ರಾಜ್ಯದಲ್ಲಿ ಮೂಡ ಪ್ರಕರಣ (MUDA scam) ಸ್ಪೋಟಗೊಳ್ಳುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ (Cm siddaramiah) ಬದಲಾವಣೆ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿತ್ತು. ಕೇವಲ ವಿರೋಧ ಪಕ್ಷಗಳು ಮಾತ್ರವಲ್ಲದೇ, ಕಾಂಗ್ರೆಸ್ನಲ್ಲೇ (Congress) ಸಿಎಂ ಸ್ಥಾನದ ರೇಸ್ ಜೋರಾಗಿತ್ತು. ಇದೀಗ ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಹಳ ಗಟ್ಟಿಯಾಗಿದ್ದಾರೆ. ಅವರ ಕುರ್ಚಿಯೂ ಕೂಡ ಬಹಳ ಗಟ್ಟಿ ಇದೆ. ಆದ್ರೆ ಈಗ ಅಲುಗಾಡುತ್ತಿರುವುದು ಬಿ.ವೈ ವಿಜಯೇಂದ್ರ (BY Vijayendra) ಕುರ್ಚಿ ಎಂದು ಅಂತ ಎಂ.ಬಿ.ಪಾಟೀಲ್ (M B patil) ತಿರುಗೇಟು ಕೊಟ್ಟಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ (Basana gowda patil), ರಮೇಶ್ ಜಾರಕಿಹೊಳಿ (Ramesh jarakiholi) ಸೇರಿದಂತೆ ಅನೇಕರಿಂದ ಬಿಜೆಪಿ (Bjp) ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕುರ್ಚಿ ಅಲುಗಾಡುತ್ತಿದೆ. ಹೀಗಾಗಿ ವಿಜಯೇಂದ್ರ ಮೊದಲು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲಿ ಎಂದು ಎಂ.ಬಿ.ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.