ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ದೇವೇಗೌಡ್ರು (HD Devegowda) ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮತ್ತೆ ಗುಡುಗಿದ್ದಾರೆ. ಇದೇ ಸಭೆಯಲ್ಲಿ ಮಾತನಾಡಿದ ದೇವೇಗೌಡ್ರು ಎಲ್ಲಿದೆ ಜೆಡಿಎಸ್ (Jds) ಅಂತ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಈ ಸಂತೆ ಮೈದಾನದಲ್ಲಿ ಸೇರಿರುವ ಪುಣ್ಯಾತ್ಮರು ನೀವು ಯಾವ ಪಾರ್ಟಿ ಅಂತ ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ ಸಿದ್ದರಾಮನ್ನಯನವರ ಗರ್ವಭಂಗ ಮಾಡಬೇಕು ಎಂದು ಹೇಳಿದ್ದ ಗೌಡ್ರು . ಈಗ ಮುಖ್ಯಮಂತ್ರಿಗಳ ಅಧಿಕಾರದ ಅಹಂ ಬಗ್ಗೆ ಮಾತನಾಡಿದ್ದಾರೆ. ಈ ಸಂತೇಮಾಳದಲ್ಲಿ ಜೆಡಿಎಸ್ ಇದೇ ಅನ್ನೋದನ್ನ ತೋರಿಸಲು ನೀವು ಇಲ್ಲಿ ಸೇರಿದ್ದೀರಾ ಎಂದು ಕಾರ್ಯಕರ್ತರನ್ನ ಹುರಿದುಂಬಿಸಿದ ಗೌಡ್ರು ಸಿದ್ದು ನೇರ ಸಂದೇಶ ರವಾನೆ ಮಾಡಿದ್ದಾರೆ.

ಕಾಂಗ್ರೇಸ್ (congress) ನಾಯಕರು ಜೆಡಿಎಸ್ ತೆಗಿತಿನಿ ಅಂತಾರೆ. ಯಾವ ಅಧಿಕಾರದ ಮದದಿಂದ ಈ ಮಾತು ಆಡುತ್ತಿದ್ದೀರೋ, ನಿಮ್ಮ ಆ ಅಹಂನ್ನು ಇಳಿಸುತ್ತೇನೆ ಎಂದು ದೇವೇಗೌಡ್ರು ಅಕ್ಷರಶಹಃ ಗುಡುಗಿದ್ದಾರೆ. ಕೇವಲ ನಾನು ಖುರ್ಚಿಯ ಮೇಲೆ ಕುಳಿತಿದ್ದೇನಿ ಅಷ್ಟೆ. ಆದರೆ ಬುದ್ದಿ ಕೆಲಸ ಮಾಡುತ್ತೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೇಸ್ಗೆ ಸೋಳಿನ ರುಚಿ ತೋರಿಸಿ ಅವರ ಅಹಂ ಗೆ ಕಡಿವಾಣ ಹಾಕ್ತಿವಿ ಅಂತ ದೇವೇಗೌಡ್ರು ಶಪತ ಮಾಡಿದ್ದಾರೆ.