ರಾಮನಗರ ಜಿಲ್ಲೆ ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡ ರಂಗೇರುತ್ತಿದೆ. ಕಾಂಗ್ರೆಸ್ ಹಾಗು ಮೈತ್ರಿ ಅಭ್ಯರ್ಥಿ ಫೈಟ್ ನಡುವೆ ಸ್ವತಂತ್ರ ಅಭ್ಯರ್ಥಿ ಕ್ಯಾಂಪೇನ್ ಶುರು ಮಾಡಿದ್ದಾರೆ. ಕಾಂಗ್ರೆಸ್ನಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರವಾಸ ಮಾಡ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕುಮಾರಸ್ವಾಮಿ ಹಾಗು ಸಿ ಪಿ ಯೋಗೇಶ್ವರ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ನಡುವೆ ಸ್ವತಂತ್ರ ಅಭ್ಯರ್ಥಿ ಎಲ್.ನಾಗರಾಜು ಎಂಬುವರು ಕ್ಯಾಂಪೇನ್ ಶುರು ಮಾಡಿದ್ದಾರೆ.
ಆಟೋ ಮೂಲಕ ಚನ್ನಪಟ್ಟಣ ನಗರದಲ್ಲಿ ಪ್ರಚಾರ ಪ್ರಾರಂಭಿಸಿರುವ ನಾಗರಾಜು, 1996 ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಆಗಿದ್ದರು ಎನ್ನಲಾಗಿದೆ. ಈಗ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಳ್ತಿದ್ದಾರೆ. ಆಟೋದಲ್ಲಿ ಕುಳಿತು ಪ್ರಚಾರ ಮಾಡ್ತಿದ್ದು, ಕರಪತ್ರ ಹಂಚಿಕೆ ಮಾಡಿ ಮತ ನೀಡುವಂತೆ ಕೇಳುತ್ತಿದ್ದಾರೆ.
ಮೂಲತಃ ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದವರಾಗಿರುವ ನಾಗರಾಜು, ಚನ್ನಪಟ್ಟಣದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ಶುರು ಮಾಡಿದ್ದಾರೆ. ನಾನು ಸಾರ್ವಜನಿಕರ ಪರವಾಗಿ ಇರುತ್ತೇನೆ. ನನಗೆ ಚನ್ನಪಟ್ಟಣದ ಜನರು ಆಶೀರ್ವಾದ ಮಾಡಲಿ ಎಂದು ಮನವಿ ಮಾಡುತ್ತಿದ್ದಾರೆ. ನಗರದಲ್ಲಿ ಕರಪತ್ರ ಹಂಚಿ ಜನರಲ್ಲಿ ಮನವಿ ಮಾಡಿದ್ದಾರೆ ನಾಗರಾಜು.