2024ರ ವಿಶ್ವವಿಖ್ಯಾತ ಮೈಸೂರು ದಸರಾ (mysuru dasara) ಮಹೋತ್ಸವಕ್ಕೆ ಗಜಪಡೆ ಆಯ್ಕೆ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ (Forest department) ಸಜ್ಜಾಗಿದೆ. ದಸರಾ ಮಹೋತ್ಸವದ ಕೇಂದ್ರ ಬಿಂದು ಗಜಪಡೆ, ಹೀಗಾಗಿ 18 ಆನೆಗಳನ್ನ ಅರಣ್ಯ ಇಲಾಖೆ ಗುರುತಿಸಿದೆ. ಮೊದಲ ಹಂತದಲ್ಲಿ 9 ಆನೆಗಳು ಆಗಮಿಸಲಿವೆ.
ದಸರಾ ಮಹೋತ್ಸವದ 2 ತಿಂಗಳ ಮುಂಚಿತವಾಗಿ ಗಜಪಡೆ ಮೈಸೂರಿಗೆ (Mysuru) ಆಗಮಿಸಲಿವೆ. ಆಗಸ್ಟ್ (August) 9 ಅಥವಾ 11ಕ್ಕೆ ಗಜಪಯಣಕ್ಕೆ ಚಿಂತನೆ ನಡೆಸಲಾಗಿದೆ. 18 ಆನೆಗಳನ್ನ ದಸರಾ ಮಹೋತ್ಸವಕ್ಕೆ ಕರೆ ತರಲು ಸಿದ್ಧತೆ ನಡೆಸಿದ್ದು, 4 ಹೆಚ್ಚುವರಿ ಆನೆಗಳನ್ನ ಸಹ ಗುರುತಿಸಲಾಗಿದೆ.
ಆಗಸ್ಟ್ 9 ಅಥವಾ 11ಕ್ಕೆ ಗಜಪಡೆಯನ್ನ ಸಾಂಸ್ಕೃತಿಕ ನಗರಿ ಮೈಸೂರಿಗೆ ಕರೆತರಲು ಯೋಜನೆ ಹಾಕಿಕೊಳ್ಳಲಾಗಿದೆ.18 ಆನೆಗಳ ಜೊತೆಗೆ ನಾಲ್ಕು ಹೆಚ್ಚುವರಿ ಆನೆಗಳನ್ನ ಸಹ ಗುರುತಿಸಲಾಗಿದೆ.ಈ ಭಾರಿಯು ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು (Abhimanyu) ಹೆಗಲಿಗೆ ನೀಡಲಾಗಿದೆ.
ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು, ಭೀಮ, ಹೊಸ ಆನೆ ಏಕಲವ್ಯ, ವರಲಕ್ಷ್ಮಿ, ಧನಂಜಯ, ಗೋಪಿ, ರೋಹಿತ, ವರಲಕ್ಷ್ಮಿ, ಕಂಜನ್, ಆನೆಗಳು ಆಗಮಿಸಲಿವೆ. ಎರಡನೇ ಹಂತದಲ್ಲಿ ಪ್ರಶಾಂತ, ಸುಗ್ರೀವ, ಮಹೇಂದ್ರ, ಲಕ್ಷ್ಮಿ, ಹಿರಣ್ಯ ಆನೆಗಳು ಆಗಮಿಸುವ ಸಾಧ್ಯತೆಯಿದೆ.