ಮುಡಾ ಹಗರಣ ಪ್ರಕರಣ (MUDA scam) ಸಂಬಂಧಪಟ್ಟಂತೆ ಇಂದು ಲೋಕಾಯುಕ್ತ (Lokayukta) ಅಧಿಕಾರು ಫುಲ್ ಆ್ಯಕ್ಟಿವ್ ಆಗಿದ್ದಾರೆ. ಬೆಳಗ್ಗೆಯೇ ಕಚೇರಿ ಓಪನ್ ಆಗಿದ್ದು, ದೂರುದಾರ ಸ್ನೇಹಮಯಿ ಕೃಷ್ಣ (Sneha mayi krishna) ಅವರನ್ನೇ ಮೊದಲು ವಿಚಾರಣೆ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಮಾಲ್ವೇಶ್ (DYSP maltesh) ಸ್ನೇಹಮಯಿ ವಿಚಾರಣೆ ನಡೆಸಿದ್ದು ಈ ಪ್ರಕರಣದ ಬಗ್ಗೆ ನಿಮಗೆ ಹೇಗೆ ತಿಳಿಯಿತು? ಏನೆಲ್ಲಾ ಮಾಹಿತಿ ಇದೆ ಅನ್ನೋದ್ರ ಬಗ್ಗೆ ವಿಚಾರಣೆ ನಡೆಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ದೂರುದಾರ ಸ್ನೇಹಮಯಿ ಕೃಷ್ಣರ ಬಳಿ ಪ್ರಾಥಮಿಕ ಮಾಹಿತಿ ಪಡೆದ ಅಧಿಕಾರಿಗಳು ವಿವಾದಿತ ಸ್ಥಳದ ಮಹಜರು ಕೂಡಾ ನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸ್ನೇಹಮಹಿ ಕೃಷ್ಣ ಅವರಿಂದ ಮಾಹಿತಿ ಪಡೆದರು.