![](https://pratidhvani.com/wp-content/uploads/2024/06/Darshan.jpg)
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪವಿತ್ರಾ ಗೌಡ ಜೊತೆ ತನಿಖೆ ಎದುರಿಸುತ್ತಿದ್ದಾರೆ. ಇತ್ತ ಮೈಸೂರಲ್ಲಿ ಆಡಿ ಬೆಳೆದ ನಟ ದರ್ಶನ್ ಮನೆಯಲ್ಲಿ ಮೌನ ಆವರಿಸಿದೆ.
![](https://pratidhvani.com/wp-content/uploads/2024/06/Screenshot_20240612-221205-1024x747.jpg)
ತಾಯಿ ಮೀನಾ ತೂಗುದೀಪ ಮೈಸೂರಿನ ‘ಮುಪಾ’ ಕೃಪ ಮನೆಯಲ್ಲೇ ಇದ್ದಾರೆ. ಮಾಧ್ಯಮಗಳ ಜೊತೆ ಮಾತಾಡಲು ನಿರಾಕರಿಸಿದ್ದಾರೆ. ಮೈಸೂರಿನ ಸಿದ್ದಾರ್ಥ ನಗರ ತೂಗುದೀಪ ಶ್ರೀನಿವಾಸ್ ಅವರ ಮನೆಯಿದೆ.
![](https://pratidhvani.com/wp-content/uploads/2024/06/Screenshot_20240612-221142-1024x779.jpg)
30 ವರ್ಷಗಳ ಹಿಂದೆ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸಹಾಯ ಮಾಡಿದ ಪರಿಣಾಮ ನಟ ತೂಗುದೀಪ ಶ್ರೀನಿವಾಸ್ ಮನೆ ನಿರ್ಮಿಸಿದ್ರು.
![](https://pratidhvani.com/wp-content/uploads/2024/06/download-18.jpeg)
ಇದಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮನೆಗೆ ಮುಪ ನಿಲಯ ಅಂತ ಹೆಸರಿಟ್ಟಿದ್ರು. ಸದ್ಯ ದರ್ಶನ್ ರಿಂದ ಅಂತರ ಕಾಯ್ದುಕೊಂಡಿರುವ ತಾಯಿ ಮೀನಾ ತೂಗುದೀಪ ಇದೇ ಮನೆಯಲ್ಲೇ ವಾಸವಾಗಿದ್ದಾರೆ.