
ಮುಡಾ ಹಾಗು ಅರ್ಕಾವತಿ ಹಗರಣದಲ್ಲಿ ಸಿಬಿಐ ತನಿಖೆಗೆ ಮುಂದಾಗದಂತೆ ಸಿಎಂ ರಕ್ಷಣೆ ಪಡೆದಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜಭವನ ವರ್ಸಸ್ ಸರ್ಕಾರ ಅನ್ನೋ ವಿಚಾರದಲ್ಲಿ ಪ್ರತ್ಯಾಸ್ತ್ರ ಹೂಡಿದ್ದಾರೆ. ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕ್ಯಾಬಿನೆಟ್ನಲ್ಲಿ 28 ವಿಷಯಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ ಎರಡು ವಿಚಾರಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಿಚಾರಗಳನ್ನ ಪರಿಗಣಿಸಿದ್ದೇವೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ. ಇದರಲ್ಲಿ ರಾಜ್ಯಪಾಲರು ಮೇಲಿಂದ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತಿದ್ದ ವಿಚಾರದ ಬಗ್ಗೆಯೂ ಚರ್ಚೆ ಆಗಿದೆ.

ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಇವತ್ತೇ ಮಾಹಿತಿ ಕಳಿಸಬೇಕು, ಈಗಲೇ ಮಾಹಿತಿ ಕಳಿಸಬೇಕೆಂದು ಸೂಚನೆ ಕೊಡುತ್ತಿದ್ದಾರೆ. ಇದಕ್ಕಾಗಿ ಎಲ್ಲಾ ನಿಯಮ ಪರಿಶೀಲಿಸಿ ಯಾವುದೇ ಮಾಹಿತಿಯನ್ನ ಮುಖ್ಯ ಕಾರ್ಯದರ್ಶಿ ನೀಡುವಂತಿಲ್ಲ. ಮಾಹಿತಿ ನೀಡುವ ಮುನ್ನ ಸಚಿವ ಸಂಪುಟದ ಅನುಮೋದನೆ ಪಡೆಯಬೇಕು ಎಂದು ನಿರ್ಬಂಧ ವಿಧಿಸಲಾಗಿದೆ.
ಮುಖ್ಯ ಕಾರ್ಯದರ್ಶಿಗೆ ಸಂಪುಟ ಸಭೆಯಿಂದ ಸೂಚನೆ ಕೊಡಲಾಗಿದೆ. ಅರ್ಕಾವತಿ ಸೇರಿದಂತೆ ಎಲ್ಲಾ ವಿಷಯಗಳಿಗೂ ಯಾವುದೇ ಮಾಹಿತಿ ನೀಡುವ ಮುನ್ನ ಸಂಪುಟ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.
