ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ (Bangalore pot holes) ತಪ್ಪಿಸಲು ಹೋಗಿ ಅಪಘಾತಗಳು ಹೆಚ್ಚಾಗ್ತಿದ್ದು, ಸರ್ಕಾರದ ವಿರುದ್ಧ ಜನರು ಸಿಡಿದೆದ್ದಿದ್ದಾರೆ, ಗುಂಡಿಮಯ ರಸ್ತೆಯಲ್ಲಿ ಸಂಚರಿಸುವಾಗ ಅವಘಡಗಳು ಹೆಚ್ಚಾಗ್ತಿದ್ದು, ಇದ್ರಿಂದ ಸಂಚಾರಿ ಪೊಲೀಸರು (traffic police) ಬೇಸತ್ತಿದ್ದಾರೆ.

ಈ ಹಿನ್ನಲೆ ಸಂಚಾರಿ ಪೊಲೀಸರೇ ನಗರದ ಕೆಲವೆಡೆ ಸ್ವಯಂ ಪ್ರೇರಿತರಾಗಿ ಗುಂಡಿ ಮುಚ್ಚುವ ಕೆಲಸ ಮಾಡ್ತಿದ್ದಾರೆ.ಆದ್ರೆ ಇಷ್ಟಾದ್ರೂ ಅಧಿಕಾರಿಗಳು ಹಾಗೂ ಸರ್ಕಾರ ಏನ್ಮಾಡ್ತಿದೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಜನರಿಗೆ ಸರ್ಕಾರದಿಂದ ಗುಂಡಿ ಭಾಗ್ಯ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹೆಚ್ಚಾಗಿದೆ.
ಹೀಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ (Dm dk shivakumar) ಗುಂಡಿ ಮುಚ್ಚಲು ಪಾಲಿಕೆಗೆ 15 ದಿನಗಳ ಡೆಡ್ ಲೈನ್ ಕೊಟ್ಟಿದ್ದಾರೆ. ಡಿ.ಕೆ ಶಿವಕುಮಾರ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರು ಬರುತ್ತಿತ್ತು. ಆದ್ದರಿಂದ ಡಿ.ಕೆ ಶಿವಕುಮಾರ್ ಎಚ್ಚೇತುಕೊಂಡು ನಿಮ್ಮ ಏರಿಯಾದ ಗುಂಡಿಗಳ ವಿಡಿಯೋ ಕಳುಹಿಸಿ ಎಂದು ಸೂಚಿಸಿದ್ದಾರೆ.