
ಕೋಲಾರ:ಕೆ.ಎಚ್ ಮುನಿಯಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವೆ ಕೈ-ಕೈ ಮಿಲಾಯಿಸಿಕೊಂಡ ಘಟನೆ ಕೋಲಾರ ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನಡೆದಿದೆ. ಹೌದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರು ಗದ್ದಲ ಎಬ್ಬಿಸಿದರು.
#Kolar
— Vel Kolar (@ExpressKolar) September 28, 2024
All not well in the Kolar congress.
During the meeting to discuss various issues, two groups of congress workers entered in to heated altercation and were also involved in push and pull, even pushed down the DCC president from dias.@NewIndianXpress @XpressBengaluru pic.twitter.com/pRfwGcvHUU
ಆರಂಭದಲ್ಲಿ ನಿರ್ಲಕ್ಷ್ಯ ಬಗ್ಗೆ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಧ್ವನಿ ಎತ್ತಿದರು. ನಂತರ ರಮೇಶ್ ಕುಮಾರ್ ಬೆಂಬಲಿಗರು ಅನ್ಯಾಯದ ಕೂಗು ಎಬ್ಬಿಸಿದರು. ರಮೇಶ್ ಕುಮಾರ್ ಅವರನ್ನು ಜಿಲ್ಲಾ ಕಾಂಗ್ರೆಸ್’ನಿಂದ ನಿರ್ಲಕ್ಷಿಸಲಾಗುತ್ತಿದೆ, ಬ್ಯಾನರ್’ನಲ್ಲಿ ಅವರ ಫೋಟೊ ಕೂಡ ಹಾಕಿಲ್ಲ ಎಂದು ಆಕ್ಷೇಪ ತೆಗೆದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರನ್ನು ಆಚೆಗೆ ಕಳುಹಿಸಿದರು. ಆಗ ಮಾತಿನ ಚಕಮಕಿ ನಡೆದು ನೂಕಾಟ, ತಳ್ಳಾಟ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಬೇಕಾಯಿತು.
