ತಮ್ಮ ಮನೆ ಕೆಲಸದಾಕೆ ಕಿಡ್ನಾಪ್ ಆರೋಪ ಪ್ರಕರಣದಲ್ಲಿ (Kidnap case) ಭವಾನಿ ರೇವಣ್ಣಗೆ (Bhavani revanna) ಬಿಗ್ ರಿಲೀಫ್ ಸಿಕ್ಕಿದೆ. ಇವತ್ತಿಗೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ (High court) ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.
ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ಹೈಕೋರ್ಟ್ ಭವಾನಿ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಆದ್ರೆ ಇದೀಗ ಸಂತ್ರಸ್ತೆ ಭವಾನಿ ರೇವಣ್ಣ ಆಹಾರ ಮತ್ತು ಬಟ್ಟೆ ನೀಡಿರೋದಾಗಿ ಹೇಳಿದ್ದು, ಇದನ್ನ ಪರಿಗಣಿಸಿದ ಕೋರ್ಟ್ ಅನಗತ್ಯವಾಗಿ ಅವರನ್ನ ಬಂಧಿಸೋದು ಬೇಡವೆಂದಿದೆ.
ಈ ಹಿನ್ನಲೆ ಇದೀಗ ಹೈಕೋರ್ಟ್ನೀಡಿದ್ದ ಮಧ್ಯಂತರ ಜಾಮೀನನ್ನ ನಿರೀಕ್ಷಣಾ ಜಾಮೀನಾಗಿ ಕಾಯಂಗೊಳಿಸಿದ್ದು,ಭವಾನಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ.