• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಎರಡು ಮಹಾಕಾವ್ಯಗಳು ಮತ್ತು ಧರ್ಮದ ವ್ಯಾಖ್ಯಾನಧರ್ಮಶಾಸ್ತ್ರಗಳು ಮೇಲ್ಪದರದ ಗಣ್ಯ ಸಮಾಜಕ್ಕಾದರೆ ಮಹಾಕಾವ್ಯಗಳು ಸಾಮಾನ್ಯರಿಗಾಗಿದ್ದವು

ನಾ ದಿವಾಕರ by ನಾ ದಿವಾಕರ
February 4, 2024
in ಅಂಕಣ, ವಿಶೇಷ
0
ಎರಡು ಮಹಾಕಾವ್ಯಗಳು ಮತ್ತು ಧರ್ಮದ ವ್ಯಾಖ್ಯಾನಧರ್ಮಶಾಸ್ತ್ರಗಳು ಮೇಲ್ಪದರದ ಗಣ್ಯ ಸಮಾಜಕ್ಕಾದರೆ ಮಹಾಕಾವ್ಯಗಳು ಸಾಮಾನ್ಯರಿಗಾಗಿದ್ದವು
Share on WhatsAppShare on FacebookShare on Telegram


ದೇವದತ್ತ ಪಟ್ಟನಾಯಕ್‌
ಮೂಲ : Two epics and the Idea of Dharma – The Hindu 21-01-2024
ಅನುವಾದ : ನಾ ದಿವಾಕರ

ADVERTISEMENT

ರಾಮಾಯಣದ ಆರಂಭಿಕ ಪುನರಾವರ್ತನೆಗಳಲ್ಲಿ ಲಕ್ಷ್ಮಣರೇಖೆಯ ಉಲ್ಲೇಖ ಕಂಡುಬರುವುದಿಲ್ಲ. ಹಾಗೆಯೇ ಆರಂಭಿಕ ಮಹಾಭಾರತದ ಪುನರಾವರ್ತನೆಗಳಲ್ಲಿ ದ್ರೌಪದಿಯ ವಸ್ತ್ರಾಪಹರಣದ ಉಲ್ಲೇಖ ಕಾಣುವುದಿಲ್ಲ. ಈ ಎರಡೂ ಆಲೋಚನೆಗಳನ್ನು ಮಹಾಕಾವ್ಯಗಳ ನಂತರದ ಆವೃತ್ತಿಗಳಲ್ಲಿ ಗುರುತಿಸಬಹುದು. ಅಂದರೆ, ಸಂಸ್ಕೃತದಲ್ಲಿ ರಚಿಸಲ್ಪಟ್ಟ ಹಳೆಯ ಆವೃತ್ತಿಗಳು ಅಧಿಕೃತ ನಿರೂಪಣೆಗಳು ಎಂದೂ ಆನಂತರದಲ್ಲಿ ಉದ್ದೇಶಿತ ಜನರನ್ನು ತಲುಪುವ ಸಲುವಾಗಿ ಹೊಸ ಪದರಗಳನ್ನು ಸೇರ್ಪಡೆ ಮಾಡಲಾಯಿತು ಎಂದು ಭಾವಿಸಬಹುದೇ ?

ಮೂಲ ಭೂಗೋಳಶಾಸ್ತ್ರ:
ನಾವು ವೇದಕಾಲದ ರಚನೆಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ಅಲ್ಲಿ ದಶರಥ, ಶಂತನು, ಯಯಾತಿ, ಕೃಷ್ಣ ಮುಂತಾದ ಹೆಸರುಗಳು ಕಂಡುಬರುತ್ತವೆ. ಅಲ್ಲಿ ರಾಮಾಯಣ ಅಥವಾ ಮಹಾಭಾರತದ ಯಾವುದೇ ಕತೆಗಳನ್ನು ಕಾಣಲಾಗುವುದಿಲ್ಲ. ಈ ಕತೆಗಳ ಪ್ರಾಚೀನತೆಯ ಸಾಕ್ಷ್ಯ ಪುರಾವೆಗಳು ನಮಗೆ ಸ್ಪಷ್ಟವಾಗಿ ದೊರೆಯುವುದು ಗಂಗಾ ಜಲಾನಯನ ಪ್ರದೇಶದಿಂದ. 3000 ವರ್ಷಗಳ ಮುನ್ನ ಕೆಂಪು-ಕಪ್ಪು ವರ್ಣದ ಕುಂಬಾರಿಕೆಯ ಸ್ಥಾನವನ್ನು ಪೇಂಟ್‌ ಮಾಡಿದ Greyware ವಸ್ತುಗಳು ಆಕ್ರಮಿಸಿಕೊಂಡ ಕಾಲದಿಂದ ನಮಗೆ ಸಾಕ್ಷ್ಯಗಳು ಲಭ್ಯವಿದೆ. 21ನೆಯ ಶತಮಾನದ ಗ್ರಾಮಗಳ ಹೆಸರುಗಳು ಈ ಎರಡೂ ಕಾವ್ಯಗಳಲ್ಲಿ ಉಲ್ಲೇಖವಾಗುವುದನ್ನು ಇಲ್ಲಿ ಕಾಣಬಹುದು.

ನಾವು ಸಾಮಾನ್ಯವಾಗಿ ಕ್ರಿ ಶ 800ರ ಆಸುಪಾಸಿನ ವೇದೋತ್ತರ ಸಾಹಿತ್ಯಗಳಲ್ಲಿ ಇತಿಹಾಸ-ಪುರಾಣ ಎಂದ ಪದಬಳಕೆಯನ್ನು ಕಾಣುತ್ತೇವೆ. ಈ ಉಲ್ಲೇಖಗಳಲ್ಲಿ, ವೇದಸಾಹಿತ್ಯದ ನೂರಾರು ಕತೆಗಳನ್ನು ಕಾಣಬಹುದು. ಇವುಗಳಲ್ಲಿ ವಿವಿಧ ಮಂತ್ರಗಳು ಹೇಗೆ ಉಗಮಿಸಿದವು, ಈ ಮಂತ್ರಗಳು ಜನಸಾಮಾನ್ಯರಿಗೆ ಸಹಾಯಕವಾಗಲು ಹೇಗೆ ದೇವರನ್ನು ಆವಾಹನೆ ಮಾಡಲು ಬಳಕೆಯಾದವು, ವಿವಿಧ ಆಚರಣೆಗಳು ಹೇಗೆ ಉಗಮಿಸಿದವು ಎಂಬ ಉಲ್ಲೇಖಗಳು ದೊರೆಯುತ್ತವೆ. ಆದರೆ ಎಲ್ಲಿಯೂ ರಾಮಾಯಣ ಅಥವಾ ಮಹಾಭಾರತದ ಪ್ರಸ್ತಾಪ ಕಾಣಸಿಗುವುದಿಲ್ಲ. ಮಹಾಭಾರತ ಕಾವ್ಯವು ಇಂದಿನ ದೆಹಲಿ ಮತ್ತು ಗುಜರಾತ್‌ (ದ್ವಾರಕಾ) ನಡುವಿನ ಭೂ ಪ್ರದೇಶದಲ್ಲಿ ತೆರೆದುಕೊಳ್ಳುತ್ತದೆ. ರಾಮಾಯಣವು ಬಿಹಾರ (ವಿದೇಹ)ದಿಂದ ನರ್ಮದಾ ಕಡೆಗೆ ಚಲಿಸುವುದನ್ನು ಸೂಚಿಸುತ್ತದೆ. ರಾಮಾಯಣದ ಆರಂಭಿಕ ಹಸ್ತಪ್ರತಿಗಳಲ್ಲಿ ಎಲ್ಲಿಯೂ ಸಹ ಯಾವುದೇ ದಕ್ಷಿಣದ ನದಿಗಳ ಉಲ್ಲೇಖವನ್ನು ಕಾಣಲಾಗುವುದಿಲ್ಲ. ಪ್ರಾಚೀನ ಗ್ರಂಥಗಳ ಅನುಸಾರ ಕಿಷ್ಕಿಂದ ಮತ್ತು ಲಂಕಾ ಎರಡೂ ಪ್ರದೇಶಗಳು ಸಾಲ ವೃಕ್ಷಗಳಿಂದ (Sal trees) ಕೂಡಿದ್ದವು. ಈ ವೃಕ್ಷಗಳನ್ನು ಇಂದು ಒಡಿಷಾ, ಜಾರ್ಖಂಡ್‌ ಮತ್ತು ಛತ್ತಿಸ್‌ಘಡಗಳಲ್ಲಿ ಕಾಣಬಹುದೇ ಹೊರತು ದಕ್ಷಿಣ ಭಾರತದಲ್ಲಿ ಇಲ್ಲ.

ಮೌರ್ಯ ಅವಧಿಯ ಬಿಕ್ಕಟ್ಟು:
ಈ ಮಹಾಕಾವ್ಯಗಳನ್ನು ರಚಿಸಿದ್ದು ನಂತರದ ಕಾಲಘಟ್ಟದಲ್ಲಿ, ಸುಮಾರು 2000 ವರ್ಷಗಳ ಹಿಂದೆ. ಈ ವೇಳೆಗೆ ಹಿಮಾಲಯದಿಂದ ಕರಾವಳಿಯವರೆಗೆ ವ್ಯಾಪಾರ ಮಾರ್ಗಗಳು ತೆರೆದುಕೊಂಡಿದ್ದವು. ಮೌರ್ಯರ ಕಾಲಾವಧಿಯ ವೇಳೆಗೆ ( ಕ್ರಿಪೂ 300) ಬ್ರಾಹ್ಮಣರ ವಿಶೇಷ ಸ್ಥಾನಮಾನಗಳು ಇಲ್ಲವಾಗಿದ್ದವು. ಮೌರ್ಯ ದೊರೆಗಳು ಬೌದ್ಧ ಧಮ್ಮವನ್ನು ಪ್ರೋತ್ಸಾಹಿಸಿ, ಪೋಷಿಸಿದರೂ ಮೂಲತಃ ಅವರು ಕಾಸ್ಮೊಪಾಲಿಟನ್‌ ಆಗಿದ್ದರು, ಬಹುಮಟ್ಟಿಗೆ ಪರ್ಷಿಯಾ ಮತ್ತು ಗ್ರೀಕರಿಂದ ಪ್ರೇರಿತರಾಗಿದ್ದರು. 2300 ವರ್ಷ ಹಳೆಯದಾದ ಅಶೋಕನ ಶಾಸನಗಳಲ್ಲಿ ಬ್ರಾಹ್ಮಣರು ಮತ್ತು ಬೌದ್ಧರೊಡನೆ ನಿಕಟ ಸಂಬಂಧ ಹೊಂದಿರುವುದು ಸ್ಪಷ್ಟವಾಗುತ್ತದೆ ಅದರೆ ರಾಮಾಯಣ ಅಥವಾ ಮಹಾಭಾರತದ ಉಲ್ಲೇಖ ಕಾಣುವುದಿಲ್ಲ.

ಬೌದ್ಧರಲ್ಲಿ ಧಮ್ಮ ಎಂಬ ಪದ ಜನಪ್ರಿಯವಾಗಿತ್ತು. ಇದು ಸನ್ಯಾಸಿಗಳ ಜೀವನ ಶೈಲಿಯನ್ನು ಸೂಚಿಸುವಂತಿತ್ತು. ಬ್ರಾಹ್ಮಣರು ಈ ದೃಷ್ಟಿಕೋನವನ್ನು ವಿರೋಧಿಸಿದ್ದೇ ಅಲ್ಲದೆ ಈ ಪರಿಕಲ್ಪನೆ ಕೌಟುಂಬಿಕ ಜವಾಬ್ದಾರಿಯನ್ನು ಪೂರೈಸುವ ಬಗ್ಗೆ ಹೇಳುವುದಾಗಿ ವಾದಿಸಿದ್ದರು. ಈ ಹಿನ್ನೆಲೆಯಲ್ಲೇ ಧರ್ಮ ಎಂಬ ಪದವನ್ನು ಜನಪ್ರಿಯಗೊಳಿಸುವ ಪ್ರಯತ್ನಗಳು ಆರಂಭವಾದವು. ಧರ್ಮಶಾಸ್ತ್ರ ಗ್ರಂಥಗಳು, ರಾಮಾಯಣ, ಮಹಾಭಾರತ ಗ್ರಂಥಗಳು ರಚನೆಯಾದವು. ಒಂದು ಕಾಲದಲ್ಲಿ ಅಲೆಮಾರಿ ಗಾಯಕರು ಹೇಳಿದ ಕತೆಗಳನ್ನೇ ರಾಜರ ಒಡ್ಡೋಲಗಗಳಲ್ಲಿ ಬ್ರಾಹ್ಮಣ ಪುರೋಹಿತರು ಪುನರುಚ್ಚರಿಸಲಾರಂಭಿಸಿದ್ದರು. ಈ ಕತೆಗಳ ಉದ್ದೇಶ ಇತಿಹಾಸದ ನಿರೂಪಣೆಯಾಗಿರಲಿಲ್ಲ ಬದಲಾಗಿ ಪ್ರಾಚೀನ ಕಾಲದಲ್ಲಿ, ವೇದಕಾಲದ ಜೀವನಶೈಲಿಯನ್ನು ಗೌರವಿಸುತ್ತಿದ್ದ ವೈಭವಯುತ ಕಾಲಘಟ್ಟವನ್ನು ರಾಜರಿಗೆ ನೆನಪಿಸುವುದಾಗಿತ್ತು. ಹಾಗೆಯೇ ಬ್ರಾಹ್ಮಣರ ಸಲಹೆಗಳಿಗೆ ಬೆಲೆ ಕೊಡುತ್ತಿದ್ದುದರಿಂದಲೇ ರಾಜರು ಯಶಸ್ವಿಯಾಗುತ್ತಿದ್ದರು ಎಂದು ಹೇಳುವುದಾಗಿತ್ತು.

ಬೌದ್ಧಿಕ ನಿರೂಪಣೆಗಳು:
ಧರ್ಮಶಾಸ್ತ್ರ ಮತ್ತು ಇತಿಹಾಸದ ರಚನೆಗಳು ಕ್ರಿಶ 300ರ ಆಸುಪಾಸಿನಲ್ಲಿ ಆರಂಭವಾದವು. ಗುಪ್ತ ಸಾಮ್ರಾಜ್ಯದ ದೊರೆಗಳ ಪ್ರೋತ್ಸಾಹದಿಂದ ಯಶಸ್ಸು ಗಳಿಸಿದವು. ಇದೇ ಅವಧಿಯಲ್ಲೇ ರಾಮಾಯಣ ಮತ್ತು ಮಹಾಭಾರತ ಸಂಸ್ಕೃತ ಭಾಷೆಯಲ್ಲಿ ತಮ್ಮ ಅಂತಿಮ ಸ್ವರೂಪ ಪಡೆದುಕೊಂಡವು. ಧರ್ಮಶಾಸ್ತ್ರಗಳು ಮೇಲ್ಪದರದ ಗಣ್ಯ ಸಮಾಜಕ್ಕಾಗಿ ರಚಿತವಾದರೆ ಮಹಾಕಾವ್ಯಗಳು ಸಾಮಾನ್ಯ ಜನರಿಗಾಗಿ ಇದ್ದವು. ಈ ಧರ್ಮಶಾಸ್ತ್ರಗಳು ರಾಜಧರ್ಮದ ಬಗ್ಗೆ, ಸ್ತ್ರೀ ಧರ್ಮದ ಬಗ್ಗೆ ಹಾಗೂ ಆಪದ್ಧರ್ಮದ ಬಗ್ಗೆ (ಬಿಕ್ಕಟ್ಟಿನ ಪರಿಸ್ಥಿತಿಯ ಕರ್ತವ್ಯಗಳು) ಸಾಮಾನ್ಯ ಜನರಿಗೆ ಅರಿವು ಮೂಡಿಸುವಂತಿದ್ದವು. ಉಪಖಂಡದಲ್ಲಿ ಹೊಸದಾಗಿ ಉಗಮಿಸುತ್ತಿದ್ದ ಪ್ರಾದೇಶಿಕ ದೊರೆಗಳಿಗೆ ಅರಿವು ಮೂಡಿಸುವ ಸಾಧನಗಳಾಗಿ ಮಹಾಕಾವ್ಯಗಳು ರೂಪುಗೊಂಡವು. ಪರಶುರಾಮ ಮತ್ತು ಔರ್ವ ಮುಂತಾದ ಬ್ರಾಹ್ಮಣರನ್ನು ಅಪಮಾನಗೊಳಿಸುವುದರಿಂದ ಉಂಟಾಗುವ ವ್ಯತ್ಯಯಗಳ ಬಗ್ಗೆಯೂ, ಅವರ ಶಾಪದಿಂದ ರಾಜರು ಸರ್ವನಾಶವಾಗುವ ಬಗ್ಗೆಯೂ ಕತೆಗಳನ್ನು ಹೇಳತೊಡಗಿದರು. ಇದರಿಂದ ಬ್ರಾಹ್ಮಣರು ರಾಜ್ಯಾಡಳಿತದ ಸಲಹೆಗಾರರಾಗಿ ಸ್ಥಾಪನೆಯಾಗಲು ಸಾಧ್ಯವಾಯಿತು.

ಕಾಲಕ್ರಮೇಣ ಪ್ರತಿಯೊಬ್ಬ ರಾಜನೂ ವೇದಕಾಲದ ರಾಜರನ್ನು ಅನುಕರಿಸತೊಡಗಿದ್ದ. ಈ ಕಾಲಘಟ್ಟದಲ್ಲೇ ರಾಮಾಯಣ ಮತ್ತು ಮಹಾಭಾರತದ ಪ್ರಾದೇಶಿಕ ಗ್ರಂಥಗಳನ್ನು ಪ್ರಾಯೋಜಿಸುವುದೇ ಅಲ್ಲದೆ ತಮ್ಮ ರಾಜಪ್ರಭುತ್ವ ಸ್ಥಾನಮಾನವನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಪಠಿಸಲು ಪ್ರೋತ್ಸಾಹಿಸಿದ್ದರು. ಮಹಾಕಾವ್ಯಗಳ ಬಗ್ಗೆ ಅತ್ಯಂತ ಪ್ರಾಚೀನ ಶಿಲ್ಪಕಲೆ ಕಾಣುವುದು ಕ್ರಿಶ 5ನೆಯ ಶತಮಾನದ ಆಸುಪಾಸಿನಲ್ಲಿ ಮಧ್ಯಪ್ರದೇಶದ ಪ್ರಾಂತ್ಯಗಳ ಸುತ್ತ ಮತ್ತು 8ನೆಯ ಶತಮಾನದಲ್ಲಿ ಡೆಕ್ಕನ್‌ ಪ್ರಾಂತ್ಯದಲ್ಲಿ. ಇದನ್ನು ಪ್ರಾಯೋಜಿಸಿದವರು ಗುಪ್ತರು ಮತ್ತು ಚಾಲುಕ್ಯ ದೊರೆಗಳು. ಈ ಮಹಾಕಾವ್ಯಗಳು ಆಗ್ನೇಯ ಏಷಿಯಾದ ದೊರೆಗಳನ್ನೂ ಪ್ರೇರೇಪಿಸಿದ್ದವು. 10ನೆಯ ಶತಮಾನದ ವೇಳೆಗೆ ಜಾವಾದಲ್ಲಿರುವ ಪರಾಂಬನನ್‌ ದೇವಾಲಯದ ಗೋಡೆಗಳಲ್ಲಿ, 12ನೆಯ ಶತಮಾನದ ವೇಳೆಗೆ ಕಾಂಬೋಡಿಯಾದ ಆಂಗ್‌ಕೊರ್‌ ವಾಟ್‌ನಲ್ಲಿ ಕೆತ್ತನೆ ಮಾಡಲಾರಂಭಿಸಿದರು. 18ನೆಯ ಶತಮಾನದ ಬೌದ್ಧ ಧಮ್ಮವನ್ನು ಸ್ವೀಕರಿಸಿದ್ದ ಥಾಯ್‌ ದೊರೆ ರಾಮ್‌ಕೀನ್‌ ಗ್ರಂಥವನ್ನು ರಚಿಸಿ, ಆದರ್ಶಪ್ರಾಯ ರಾಜತ್ವದ ಬಗ್ಗೆ ತನ್ನ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದ.

19ನೆಯ ನಂತರದಲ್ಲಿ ನಿರಂತರವಾಗಿ ಮಹಾಕಾವ್ಯಗಳನ್ನು ಚಾರಿತ್ರಿಕ ಘಟನೆಗಳ ಅಧಿಕೃತ ವಿವರಣೆಗಳು ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಕ್ರೈಸ್ತರು ಬೈಬಲ್‌ ಗ್ರಂಥಕ್ಕೆ, ಮುಸ್ಲಿಮರು ಕುರಾನ್‌ ಗ್ರಂಥಕ್ಕೆ ನೀಡಿರುವ ಸ್ಥಾನಮಾನವನ್ನು ಮಹಾಕಾವ್ಯಗಳಿಗೆ ನೀಡುವ ಪ್ರಯತ್ನಗಳು ನಡೆದಿವೆ. ಪ್ರತಿಯೊಂದು ಸಂದರ್ಭದಲ್ಲೂ ವಿಜ್ಞಾನಿಗಳು ಐತಿಹಾಸಿಕತೆಯಲ್ಲಿನ ನಂಬಿಕೆಯನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಆದರೆ ಆಸ್ತಿಕರು ಇಂತಹ ಪ್ರಶ್ನೆಗಳನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. ಇದಕ್ಕೆ ಕಾರಣ ರಾಜಕೀಯ ಅಧಿಕಾರವನ್ನು ಪುಷ್ಟೀಕರಿಸುವುದು ನಂಬಿಕೆಯೇ ಹೊರತು ವಿಜ್ಞಾನ ಅಲ್ಲ. ವಿಜ್ಞಾನ ಯಾವುದೇ ಸಂದರ್ಭದಲ್ಲಾದರೂ ನಂಬಿಕೆಗೆ ದಾರಿ ಬಿಟ್ಟುಕೊಡುತ್ತದೆ. ಮಹಾಕಾವ್ಯಗಳ ಚರಿತ್ರೆಯು ನಿರೂಪಿಸುವಂತೆ, ಏನು ನಡೆದಿದೆ ಎನ್ನುವುದು ಮುಖ್ಯವಾಗುವುದೇ ಇಲ್ಲ. ಜನತೆ ಹೇಗೆ ಭಾವಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.

Previous Post

ಸಾಹಿತ್ಯವಿಲ್ಲದೇ ಮನುಕುಲ ಬದುಕಲು ಸಾಧ್ಯವಿಲ್ಲ: ಬಸವರಾಜ ಬೊಮ್ಮಾಯಿ

Next Post

ರಾಜ್ಯಕ್ಕೆ ಅನ್ಯಾಯ ಆದಾಗ ಪ್ರಶ್ನೆ ಮಾಡಬಾರದಾ..?

Related Posts

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
0

ಮಿತ್ರಪಕ್ಷದ ಮುಲಾಜಿನಲ್ಲಿ ಕಾಂಗ್ರೆಸ್; ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ, ಮಂಡ್ಯಕ್ಕೆಷ್ಟು ಅನುದಾನ; ಮೊದಲು ತಿಳಿಯಲಿ ಎಂದು ಚೆಲುವರಾಯಸ್ವಾಮಿಗೆ ತಿರುಗೇಟು, RSS ಬಗ್ಗೆ ಟೀಕೆ; ಪ್ರಿಯಾಂಕ್ ಖರ್ಗೆ...

Read moreDetails

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025
Next Post
DCM D.K. Sivakumar: Appointments to Corporations and Boards Require Comprehensive Discussions and Consensus

ರಾಜ್ಯಕ್ಕೆ ಅನ್ಯಾಯ ಆದಾಗ ಪ್ರಶ್ನೆ ಮಾಡಬಾರದಾ..?

Please login to join discussion

Recent News

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada