ಬೀದರ್:ಕಲ್ಯಾಣ ಕರ್ನಾಟಕ ವಿರೋಧಿ ಸರ್ಕಾರದ ಧೋರಣೆ ಖಂಡಿಸಿ ಅಹಿಂದ ಚಿಂತಕರ ವೇದಿಕೆ ಕಲ್ಯಾಣ ಕರ್ನಾಟಕ 371 ಜೆ ಕಲಂ ಕಾನೂನು ತಿದ್ದುಪಡಿ ಹೋರಾಟ ಸಮಿತಿ ಕಲ್ಯಾಣ ಕರ್ನಾಟಕಕ್ಕಾಗುತ್ತಿರುವ ಅನ್ಯಾಯವನ್ನು ಖಂಡಿಸಿ ಜ್ಯೋತಿಯಾತ್ರೆ ಹಮ್ಮಿಕೊಂಡಿತ್ತು. ಜ್ಯೋತಿಯಾತ್ರೆಯೂ ಕಲ್ಬುರ್ಗಿ ಜಿಲ್ಲೆ, ಚಿಂಚೋಳಿ ಪಟ್ಟಣದ ದಿವಂಗತ ವೈಜನಾಥ್ ಪಾಟೀಲರ ಸಮಾಧಿಯಿಂದ ಪ್ರಾರಂಭವಾಗಿ ತಾಲೂಕಿನ ಬೀಮಳ ಖೇಡ, ಮನ್ನಾಎಖೇಳಿ ಮೂಲಕ ಬೀದರ್ ತೆರಳಿತು.
ಹೋರಾಟ ಸಮಿತಿ ಸದಸ್ಯರು ಬೈಕ್ ರ್ಯಾಲಿ ನಡೆಸಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.371 ಜೆ ಕಲಂ ಸಮರ್ಪಕವಾಗಿ ಅನುಷ್ಠನಗೊಳಿಸಬೇಕು, ಹೈದರಾಬಾದ್ ಕರ್ನಾಟಕ ಹೊರತುಪಡಿಸಿ ೨೪ ಜಿಲ್ಲೆಗಳಲ್ಲಿ ಶೇಕಡ 8ರಷ್ಟು ನೇಮಕಾತಿ ಮತ್ತು ಮುಂಬಡ್ತಿ ಮೀಸಲಾತಿ ಒದಗಿಸಬೇಕು, ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು,
ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಕಾರ್ಖಾನೆ,ಕಂಪನಿ, ಕೈಗಾರಿಕೆಗಳಲ್ಲಿ ಶೇ80 ರಷ್ಟು ನೇಮಕಾತಿ ಮೀಸಲಾತಿ ಒದಗಿಸಬೇಕು, ಹೈದರಾಬಾದ್ ಕರ್ನಾಟಕ 371 ಜೆ ಕಲಂ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 3000 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅವ್ಯವಹಾರದ ಸಿ ಬಿ ಐ ತನಿಖೆ ಮಾಡಿಸಬೇಕು.
ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಿ ಮುಂಬಡ್ತಿ ನೀಡಬೇಕು.ಎಂ ಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜ್ಯೋತಿ ಯಾತ್ರೆ ಆಯೋಜಿಸಲಾಗಿದ್ದು ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಜ್ಯೋತಿ ಯಾತ್ರೆ ಸಂಚರಿಸಲಿದೆ ಎಂದು ಅಹಿಂದ ಚಿಂತಕರ ವೇದಿಕೆಯ ರಾಜ್ಯಾಧ್ಯಕ್ಷ ಸೈಬಣ್ಣ ಜಮಾದಾರ್ ನುಡಿದರು.
ಜಿಲ್ಲಾಧ್ಯಕ್ಷ ಧನರಾಜ್ ಬೇಮಳಖೇಡ,ಘಾಳೆಪ್ಪ ಹಂತಿ, ದಿಲೀಪಕುಮಾರ್ ವರ್ಮಾ ಸೇರಿದಂತೆ ವೇದಿಕೆ ಸದಸ್ಯರಿದ್ದರು.