ಬಿಜೆಪಿ ಮತ್ತು ಜೆಡಿಎಸ್ನ (Bjp-jds) ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಯನ್ನ (HD kumarswamy) ಮಂಡ್ಯದಲ್ಲಿ ಸೋಲಿಸಲೇ ಬೇಕು ಅಂತ ಕಾಂಗ್ರೆಸ್ (congress) ನಾಯಕರು ಪಣ ತೊಟ್ಟಿದ್ದಾರೆ.. ದೇವೇಗೌಡರ (Devegowda) ಕುಟುಂಬದ ವಿರುದ್ಧ ಸಿಎಂ ಸಿದ್ದರಾಮಯ್ಯ (siddaramaiah), ಡಿಸಿಎಂ ಡಿ.ಕೆ ಶಿವಕುಮಾರ್ (Dk shivakumar) ಸಾಲು ಸಾಲು ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಮಂಡ್ಯ ಮಣ್ಣಿನಲ್ಲಿ ಗೆದ್ದು ಬೀಗಲು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ( star chandru) ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕ ದಿನದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುಮಾರಸ್ವಾಮಿಯನ್ನ (HD kumarswamy) ವಿರುದ್ಧ ತೊಡೆತಟ್ಟಿರುವ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು, ಬೂತ್ ಮಟ್ಟದಲ್ಲಿ ಸಾಲು ಸಾಲು ಸಭೆಗಳನ್ನ ಮಾಡ್ತಿದ್ದಾರೆ. ಸ್ಥಳೀಯ ಮುಖಂಡರು.. ಸ್ಥಳೀಯ ನಾಯಕರು.. ಸ್ಥಳೀಯ ಕಾರ್ಯಕರ್ತರ ಜೊತೆ ಚುನಾವಣಾ ರಣತಂತ್ರವನ್ನ ರೂಪಿಸುತ್ತಿದ್ದಾರೆ..
ನಿನ್ನೆ ಮಂಡ್ಯ ಪಟ್ಟಣದ ಕೆ.ಆರ್.ನಗರ (kr nagar) ಬ್ಲಾಕ್ ಕಾಂಗ್ರೆಸ್ ಹಾಗೂ ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ (congress office) ಒಕ್ಕಲಿಗ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಇದೇ ವೇಳೆ ಮಾತನಾಡಿದ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (star chandru), ಎಲ್ಲಾ ಸಮುದಾಯದವರನ್ನ ಒಟ್ಟಿಗೆ ಕರೆದೊಯ್ಯುವ ಪಕ್ಷ ಕಾಂಗ್ರೆಸ್. ಈ ಚುನಾವಣೆಯಲ್ಲಿ ನಾನಾ ಸಮುದಾಯದ ಮುಖಂಡರು ನನ್ನನ್ನ ಬೆಂಬಲಿಸುತ್ತಿದ್ದು, ಒಕ್ಕಲಿಗ ಸಮಾಜ ಕೂಡ ನನ್ನನ್ನ ಬೆಂಬಲಿಸಿ ಆಶೀರ್ವದಿಸಬೇಕು ಅಂತ ಮನವಿ ಮಾಡಿದ್ದಾರೆ. ಅಂತಿಮವಾಗಿ ಮಂಡ್ಯದ (mandya) ಜನ ಯಾರಿಗೆ ಮನೆ ಹಾಕ್ತಾರೆ ಕಾದು ನೋಡಬೇಕಿದೆ