ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action prince Druva sarja) ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ (Gym trainer prashanth poojari) ಮೇಲೆ ಕೆಲ ದಿನಗಳ ಹಿಂದೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.ನಟ ಧ್ರುವ ಸರ್ಜಾಗೆ ಹತ್ತಿರವಾಗೋ ಉದ್ದೇಶದಿಂದ ಈ ರೀತಿ ಪ್ಲಾನ್ ಮಾಡಿ ಹಲ್ಲೆ ನಡೆಸಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಬನಶಂಕರಿ ಪೊಲೀಸರು (Banashankari police) ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಾಗ ಒಂದೊಂದೇ ವಿಚಾರಗಳು ಬೆಳಕಿಗೆ ಬಂದಿದೆ. ಸದ್ಯ ತನಿಖಾಧಿಕಾರಿಗಲು ಅಸಲಿ ಸತ್ಯ ಬಯಲು ಮಾಡಿದ್ದು, ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದ ಹರ್ಷ ಮತ್ತು ಸುಭಾಷ್ ಧ್ರುವ ಸರ್ಜಾನ ಕಾರು ಚಾಲಕ ನಾಗೇಂದ್ರನ (Nagendra) ಸ್ನೇಹಿತರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ನಟ ಧ್ರುವ ಸರ್ಜಾಗೆ ಇತ್ತೀಚೆಗೆ ಬಹಳ ಹತ್ತಿರವಾಗಿದ್ದನ್ನು ಸಹಿಸಿಕೊಳ್ಳಲಾಗದೇ, ಚಾಲಕ ನಾಗೇಂದ್ರ ಈ ರೀತಿ ಹಲ್ಲೆ ಮಾಡಿಸಿದ್ದಾನೆ ಅಂತ ಪೊಲೀಸ್ರು ತಿಳಿಸಿದ್ದಾರೆ. ಹೀಗಾಗಿ ಈ ಬಗ್ಗೆ ದ್ರುವ ಸರ್ಜಾ ಕೂಡ ಹೆಚ್ಚೇನು ಪ್ರತಿಕ್ರಿಯಿಸದೇ ಅಂತರ ಕಾಯ್ದುಕೊಂಡಿದ್ದಾರೆ.