ಬೆಂಗಳೂರು (Bengaluru) ನೋಡಬೇಕು ಎಂಬ ಆಸೆಯೊಂದಿಗೆ ಸ್ನೇಹಿತನ ಜೊತೆ ಮೊದಲ ಬಾರಿಗೆ ಸ್ನೇಹಿತನ ಜೊತೆ ರಾಜಧಾನಿಗೆ ಬಂದಿದ್ದ ಯುವಕ ಪ್ರಿಯಾಂಶು (Priyanshu) ರೈಲ್ವೆ ಅಪಘಾತದಲ್ಲಿ ತೀವ್ರವಾಗಿ ಕರುಣಾಜನಕ ಘಟನೆ ನಿನ್ನೆ ನಡೆದಿದೆ.
ನಿನ್ನೆ ಬೆಂಗಳೂರಿನ ಮೆಜೆಸ್ಟಿಕ್ ನಿಂದ (Mejestic) ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣಕ್ಕೆ ಈ ಯುವಕ ಪ್ರಿಯಾಂಶು ತನ್ನ ಸ್ನೇಹಿತನ ಜೊತೆ ಪ್ರಯಾಣ ಬೆಳೆಸಿದ್ದ. ಅಪಘಾತದಲ್ಲಿ ಸ್ನೇಹಿತನಿಗೆ ಯಾವ್ದೇ ಗಾಯಗಳಾಗಿಲ್ಲ.ಪ್ರಿಯಾಂಶುಗೆ ಮಾತ್ರ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೊಡಲಾಗುತ್ತಿದೆ.
ಈ ಯುವಕ ಪ್ರಿಯಾಂಶು ಡಿಗ್ರಿ ವ್ಯಾಸಂಗ ಮಾಡ್ತಿದ್ದ ಎಂದು ತಿಳಿದು ಬಂದಿದ್ದು, B5 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದ. ಸದ್ಯ ಸ್ಟಾನ್ಲಿ ಆಸ್ಪತ್ರೆಯಲ್ಲಿ (Stanli hospital) ಪ್ರಿಯಾಂಶುಗೆ ಚಿಕಿತ್ಸೆ ನೀಡಲಾಗುತ್ತಿದೆ.