದಕ್ಕೆ 22 ರಂದು ವೀರಶೈವ ಸಮಾಜದ ಮುಖಂಡರು ಸಭೆ ನಿಗದಿ ಮಾಡಿದ್ದಾರೆ.
ಈ ಬೆಳವಣಿಗೆಯಿಂದ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಕೂಡ ಸಭೆ ನಡೆಸಲು ಮುಂದಾಗಿದ್ದು, 2 ದಿನ ಮುಂಚಿತವಾಗಿಯೇ ಲಿಂಗಾಯತ, ಒಕ್ಕಲಿಗ ಸಚಿವರು, ಶಾಸಕರ ಜೊತೆ ಸಭೆ ನಡೆಸಲು ಮುಂದಾಗಿದ್ದಾರೆ. ಆ ಮೂಲಕ ಯಾವುದೇ ಭಿನ್ನಮತ ಸ್ಪಟಗೊಳ್ಳದಂತೆ ಸರಿದೂಗಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಫಲ ಸಿಗೋದು ಬಹುತೇಕ ಅನುಮಾನವೇ ಆಗಿದೆ.