ಇತ್ತೀಚೆಗೆ ಹೆಚ್.ಡಿ.ಕುಮಾರಸ್ವಾಮಿ (HD kumarswamy) ವಿರುದ್ಧ ಕೆಂಡ ಕಾರಿದ್ದ ಡಿ.ಕೆ.ಶಿವಕುಮಾರ್ (DK Shivakumar) ಧಿಡೀರ್ ಅಲರ್ಟ್ ಆಗಿದ್ದಾರೆ. ಕುಮಾರಸ್ವಾಮಿಗೆ ಬೈದ್ರೆ ಎಲ್ಲಿ ಒಕ್ಕಲಿಗೆ ಓಟುಗಳು ಕಾಂಗ್ರೇಸ್ (congress) ಕೈತಪ್ಪಲಿದ್ಯೋ ಎಂಬ ಲೆಕ್ಕಾಕ್ಕರದ ಹಿನ್ನಲೆ ಇದ್ದಕ್ಕಿದ್ದ ಹಾಗೇ ಮತ್ತೆ ಹೆಚ್ಡಿಕೆ ಮೇಲೆ ಡಿಕೆ ಸಾಫ್ಟ್ ಪಾಲಿಟಿಕ್ಸ್ (soft politics) ಮುಂದುವರೆಸಲು ಮುಂದಾಗಿದ್ದಾರೆ.

ನಿನ್ನೆ ಪರಸ್ಪರ ಏಕವಚನದಲ್ಲಿ ಒಬ್ಬರನ್ನೊಬ್ಬರು ಹಿಯ್ಯಾಳಿಸಿಕೊಂಡಿದ್ದ ನಾಯಕರು ಇಂದು ಕೊಂಚ ಕೂಲ್ ಆಗಿದ್ದಾರೆ. ನಿನ್ನೆಯಷ್ಟೇ ಕುಮಾರಸ್ವಾಮಿ ಮೋಸಗಾರ, ಸುಳ್ಳುಗಾರ ಆತ-ಈತ ಎಂಬ ಪದ ಪ್ರಯೋಗ ಮಾಡಿದ್ದ ಡಿಕೆ (DK) ಇಂದು ಸೈಲೆಂಟ್ (Slient) ಆಗಿದ್ದಾರೆ. ನನಗೆ ಕುಮಾರಸ್ವಾಮಿ ಅವರ ಮೇಲೆ ವೈಯಕ್ತಿಕವಾಗಿ ತುಂಬಾ ಗೌರವವಿದೆ ಎಂದು ಹೇಳಿದ್ದಾರೆ.

ಪದೇ ಪದೇ ಬಂಡೆ ಒಡೆದವನು,ಚೂರಿ ಹಾಕಿದವನು,ವಿಷ ಕೊಟ್ಟವನು ಎಂದು ಟೀಕಿಸಿದ್ರೆ ನನಗೂ ಬೇಸರವಾಗುತ್ತೆ. ನಾನು ಈ ಬಗ್ಗೆ ವಿಧಾನಸಭೆಯಲ್ಲಿ (Assembly) |ಚರ್ಚೆ ಮಾಡಲು ಸಿದ್ದನಿದ್ದೇನೆ. ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಆದ್ರೆ ಅದೆಲ್ಲವನ್ನೂ ಬಿಟ್ಟು ಸಮ್ಮೆ ಈ ರೀತಿ ಟೀಕಿಸೋದು ಸರಿಯಲ್ಲ. ಗೌವರ ಕೊಟ್ಟಾಗ ಅದನ್ನ ಸ್ವೀಕರಿಸುವುದನ್ನ ಕಲಿಯಬೇಕು ಎಂದು ಹೇಳಿದ್ದಾರೆ.