ಮಂಡ್ಯದ (Mandya) ನಾಗಮಂಗಲದಲ್ಲಿ (Nagamangala) ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ (Petrol bomb) ಎಸೆದು ದುಷ್ಕೃತ್ಯ ಮೆರೆದಿರುವ ಘಟನೆ ನಡೆದಿದೆ. ಇಲ್ಲಿನ ದರ್ಗಾದ ಮುಂದೆ ಮೆರವಣಿಗೆ ಮಾಡದಂತೆ ಅನ್ಯಕೋಮಿನ ಯುವಕರು ಗಣೇಶ ಮೂರ್ತಿ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.
ಇಲ್ಲಿ ಉದ್ವಿಘ್ನಗೊಂಡ ಮತಾಂಧರು ಹಿಂದೂ ಯುವಕರ ಮೇಲೆ ಮಾತ್ರವಲ್ಲದೇ ಪೊಲೀಸರ (Police) ಮೇಲೂ ಕಲ್ಲು ತೂರಾಡಿದ್ದಾರೆ. ಈ ವೇಳೆ ಹಿಂದೂ-ಮುಸ್ಲಿಂ (Hindu-muslim) ಯುವಕರ ನಡುವೆ ವಾಕ್ಸಮರ, ತಳ್ಳಾಟ, ನೂಕಾಟ ನಡೆದಿದ್ದು, ಲಾಠಿ ಬೀಸಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸಪಟ್ಟಿದ್ರು.
ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದ್ದು. ಇದೇ ವೇಳೆ ಅನ್ಯಕೋಮಿನ ಯುವಕರು ಕತ್ತಿ ತೋರಿಸಿ ಬೆದರಿಕೆ ಹಾಕಲು ಯತ್ನಿಸಿದ್ದಾರೆ. ಸಿಕ್ಕ ಸಿಕ್ಕ ಅಂಗಡಿ ಮತ್ತು ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.