ರೇಣುಕಸ್ವಾಮಿ (Renuka swamy) ಕೊಲೆಯನ್ನ ನಾನು ಮಾಡಿಲ್ಲ ಎಂದು ಆರೋಪಿ ದರ್ಶನ್ (Actor darshan) ಹೇಳಿದ್ದಾರೆ.ಇನ್ನು ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೋಲಿಸರು ಆರೋಪಿ ದರ್ಶನ್ಗೆ ಹಲವಾರು ಪ್ರಶ್ನೆ ಕೇಳಿದ್ದಾರೆ.
ಈ ವೇಳೆ ದರ್ಶನ್, ಪವನ್ನಿಂದ (Pawan) ಪವಿತ್ರಾಗೆ (Paitra gowada) ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು. ಹೀಗಾಗಿ ರಾಘವೇಂದ್ರನಿಗೆ ರೇಣುಕಾಸ್ವಾಮಿಯನ್ನು ಕರೆತರುವಂತೆ ಸೂಚಿಸಿದ್ದೆ. ಬಳಿಕ ಜೂನ್ 8ರ ಶನಿವಾರ ಸಂಜೆ ಶೆಡ್ನಲ್ಲಿ ರೇಣುಕಸ್ವಾಮಿಯನ್ನ ಭೇಟಿಯಾಗಿ ಇನ್ನೊಂದ್ ಸಲ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಅಂತಾ ವಾರ್ನ್ ಮಾಡಿದ್ದೆ ಅಷ್ಟೇ ಎಂದು ಹೇಳಿದ್ದಾರೆ.
ನಂತರ ಆತನಿಗೆ ನಾನೇ ದುಡ್ಡು ಕೊಟ್ಟು, ಊಟ ಮಾಡ್ಕೊಂಡು ಊರು ಸೇರುವಂತೆ ಹೇಳಿ ಅಲ್ಲಿಂದ ಹೊರಟೆ ಅಷ್ಟೆ.ಆದ್ರೆ ನಾನು ಈ ಕೊಲೆಯನ್ನು ಮಾಡಿಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.