
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಆದರೆ ಈ ರೀತಿ ಒಂದು ಸಾಂವಿಧಾನ ಹುದ್ದೆಯಲ್ಲಿರುವ ರಾಜ್ಯಪಾಲರು, ಸಂವಿಧಾನ ದತ್ತವಾದ ಮುಖ್ಯಮಂತ್ರಿ ಸ್ಥಾನ ಅಲಂಖರಿಸುವ ವ್ಯಕ್ತಿಗೆ ಶೋಕಾಸ್ ನೋಟಿಸ್ ಕೊಡಲು ಸಾಧ್ಯವೇ..? ಇಲ್ಲವೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಆದರೆ ಈ ಬಗ್ಗೆ ಹಿರಿಯ ವಕೀಲ ಆಶೋಕ್ ಹಾರನಹಳ್ಳಿ ಮಾತನಾಡಿ ಸಾಕಷ್ಟು ಗೊಂದಲಗಳಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ಅಧಿಕಾರಿ ಅಲ್ಲದೇ ಇರುವ ವ್ಯಕ್ತಿ ಗವರ್ನರ್ಗೆ ದೂರು ಕೊಟ್ಟಾಗ ಕಂಪ್ಲೈಂಟ್ ದಾಖಲಿಸಬೇಕು. ಗವರ್ನರ್ ಅದನ್ನ ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳು ಯಾರು ಇದ್ದಾರೆ ಅವರಿಗೆ ಕಳುಹಿಸಿ ವಿವರಣೆ ಕೇಳಬೇಕು. ವಿವರಣೆ ಕೇಳದೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಗವರ್ನರ್ಗೆ ಸಾಧ್ಯ ಇಲ್ಲ. ಅದರಿಂದ ಯಾರು ಅರ್ಜಿ ಕೊಟ್ಟರೂ ಕೂಡ ಅವರು ನ್ಯಾಯಾಲಯಕ್ಕೆ ದೂರು ಸಲ್ಲಿಸಬೇಕು. ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿ, ಅರ್ಜಿ ಹಾಕಿ, ಅದು ವಿಚಾರಣೆ ಆಗುವ ತನಕ ಕಾಯಬೇಕು. ನಂತರ ಗವರ್ನರ್ ವಿವರಣೆ ನೋಡಿದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತಾರೆ.

ಯಾವುದೇ ಕಾರಣಕ್ಕೂ ರಾಜ್ಯಪಾಲರು ಏಕಾಏಕಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ಇಲ್ಲ. ಮುಖ್ಯಮಂತ್ರಿಗಳು ನನ್ನ ಪ್ರಕಾರ ಸದ್ಯಕ್ಕೆ ಏನು ಭಯಪಡುವಂತ ಸನ್ನಿವೇಶ ಕಾಣಿಸುತ್ತಿಲ್ಲ. ಯಾಕೆಂದರೆ ಗವರ್ನರ್ ಅವರು ಸಿಎಂ ಬಳಿ ವಿವರಣೆ ಕೇಳಿಲ್ಲ. ವಿವರಣೆ ಕೇಳಿದ್ರೆ, ಇವರು ಏನಾದ್ರು ಮಾಡಬಹುದು ಅಂತಾ ಅಭಿಪ್ರಾಯ ಪಡಬಹುದು. ಈಗ ಕೇಳದೇ ಇರೋದ್ರಿಂದ ಸದ್ಯಕ್ಕೆ ಏನು ಭಯಪಡುವಂತದ್ದಿಲ್ಲ. ಮುಂದಿನ ದಿನಗಳಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡ್ತಾರೆ ಅಂದ್ರೆ ನ್ಯಾಯಾಲಯ ಗಣನೆಗೆ ತೆಗೆದುಕೊಂಡು, ಅದನ್ನ ಪ್ರಶ್ನೆ ಮಾಡೋದಕ್ಕೆ ಅವಕಾಶ ಇದೆ ಎಂದಿದ್ದಾರೆ
ಅದ್ರೆ ಒಂದು ಭಾರಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟರೆ ಅವರು ಅಧಿಕಾರ ಬಿಡಬಹುದು ಅನ್ನೋ ಅಭಿಪ್ರಾಯ ಇದೆ. ಆ ದೃಷ್ಟಿಯಲ್ಲಿ ಯೋಚನೆ ಮಾಡಬಹುದು ಅಂತಾ ಕಾಣ್ತಿದೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೊಡದೇ ಇದ್ರೆ ಯಾವುದನ್ನು ತನಿಖೆ ಮಾಡೋ ಆಗಿಲ್ಲ. ಸಿಎಂ ಆಗಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಅಗಲ್ಲ. ಕ್ರಿಮಿನಲ್ ಕಾನೂನು ಪ್ರಾರಂಭ ಮಾಡಲು ಎರಡು ವಿಧಾನ ಇದೆ. ಒಂದು ಪೊಲೀಸ್ ಠಾಣೆಗೆ ತೆರಳಿ ನೇರವಾಗಿ ದೂರು ಕೊಡಬಹುದು. ಅಥವಾ ಕೋರ್ಟ್ ಮೊರೆ ಹೋಗಬಹುದು. ಸದ್ಯಕ್ಕೆ ರಾಜ್ಯಪಾಲರು ಹಾಗು ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಹಗ್ಗಾಜಗ್ಗಾಟದಲ್ಲಿ ಆ ಸ್ಥಿತಿ ನಿರ್ಮಾಣ ಆಗಿಲ್ಲ ಎಂದಿದ್ದಾರೆ.
ಕೃಷ್ಣಮಣಿ





