ಲೋಕಸಭೆಗೆ ತುಮಕೂರು ಅಭ್ಯರ್ಥಿ ಯಾರಾಗ್ತಾರೆ ಅನ್ನೋ ವಿಚಾರ ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ಜಿಲ್ಲೆಯ ಇಬ್ಬರು ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿದ್ದಾರೆ. ನಾನೇ ಕಾಂಗ್ರೆಸ್ ಗೆ ಹೊಸಬ, ಹೀಗಾಗಿ ನಾನು ಇನ್ನೊಬ್ಬರನ್ನ ಕರೆದುಕೊಂಡು ಹೋಗೋವಷ್ಟು ದೊಡ್ಡೋನಾಗಿಲ್ಲ. ಮುದ್ದಹನುಮೇಗೌಡರು ಮುಖ್ಯಮಂತ್ರಿಯವರನ್ನ ಭೇಟಿ ಮಾಡಿದಾಗಲೂ ನಾನಿದ್ದೆ. ಕೆಪಿಸಿಸಿ ಅಧ್ಯಕ್ಷರನ್ನ ಭೇಟಿ ಮಾಡಿದಾಗಲೂ ಇದ್ದೆ. ಇಬ್ಬರು ಸಚಿವರ ಮನೆಗೆ ಹೋದಾಗಲೂ ನಾನಿದ್ದೆ, ಇಲ್ಲಾ ಅಂತಾ ಸುಳ್ಳು ಹೇಳೋಕಾಗಲ್ಲ. ಆದ್ರೆ ನಾನು ನಿರ್ಣಯ ತೆಗೆದುಕೊಳ್ಳುವಷ್ಟು ದೊಡ್ಡವನಲ್ಲ ಎಂದು ಶಾಸಕ ಶ್ರೀನಿವಾಸ್ ಹೇಳಿದರು.
ಮುದ್ದಹನುಮೇಗೌಡರು ಕಾಂಗ್ರೆಸ್ ಗೆ ಬರೋಕೆ ಹೊರಟಿದ್ದಾರೆ. ಬರ್ತೀನಿ ಅಂತಾ ಹೇಳಿದ್ದಾರೆ, ಬರ್ತಾರೆ ಅಂತಾ ನಾನು ಅಂದುಕೊಂಡಿದ್ದೀನಿ. ರಾಜಣ್ಣ ಅವರು ಮುದ್ದಹನುಮೇಗೌಡರಿಗೆ ಟಿಕೆಟ್ ಫಿಕ್ಸ್ ಅಂತಾ ಹೇಳಿದ ಮೇಲೆ ಆದರೂ ಆಗಬಹುದೇನೋ. ಯಾಕಂದ್ರೆ ಮೊನ್ನೆ ಸಭೆ ಸೇರಿದಾಗ ಇಬ್ಬರು ಸಚಿವರು ಯಾರನ್ನೇ ಅಭ್ಯರ್ಥಿ ಮಾಡಿದ್ರೂ, ನಾವೆಲ್ಲರೂ ಒಪ್ಪಿಕೊಳ್ತಿವಿ ಅಂತಾ ಎಲ್ಲರೂ ಹೇಳಿದ್ದೀವಿ. ಹೀಗಾಗಿ ರಾಜಣ್ಣ, ಪರಮೇಶ್ವರ್ ಮತ್ತು ಪಕ್ಷದ ಅಧ್ಯಕ್ಷರು ಎಲ್ಲಾ ನಿರ್ಧಾರ ತೆಗೆದುಕೊಳ್ತಾರೆ. ಮೈತ್ರಿ ಪಕ್ಷದಿಂದ ಸೋಮಣ್ಣ ಬರ್ಲಿ, ಕುಮಾರಸ್ವಾಮಿ ಬರ್ಲಿ. ನಾವು ಚುನಾವಣೆ ಮಾಡಬೇಕು, ಮಾಡ್ತೀವಿ. ನನ್ನನ್ನ ತೆಗೀಬೇಕು ಅಂತಾ ಏನೇನೋ ಪ್ರಯತ್ನ ಮಾಡಿದ್ರು. ಆದ್ರೆ ಜನರ ಅಭಿಪ್ರಾಯ ಯಾರಿಗಿರುತ್ತೋ ಅವ್ರೆ ಗೆಲ್ತಾರೆ. ನಮ್ಮ ಪಕ್ಷದಿಂದ ನಾವು ಕಾರ್ಯಕ್ರಮಗಳನ್ನ ಕೊಟ್ಟಿದ್ದೀವಿ, ನುಡಿದಂತೆ ನಡೆದಿದ್ದೇವೆ, ಬಡವರಿಗೆ ಯೋಜನೆಗಳು ತಲುಪಿವೆ. ಹೀಗಾಗಿ ನಮ್ಮ ಪಕ್ಷ ಇಲ್ಲಿ ಸದೃಢವಾಗಿದೆ, ಗೆಲ್ಲುತ್ತೆ ಅಂತಾ ನಿಸ್ಸಂಕೋಚವಾಗಿ ಹೇಳ್ತಿನಿ ಎಂದು ಹೇಳಿದರು.