ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂಗಾರು(Pre-Monsoon) ಆರಂಭಕ್ಕೂ ಮುನ್ನವೇ ರಾಜ್ಯದ ಜಲಾಶಯಗಳು ಭರ್ತಿಯಾಗುವ ಲಕ್ಷಗಳು ಗೋಚರಿಸುತ್ತಿವೆ. ಕಾವೇರಿ ನದಿ(Kaveri River) ಉಗಮ ಸ್ಥಾನ ಕೊಡಗಿನಲ್ಲಿ ಮಳೆ ಪ್ರಮಾಣ ಹೆಚ್ಚಳವಾಗಿದ್ದು, ಮಳೆಯ ಆರ್ಭಟಕ್ಕೆ ರಸ್ತೆ ಕೊಚ್ಚಿಹೋದ ಘಟನೆ ಕೊಪ್ಪ(Koppa) ಸಮೀಪದ ಹಾರನಹಳ್ಳಿ ನಡೆದಿದೆ. ಹಳ್ಳದ ನೀರು ಹರಿಯುವ ಸೇತುವೆ ಪಕ್ಕದಲ್ಲಿ ಮಣ್ಣು ಕೊಚ್ಚಿ ಹೋಗಿತ್ತು. ಆ ಬಳಿಕ ಜನರು ನೋಡುತ್ತಿದಂತೆಯೇ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಹಲವು ಗ್ರಾಮಗಳಿಗೆ ತೆರಳುವ ಮಾರ್ಗ ಇದಾಗಿದ್ದು, ಹಾರನಹಳ್ಳಿ ಗ್ರಾಮದಿಂದ ಕುಶಾಲನಗರ(Kushalnagara) ಮತ್ತು ಪಿರಿಯಾಪಟ್ಟಣಕ್ಕೆ ತೆರಳುವ ರಸ್ತೆ ಸಂಪರ್ಕ ಸ್ಥಗಿತವಾಗಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ(Chikmagaluru) ಮುಂಗಾರು ಪೂರ್ವ(Pre-Monsoon) ಮಳೆ ಆರ್ಭಟ ಜೋರಾಗಿದ್ದು, ವರುಣಾರ್ಭಟಕ್ಕೆ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಬಿರುಗಾಳಿ(Storm) ಸಹಿತ ಸುರಿದ ಧಾರಾಕಾರ ಮಳೆಗೆ ಬೃಹತ್ ಮರಗಳು ಧರೆಗುರುಳಿದ ಘಟನೆ ನಡೆದಿದೆ. ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಮರ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ತರೀಕೆರೆ(Tarikere) ತಾಲೂಕಿನ ತಾವರೆಕೆರೆ(Tavarkere) ಗ್ರಾಮದ ಬಳಿ ಘಟನೆ ನಡೆದಿದ್ದು, ತರೀಕೆರೆ, ಅಜ್ಜಂಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತ ಆಗಿತ್ತು. ರಾತ್ರಿಪೂರ್ತಿ ವಿಪತ್ತು ನಿರ್ವಹಣಾ ತಂಡ ಹಾಗು ಪೊಲೀಸ್(Police) ಸಿಬ್ಬಂದಿ ಮರ ಹಾಗು ವಿದ್ಯುತ್ ಕಂಬಗಳ ತೆರವು ಮಾಡಿದ್ದಾರೆ.
ಬಯಲು ಸೀಮೆಯಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕಡೂರು, ತರೀಕೆರೆ ತಾಲೂಕಿನಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ನಿನ್ನೆ ಸಂಜೆಯಿಂದ(Evening) ಸುರಿದ ಭಾರೀ ಮಳೆ ಸಾಲು ಸಾಲು ಅವಾಂತರ ಸೃಷ್ಟಿಯಾಗಿದ್ದು, ಕಡೂರು ತಾಲೂಕಿನ ಕೆರೆಸಂತೆ, ಹೇಮರಿ ಭಾಗದಲ್ಲಿ ಭಾರೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಶುಂಠಿ ಬೆಳೆಗಾರರು ಕಂಗಾಲಾಗಿದ್ದಾರೆ. ಜಮೀನಿಗೆ ಭಾರೀ ಪ್ರಮಾಣದ ನೀರು ನುಗ್ಗಿದ್ದರಿಂದ ಬೆಳೆ ನಾಶವಾಗುವ ಭೀತಿ ಎದುರಾಗಿದೆ. ಬೆಂಗಳೂರು-ಹೊನ್ನಾವರ(Bangalore-Honnavara) ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್(Traffic Jam) ಸೃಷ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ 2-3 ಅಡಿ ನೀರು ಸಂಗ್ರಹವಾಗಿದೆ.
ದೊಡ್ಡಬಳ್ಳಾಪುರದಲ್ಲಿ(Doddaballapur) ರಾತ್ರಿ ಸುರಿದ ಮಳೆಗೆ ಮನೆಗಳು ಹಾನಿಯಾಗಿವೆ. ಸುತ್ತಮುತ್ತಲಿನ ಗುಂಡಿಗಳಿಗೆ ಮಳೆ ನೀರು(Rain Water) ತುಂಬಿಕೊಂಡ ಪರಿಣಾಮ ದೊಡ್ಡಬಳ್ಳಾಪುರ ತಾಲೂಕಿನ(Taluk) ಅಜ್ಜನಕಟ್ಟೆಯಲ್ಲಿ ದಲಿತ ಕುಟುಂಬಗಳು ವಾಸವಿರುವ ಕಾಲೋನಿಗೆ ನೀರು ನುಗ್ಗಿದೆ. 20ಕ್ಕೂ ಹೆಚ್ಚು ಕುಟುಂಬಗಳು(Families) ವಾಸವಿರುವ ಕಾಲೋನಿಗೆ ಜಲದಿಗ್ಬಂಧನ ಆಗಿದ್ದು, ಜನರ ಓಡಾಟಕ್ಕೂ ಅಡ್ಡಿಯಾಗಿದೆ. ಕೆಸರಲ್ಲಿ ಬೀಳುವ ಆತಂಕದಲ್ಲಿಯೇ ಜನರು(Peoples) ಓಡಾಡುವಂತಾಗಿದೆ. ಮಳೆ ನೀರು ನುಗ್ಗಿದ್ರಿಂದ ರಾತ್ರಿ ವೇಳೆ ಮನೆಗೆ ಹಾವು, ಚೇಳು ಬರುತ್ತಿವೆ ಎಂದು ಕಾಲೋನಿಯ(Colony) ನಿವಾಸಿಗಳು ಆರೋಪಿಸಿದ್ದಾರೆ.