ದರ್ಶನ್ ಅಭಿನಯಿಸಿದ್ದ ಚಿಂಗಾರಿ ಸಿನಿಮಾದ ನಿರ್ಮಾಪಕ ಮಹದೇವ್ ಮಾಧ್ಯಮಗಳ ಜೊತೆ ಮಾತನಾಡಿ ಬೇಸರ ಹೊರ ಹಾಕಿದ್ದಾರೆ. ಚಿಂಗಾರಿ ಸಿನಿಮಾ ಸಂದರ್ಭದಲ್ಲಿ ದರ್ಶನ್ ನಮ್ಮ ಜೊತೆ ಚೆನ್ನಾಗಿದ್ರು, ಸಿನಿಮಾದಲ್ಲಿ ಹಣ ಬಂದ್ರೂ ನಮಗೆ ನೆಮ್ಮದಿ ಇರಲಿಲ್ಲ. ಸಿನಿಮಾ ರಿಲೀಸ್ ವೇಳೆ ಯಾರದ್ದೋ ಮಾತು ಕೇಳಿ ಪಬ್ಲಿಸಿಟಿ ವಿಚಾರವಾಗಿ ಜಗಳ ಆಡಿದ್ರು. ದರ್ಶನ್ ಮೂರನೇ ವ್ಯಕ್ತಿಗಳ ಮಾತು ಕೇಳೊದು ಜಾಸ್ತಿ. ನಮ್ಮ ಸಿನಿಮಾ ವೇಳೆ ದರ್ಶನ್ ಜೊತೆ ಈಗ ಇರುವವರು ಇರಲಿಲ್ಲ ಎಂದಿದ್ದಾರೆ. ಆದರೆ ಹೇಳಿಕೆ ಮಾತು ಕೇಳಿದ್ದರಿಂದಲೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಅಂತಾನೂ ತಿಳಿಸಿದ್ದಾರೆ. ಇನ್ನು ದರ್ಶನ್ ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲಿ. ತಪ್ಪು ಮಾಡದಿದ್ರೆ ಕಳಂಕ ರಹಿತರಾಗಿ ಹೊರಬರಲಿ. ಪವಿತ್ರಗೌಡ ಬಗ್ಗೆ ನಮಗೆ ಈಗ ಗೊತ್ತಾಗ್ತಿದೆ. ಒಂದು ಹೆಣ್ಣಾಗಿ ಮದುವೆ ಆದವರ ಬಾಳಲ್ಲಿ ಆಕೆ ಬರಬಾರದಿತ್ತು ಎಂದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ನಿರ್ಮಾಪಕ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಸಹೋದರ ಚಿನ್ನೇಗೌಡ ಮಾತನಾಡಿ, ಮೀನಾ ತೂಗದೀಪ್ ಶ್ರೀನಿವಾಸ್ ಬಹಳ ಕಷ್ಟ ಪಟ್ಟು ಮಕ್ಕಳನ್ನ ಸಾಕಿ ಬೆಳೆಸಿದ್ರು. ದರ್ಶನ್ಗೆ ನಟನೆ ಕಲಿಯಲು ಮದ್ರಾಸ್ಗೆ ನಾನು ಕಳುಹಿಸಿದ್ದೆ.. ಪಾರ್ವತಮ್ಮ ರಾಜ್ಕುಮಾರ್ ಕೂಡ ದರ್ಶನ್ಗೆ ಸಪೋರ್ಟ್ ಮಾಡಿದ್ದರು. ದರ್ಶನ್ಗೆ ಭಗವಂತ ಎಲ್ಲವನ್ನೂ ಕೊಟ್ಟಿದ್ದ. ಆದ್ರೆ ಈಗ ಹೀಗಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನದ ಬಗ್ಗೆ ನಟ ಅನಿರುದ್ಧ್ ಮಾತನಾಡಿ, ದರ್ಶನ್ ಬಂಧನ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಅನ್ನೋದು ಸಮಂಜಸ ಅಲ್ಲ.. ದರ್ಶನ್ ಒಳ್ಳೆಯ ನಟರು, ಅವರ ಜೀವನದಲ್ಲಿ ಈ ಘಟನೆ ಆಗಬಾರದಿತ್ತು. ಪ್ರಕರಣದ ತನಿಖೆ ನಡೆಯುತ್ತಿದೆ. ಎಲ್ಲರಿಗೂ ಇದೊಂದು ಎಚ್ಚರಿಕೆ ಗಂಟೆ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಕಾನೂನು ಇದೆ, ಕಾನೂನಿಗೆ ನಾವು ಬದ್ಧವಾಗಿರಬೇಕು.. ಸೈಬರ್ ಪೊಲೀಸರಿಗೆ ದೂರು ಕೊಟ್ಟಿದ್ದರೆ ಸಾಕಾಗಿತ್ತು ಎಂದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರವಾಗಿ ಮಾತನಾಡಿದ್ದ ನಟ ಪ್ರಥಮ್ಗೆ ದರ್ಶನ್ ಅಭಿಮಾನಿಗಳು ಜೀವ ಬೆದರಿಕೆ ಹಾಕ್ತಿದ್ದಾರಂತೆ.. ಈ ವಿಚಾರವಾಗಿ ನಟ ಪ್ರಥಮ್ ಜ್ಞಾನ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ಪ್ರಥಮ್ ನಮ್ಮ ಸಿನಿಮಾ ತಂಡದ ನಂಬರ್ಗೆ ಅನೇಕರು ಬೆದರಿಕೆ ಕರೆ ಮಾಡುತ್ತಿದ್ದಾರೆ. ಅಂಧಾಭಿಮಾನಿಗಳಿಗೆ ಮಾತ್ರ ಹೇಳುತ್ತಿದ್ದೇನೆ, ಅಪ್ಪ ಅಮ್ಮನನ್ನು ನೋಡಿಕೊಳ್ಳಿ, ಬದುಕು ಚೆನ್ನಾಗಿ ಕಟ್ಟಿಕೊಳ್ಳಿ. ನನಗೆ ವಾರ್ನ್ ಮಾಡೋ ಸಮಯವನ್ನು ಅಮ್ಮ ಅಪ್ಪನಿಗೆ ಮೀಸಲಿಡಿ ಎಂದಿದ್ದಾರೆ.