ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, ನಿನ್ನೆ SPP ವಾದಕ್ಕೆ ಇವತ್ತು ಮತ್ತೆ ವಕೀಲ ಸಿ.ವಿ ನಾಗೇಶ್ ಕೌಂಟರ್ ಮಾಡುತ್ತಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್ ಇದೆ ಎಂದು ಎಸ್ಪಿಪಿ ವಾದ ಮಾಡಿದ್ದಾರೆ. ಆದರೆ ಗೂಗಲ್ ಮ್ಯಾಪ್ ನಾನು ಓಡಾಡಿದ ಜಾಗ ತೋರಿಸುತ್ತದೆ. ನಾನು ಹೊರಟ ಜಾಗದಿಂದ, ತಲುಪುವ ಜಾಗ ತೋರಿಸುತ್ತ. ಬೇಕಾದ್ರೆ ಇದನ್ನು ಎಡಿಟ್ ಮಾಡಿ ತೋರಿಸಬಹುದು. ಇದನ್ನ ಗೂಗಲ್ ಟೈಂ ಲೈನ್ ಎನ್ನಲಾಗುತ್ತದೆ. ನಾನು ಈಗ ಬೇಕಾದ್ರೆ ಹೈಕೋರ್ಟ್ನಲ್ಲಿ ಇರುವಂತೆ ತೋರಿಸಬಲ್ಲೇ? ಹೀಗಾಗಿ ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಪಕ್ಕ ಇರೋದಿಲ್ಲ. ಟೆಕ್ನಿಕಲ್ ಎವಿಡೆನ್ಸ್ ಸಂಪೂರ್ಣ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎಡಿಟ್ ಮಾಡಬಹುದು, ಬೇಕಾದಂತೆ ಬದಲಿಸಬಹುದು ಎಂದು ವಾದಿಸಿದ್ದಾರೆ.
ಫೋನ್ ಸಿಮ್ಗಳು ಕೂಡ ಆರೋಪಿಗಳ ಹೆಸರಿನಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಇವರು ಇದ್ದರು ಅಂತ ಹೇಳಲು ಹೇಗೆ ಸಾಧ್ಯ..? ದರ್ಶನ್ ಸಿಮ್ ಕಾರ್ಡ್ ಹೇಮಂತ್ ಎಂಬಾತನ ಹೆಸರಿಲ್ಲಿ ಇದೆ. ಹೇಮಂತ್ ಪೋಟೋ ಬರಬೇಕಿತ್ತೆ ವರೆತೂ ದರ್ಶನ್ ಪೋಟೋ ಅಲ್ಲ. ದರ್ಶನ್ ಪೋಟೊವನ್ನು ಪೊಲೀಸ್ ಸ್ಟೇಷನ್ನಲ್ಲಿ ತೆಗೆದುಕೊಳ್ಳಲಾಗಿತ್ತು. ಆ ಫೋಟೋಗಳನ್ನು ಸ್ಕೆಚ್ ನಲ್ಲಿ ಎಡಿಟ್ ಮಾಡಿದ್ದಾರೆ. ಪೊಲೀಸರು ಸಿದ್ದ ಮಾಡಿರೋದು ಯಾವುದು ಸ್ಯಾಟಲೈಟ್ ಪಿಕ್ಚರ್ ಅಲ್ಲ. ಬದಲಾಗಿ ಇವರೇ ಮಾಡಿರೋ ಸ್ಕೆಚ್ ಪಿಕ್ಚರ್ಸ್. ದರ್ಶನ್ ಪೋಟೊ ಎಡಿಟ್ ಮಾಡಲಾಗಿದ್ದು, ಅದು ಗೂಗಲ್ ಪೋಟೋ ಅಲ್ಲ. ಬಂಧನದ ದಿನ ತಗೊಂಡ ಪೋಟೋವನ್ನು ಎಡಿಟ್ ಮಾಡಿ ಡಯಾಗ್ರಾಂನಲ್ಲಿ ಪೇಸ್ಟ್ ಮಾಡಲಾಗಿದೆ. ರಾಜಕುಮಾರ್ ರಸ್ತೆಯ ಪೆಟ್ರೋಲ್ ಬಂಕ್ ಬಳಿಯ ಏರ್ಟೆಲ್ ಸ್ಟೋರ್ನಲ್ಲಿ ಸಿಮ್ ಖರೀದಿ ಮಾಡಲಾಗಿದೆ
ಎಸ್ಪಿಪಿ ಪ್ರಸನ್ನ ಕುಮಾರ್ ಅವರ ಸೂಚನೆಯಂತೆ ತನಿಖೆ ನಡೆದಿದೆ ಎಂದಿರುವ ಸಿವಿ ನಾಗೇಶ್, ಎಸ್ಪಿಪಿ ಪ್ರಸನ್ನ ಕುಮಾರ್ ಪೊಲೀಸರನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಫೋನ್ ಡಯಾಗ್ರಾಂನಲ್ಲಿ ಇರುವ ಲೋಪಗಳನ್ನು ಹುಡುಕಿರುವ ವಕೀಲ ಸಿವಿ ನಾಗೇಶ್, ಇದೇನಾ ಸ್ಕಾಟ್ ಲ್ಯಾಂಡ್ ಮಾದರಿ ತನಿಖೆ..? ಎಂದು ವ್ಯಂಗ್ಯವಾಡಿದ್ದಾರೆ. ಕೆಲವು ಕಾನ್ಸ್ಟೇಬಲ್ಗಳು ಡಾಯಾಗ್ರಂ ರಚನೆ ಮಾಡಿದ್ದಾರೆ. ಗೂಗಲ್ ಮ್ಯಾಪ್ ಹಾಗೂ ಅಡ್ರೆಸ್ನ ಒಬ್ಬ ಕಾನ್ಸ್ ಸ್ಟೆಬಲ್ ಮಾಡಿದ್ದಾರೆ. ತನಿಖಾಧಿಕಾರಿ ಚಂದನ್ ಕಚೇರಿಯಲ್ಲಿ ಕೂತು ಡಯಾಗ್ರಾಂ ರಚನೆ ಮಾಡಿದ್ದಾರೆ. ಹೀಗಾಗಿ ಇದನ್ನು ಟೆಕ್ನಿಕಲ್ ಎವಿಡೆನ್ಸ್ ಅಂತ ಪರಿಗಣನೆಗೆ ತಗೋಬಾರದು. ಪೊಲೀಸರು ನಕಲಿ ಡಯಾಗ್ರಾಂ ಸಿದ್ದ ಮಾಡಿದ್ದಾರೆ ಅಂತ ಸಿವಿ ನಾಗೇಶ್ ಆರೋಪ ಮಾಡಿದ್ದಾರೆ.
ಗೂಗಲ್ ಮ್ಯಾಪ್ ಅನ್ನು ಸುರೇಂದ್ರ ಅನ್ನೋ ಹೆಡ್ ಕಾನ್ಸ್ ಸ್ಟೇಬಲ್ ತಯಾರು ಮಾಡಿದ್ದಾರೆ. ಅವರಿಗೆ ಹೇಗೆ ಬೇಕೋ ಹಾಗೆ ತಯಾರು ಮಾಡಿದ್ದಾರೆ. ಎಲ್ಲಿ ಬಾಡಿ ಇತ್ತು, ಆರೋಪಿಗಳು ಎಲ್ಲಿ ಇದ್ರು ಅಂತ ಸಾಕ್ಷ್ಯಗಳನ್ನು ಸ್ಕೆಚ್ ರೂಪದಲ್ಲಿ ತೋರಿಸಿದ್ದಾರೆ. ಡಯಾಗ್ರಾಂನಲ್ಲಿ ಎಲ್ಲಾ ಆರೋಪಿಗಳ ಪೋಟೋ, ಸಾಕ್ಷ್ಯಗಳನ್ನು ಪೋಟೋಗಳ ಪೇಸ್ಟ್ ಮಾಡಲಾಗಿದೆ. ಮೊಬೈಲ್ ಫೋನ್ ಆಧರಿಸಿ ಸ್ಯಾಟಲೈಟ್ ಪಿಕ್ಚರ್ ತಗೊಂಡಿದ್ದಾರೆ. ಸ್ಯಾಟಲೈಟ್ ಮೂಲಕ ಆರೋಪಿಗಳ ಪೋಟೋ ಸಿಗಲು ಸಾಧ್ಯವೆ..? ಎಂದು ಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ ದರ್ಶನ್ ಪರ ವಕೀಲ ಸಿವಿ ನಾಗೇಶ್.