ಪ್ರಜ್ವಲ್ ರೇವಣ್ಣ(Prajwal Revanna) ವಿಡಿಯೋ ಕೇಸ್ನಲ್ಲಿ ರಾಜ್ಯ ಸರ್ಕಾರ(State Government) ತನಿಖೆ ನಡೆಸುತ್ತಿದ್ದು, ಇಲ್ಲೀವರೆಗೂ ಪ್ರಜ್ವಲ್ ರೇವಣ್ಣ ವಿಚಾರಣೆ ಸಾಧ್ಯವಾಗಿಲ್ಲ. ಎಸ್ಐಟಿ ರಚನೆ ಆಗುವ ಮುನ್ನವೇ ದೇಶ ಬಿಟ್ಟು ತೆರಳಿರುವ ಸಂಸದ ಪ್ರಜ್ವಲ್ ರೇವಣ್ಣ, SIT ರಚನೆ ಆದ ಬಳಿಕ ದೇಶಕ್ಕೆ ವಾಪಸ್ ಆಗುವ ಮನಸ್ಸು ಮಾಡಿಲ್ಲ. ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ಬಳಸಿ ಸಂಚಾರ ಮಾಡುತ್ತಿರುವ ಕಾರಣಕ್ಕೆ ಪ್ರಜ್ವಲ್ ರೇವಣ್ಣ ಅವರನ್ನು ತಡೆಯುವುದಕ್ಕೆ ಹಾಗು ಬಂಧಿಸುವುದಕ್ಕೆ ತಡೆ ಆಗ್ತಿದೆ ಅನ್ನೋದು ರಾಜ್ಯ ಸರ್ಕಾರದ ಆರೋಪ. ಇದೇ ಕಾರಣಕ್ಕೆ ಪ್ರಜ್ವಲ್ ರೇವಣ್ಣ ಬಳಸುತ್ತಿರುವ ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್(Diplomatic Passport) ರದ್ದು ಮಾಡುವಂತೆ ಕೇಂದ್ರದ(Center) ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿಗೆ(Narendra Modi) ಈಗಾಗಲೇ ಒಮ್ಮೆ ಪತ್ರವೊಂದನ್ನು ಬರೆದಿದ್ದ ಸಿಎಂ ಸಿದ್ದರಾಮಯ್ಯ, ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ(CM Siddaramaiah) ನರೇಂದ್ರ ಮೋದಿಗೆ ಮತ್ತೊಂದು ಪತ್ರ ಬರೆದಿದ್ದು, ಕೂಡಲೇ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಬಳಸುತ್ತಿರುವ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಆಗ್ರಹ ಮಾಡಲಾಗಿದೆ. ಪೆನ್ಡ್ರೈವ್ ಕೇಸ್ ಬಳಿಕ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣನನ್ನು ವಾಪಸ್ ಕರೆತರುವ ನಮ್ಮ ಪ್ರಯತ್ನಕ್ಕೆ ಸಮಸ್ಯೆ ಆಗಿದೆ. ಕೂಡಲೇ ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ರದ್ದು(Diplomatic Passport) ಮಾಡಿ ಎಂದು ಆಗ್ರಹ ಮಾಡಿದ್ದಾರೆ.
ಈಗಾಗಲೇ ಪೆನ್ಡ್ರೈವ್ ಪ್ರಕರಣದ ಬಗ್ಗೆ ತನಿಖೆ(Investigation) ನಡೆಯುತ್ತಿದೆ. ಆರೋಪಿಯನ್ನು ವಿಚಾರಣೆ ಮಾಡಬೇಕಿದೆ. ನ್ಯಾಯಸಮ್ಮತ(Legitimate) ವಿಚಾರಣೆಗೆ ಆರೋಪಿ ಹಾಜರಿ ಮುಖ್ಯವಾಗಿದೆ. ನಾನು ಈಗಾಗಲೇ ಒಮ್ಮೆ ಈ ವಿಚಾರದಲ್ಲಿ ಪತ್ರ ಬರೆದು ಮನವಿ ಮಾಡಿದ್ದೆ. ಇದೀಗ ಮತ್ತೊಮ್ಮೆ ಪತ್ರ ಬರೆದು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇನೆ. ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ(Accused) ಪ್ರಜ್ವಲ್ ರೇವಣ್ಣನನ್ನು ವಾಪಸ್ ಕರೆತರಲು ಕೇಂದ್ರದ ಸಂಸ್ಥೆಗಳ ಸಹಾಯ ಅಗತ್ಯವಿದೆ. ಡಿಪ್ಲೊಮ್ಯಾಟಿಕ್ ಪಾರ್ಸ್ಪೋರ್ಟ್ ಬಳಸುತ್ತಿರುವುದು ಆರೋಪಿಯನ್ನು ಕರೆತರಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು(Officers) ಕೇಂದ್ರ ಸಂಸ್ಥೆಗಳಿಗೆ ಪತ್ರ ಬರೆದು ಅವಶ್ಯಕತೆ ಇರುವ ವಿಚಾರವನ್ನು(Idea) ಗಮನಕ್ಕೆ ತರುವುದು ಅಗತ್ಯ. ಇದನ್ನು ಈಗಾಗಲೇ ಎಸ್ಐಟಿ ಅಧಿಕಾರಿಗಳೂ ಕೂಡ ಮಾಡಿದ್ದಾರೆ. ಆದರೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವ ಕೆಲಸ ಮಾಡುತ್ತಿರುವುದರಲ್ಲಿ ತಪ್ಪೇನು ಇಲ್ಲ ಎನಿಸುತ್ತದೆ. ತನಿಖೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡುವ ಕೆಲಸ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಇಂದಲ್ಲ ನಾಳೆ ರಾಜ್ಯಕ್ಕೆ ಬಂದೇ ಬರುತ್ತಾರೆ. ವಿದೇಶದಲ್ಲೇ(Abroad) ಅಡಗಿ ಕೂರುವುದು ಸಾಧ್ಯವಿಲ್ಲ. ಆದರೆ ಆದಷ್ಟು ಬೇಗ ಕರೆತರಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಸಿದ್ದರಾಮಯ್ಯ ಪತ್ರಕ್ಕೆ(Letter) ಈ ಹಿಂದೆ ಪ್ರತ್ಯುತ್ತರ ನೀಡದ ಪ್ರಧಾನಿ ಮೋದಿ ಈ ಪತ್ರಕ್ಕೆ ಉತ್ತರ(Answer) ಕೊಡ್ತಾರಾ ಕಾದು ನೋಡ್ಬೇಕು.
ಕೃಷ್ಣಮಣಿ
Prajwal Reavanna
Siddramaiah
Narendra Modi
Cm Letter
SIT