• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇತರೆ / Others

ನಿಮ್ಮ ಭವಿಷ್ಯ.. ಹೊಸ ವರ್ಷ 2024ರಲ್ಲಿ ನಿಮ್ಮ ರಾಶಿಯ ಭವಿಷ್ಯ ಹೇಗಿದೆ..?

ಕೃಷ್ಣ ಮಣಿ by ಕೃಷ್ಣ ಮಣಿ
January 1, 2024
in ಇತರೆ / Others
0
ನಿಮ್ಮ ಭವಿಷ್ಯ.. ಹೊಸ ವರ್ಷ 2024ರಲ್ಲಿ ನಿಮ್ಮ ರಾಶಿಯ ಭವಿಷ್ಯ ಹೇಗಿದೆ..?
Share on WhatsAppShare on FacebookShare on Telegram

ಹಿಂದೂ ಕ್ಯಾಲೆಂಡ್‌ ಪ್ರಕಾರ ಹೊಸ ವರ್ಷ ಇನ್ನೂ ಆರಂಭವಾಗಿಲ್ಲದಿದ್ದರೂ ಕ್ಯಾಲೆಂಡರ್ ವರ್ಷದ ಪ್ರಕಾರ ಹೊಸ ವರ್ಷ ಆರಂಭವಾಗಿದೆ. ಈ ಕ್ಯಾಲೆಂಡರ್‌ ವರ್ಷದ ಪ್ರಕಾರ ರಾಶಿಗಳ ಪ್ರಕಾರ ಭವಿಷ್ಯ ಹೇಗಿದೆ ಅನ್ನೋದನ್ನು ನೋಡುವ ಜೊತೆಗೆ ಯಾವ ರಾಶಿಯವರು ಯಾವ ದೇವರ ಪೂಜೆ ಮಾಡುವುದರಿಂದ ಸಮಸ್ಯೆ ಪರಿಹಾರ ಆಗುತ್ತೆ ಅನ್ನೋದನ್ನು ಕೂಡ ಖ್ಯಾತ ಜ್ಯೋತಿಷಿ, ಶಾರದಾ ಪೀಠದ ಧರ್ಮಾಧಿಕಾರಿ ದೈವಜ್ಞ ಡಾ. ಸೋಮಯಾಜಿ (TV Interview) ಸಂಪೂರ್ಣ ಮಾಹಿತಿ ನೀಡಿದ್ದಾರೆ.

ADVERTISEMENT

ಮೇಷ ರಾಶಿ

ಮೇಷರಾಶಿಯ ಜನರಿಗೆ ಗುರು ಜನ್ಮದಲ್ಲೇ ಇರುವುದರಿಂದ ಈ ವರ್ಷ ಶುಭ ಕಾರ್ಯಗಳು ಆಗುತ್ತವೆ. ಆರ್ಥಿಕವಾಗಿ, ವ್ಯವಹಾರವಾಗಿ ಏಳ್ಗೆಯನ್ನು ಕಾಣುತ್ತೀರಿ. ಭತ್ತ, ಕಬ್ಬು ಬೆಳೆಯಲು ರೈತರಿಗೆ ಸದಾವಕಾಶ ಒದಗಲಿದೆ. ಮಕ್ಕಳ ಮದುವೆ ಆಗುತ್ತೆ. ಮಂಗಳ ಕಾರ್ಯದಲ್ಲಿ ಸಂತೃಪ್ತಿ ಜೊತೆಗೆ ವಿದೇಶ ಪ್ರಯಾಣ ನೆರವೇರಲಿದೆ. ಆರೋಗ್ಯ ಮಟ್ಟ ಸುಧಾರಿಸಿ ನೆಮ್ಮದಿ ಜೀವನ ಲಬಿಸಲಿದೆ. ಖಾಸಗಿ ಕಂಪನಿ, MNC ಕೆಲಸಗಳಲ್ಲಿ ಕೆಲಸ ಮಾಡುವ ಜನರಿಗೆ ಶುಭದಾಯಕ. ಶೃಂಗೇರಿ ಶಾರದಾಂಬೆ ಪೂಜೆಯಿಂದ ಲಾಭ ಸಿಗಲಿದೆ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಸಣ್ಣಪುಟ್ಟ ಅಡೆತಡೆಗಳು ಕಾಡುತ್ತವೆ. ಆರೋಗ್ಯ ಸಮಸ್ಯೆಗಳು ಭಾದಿಸುತ್ತವೆ. ದೂರದ ಪ್ರಯಾಣ ಮಾಡುವ ಆಸೆಯಿಂದ ನಿರಾಸೆ ಕಾಡಲಿದೆ. ಈ ವರ್ಷ ಅತೃಪ್ತಿ ಕಾಣುವ ಸೂಚನೆ ಸಿಗಲಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವ ಜನರಿಗೆ ಬಡ್ತಿ ಸಿಗಲಿದೆ. ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ. ಆಸ್ತಿ ಖರೀದಿಗೆ ಉತ್ತಮ ಅವಕಾಶ ಸಿಗಲಿದೆ. ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಈ ವರ್ಷ ಶುಭದಾಯಕ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನದಿಂದ ಲಾಭ ಆಗುವ ನಿರೀಕ್ಷೆಯಿದೆ.

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಈ ವರ್ಷ ಆಸೆ ಪೂರೈಸುವ ಹಾಗು ಹರ್ಷದಾಯಕ ಸಂವತ್ಸರ ಆಗಲಿದೆ. ರಾಜಕೀಯ ಕ್ಷೇತ್ರದಲ್ಲಿರುವ ಜನರಿಗೆ ಯಶಸ್ಸು ಸಿಗಲಿದೆ. ಹಿರಿಯ ಅಧಿಕಾರಿಗಳಿಗೆ ಯಶಸ್ಸು, ಕೀರ್ತಿಯೂ ಲಭಿಸಲಿದೆ. ರೈತರು, ಗಾರ್ಮೆಂಟ್ಸ್​ ಹಾಗು ಟೆಕ್ಸ್​​ಟೈಲ್ಸ್​ ಉದ್ಯಮಿಗಳಿಗೆ ಲಾಭ ಸಂಭವವಿದೆ. ದೂರದ ಪ್ರಯಾಣ, ವಿದೇಶ ಪ್ರಯಾಣದ ಲಾಭ ಸಿಗಲಿದೆ. ವಿವಾದ, ಸಂತಾನ, ಮನೆ ನಿರ್ಮಾಣಕ್ಕೆ ಸೂಕ್ತ ಸಮಯ ಇದು. ಗಣಿಗಾರಿಕೆ, ಕಾರು ಚಾಲಕರಿಗೆ ಅನುಕೂಲಕರ ಹಾಗು ವಿದೇಶದಲ್ಲಿ ಉದ್ಯೋಗದ ಕನಸು ನನಸಾಗುತ್ತದೆ.

ಕಟಕ ರಾಶಿ

ಈ ರಾಶಿಯವರಿಗೆ ಸಣ್ಣಪುಟ್ಟ ಸಮಸ್ಯೆಗಳು ಕಾಡುತ್ತವೆ. ಕಿಡ್ನಿ, ಕಣ್ಣಿನ ದೋಷ ಇರುವವರು ಎಚ್ಚರದಿಂದ ಇರುವುದು ಸೂಕ್ತ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಔಷಧ, ಕೆಮಿಕಲ್ಸ್​ ಉದ್ಯಮದಲ್ಲಿ ಉನ್ನತಿ ಹಾಗು ಸಿಹಿಹಣ್ಣು ಬೆಳೆಯುವ ರೈತರಿಗೆ ಶುಭದಾಯಕ. ಕೊಲ್ಲೂರು ಮೂಕಾಂಬಿಕೆ, ಶೃಂಗೇರಿ ಶಾರದಾಂಬೆ, ಚಾಮುಂಡೇಶ್ವರಿ ದರ್ಶನದಿಂದ ಲಾಭ ಆಗುವ ಸಾಧ್ಯತೆ ಹೆಚ್ಚು

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಸ್ವಂತ ಮನೆ ಕಟ್ಟುವ ಕನಸು ನನಸು ನನಸಾಗಲಿದೆ. ಭೂಮಿ ಆಸ್ತಿ ಖರೀದಿಗೆ ಅವಕಾಶ, ಹಣಕಾಸು
ವಾಹನ, ಆಭರಣ ಖರೀದಿಗೂ ಅವಕಾಶ ಸಿಗಲಿದೆ. ಆರೋಗ್ಯದಲ್ಲಿ ಸಮಸ್ಯೆಗಳು ಕಾಡುವುದಿಲ್ಲ. ದ್ವಿದಳ ಧಾನ್ಯ ಬೆಳೆಯುವ ರೈತರಿಗೆ ಅನೂಕೂಲ ಆಗಲಿದೆ. ಸಂಘ-ಸಂಸ್ಥೆಗಳ ಶ್ರೇಯೋಭಿವೃದ್ಧಿ ಆಗಲಿದೆ. ರಾಜಕಾರಣಿಗಳಿಗೆ ಚುನಾವಣಾ ಗೆಲುವು ಅದೃಷ್ಟವಿದೆ. ನಂಜನಗೂಡಿನ ನಂಜುಂಡೇಶ್ವರ ದರ್ಶನದಿಂದ ಲಾಭ

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಸಾಕಷ್ಟು ಶುಭಫಲ ಇರಲಿದೆ. ಹೇರಳವಾದ ಧನ, ವೈಭೋಗ ಸಿಗುತ್ತದೆ. ಸೇವಾವಲಯದ ಉದ್ಯಮ ಬೆಳೆಯುತ್ತದೆ. ವಾಹನ ಖರೀದಿಗೆ ಸೂಕ್ತವಾದ ವರ್ಷ 2024, ಟೆಕ್ನಿಕಲ್​ ಉದ್ಯಮಿಗಳಿಗೆ, ವಿದೇಶದಲ್ಲಿ ಉದ್ಯೋಗದಲ್ಲಿರುವ ಜನರಿಗೆ ಅನುಕೂಲ ಆಗಲಿದೆ. ಮದುವೆ, ದೂರ ಪ್ರಯಾಣ ಮಾಡುವ ಫಲವಿದೆ. ಗಣಪತಿ ಆರಾಧನೆ, ಸಂಕಷ್ಟಹರ ಆರಾಧನೆಯಿಂದ ಲಾಭ ತರಲಿದೆ.

ತುಲಾ ರಾಶಿ

ತಲಾ ರಾಶಿಯ ಜನರಿಗೆ ಸಂತೋಷ, ಉತ್ತಮ ಆರೋಗ್ಯ ತರುವ ವರ್ಷ 2024. ಆಸ್ತಿ, ವಾಹನ, ಆಭರಣ ಖರೀದಿಗೆ ಉತ್ತಮ ಅವಕಾಶ ಸಿಗಲಿದೆ. ಜಾಹೀರಾತು, ಸಿನಿಮಾ ಉದ್ಯಮದಲ್ಲಿ ಫಲ ಇರಲಿದೆ. ವಿದೇಶ ಪ್ರಯಾಣದ ಫಲ ಸಿಗುತ್ತದೆ. ಹಣ, ಯಶಸ್ಸು, ಕೀರ್ತಿ ಸಿಗುತ್ತದೆ. ಬಂಧು ಬಳಗದ ಭೇಟಿಯಿಂದ ಲಾಭ ಆಗಲಿದ್ದು, ಬಿಪಿ, ಶುಗರ್​ ಇದ್ದರೆ ನಿಯಂತ್ರಣದಲ್ಲಿ ಇರಲಿದೆ. ಅಪರೂಪದಲ್ಲಿ ಅಪರೂಪದ ಬೆಳೆ ಬೆಳೆದರೆ ಲಾಭ ಕಟ್ಟಿಟ್ಟ ಬುತ್ತಿ. ದುರ್ಗಾದೇವಿ ಆರಾಧನೆ, ತಿರುಪತಿ ತಿಮ್ಮಪ್ಪನ ದರ್ಶನದಿಂದ ಲಾಭ ಸಿಗಲಿದೆ.

ವೃಶ್ಚಿಕ ರಾಶಿ

ಈ ರಾಶಿಯಲ್ಲಿ ಜನಿಸಿದ ಜನರಿಗೆ ಜೀವನದ ಗೊಂದಲಗಳು ಎಲ್ಲವೂ ನಿವಾರಣೆ ಆಗಲಿದ್ದು, ಸಿಮೆಂಟ್​, ಪೇಪರ್ ಉದ್ಯಮದಲ್ಲಿ ಬೆಳವಣಿಗೆ ಕಾಣುತ್ತೀರಿ. ಆಸ್ಪತ್ರೆ, ನರ್ಸಿಂಗ್ ಸಿಬ್ಬಂದಿಗೆ ಉತ್ತಮ ವರ್ಷ. ಕಮ್ಯೂನಿಕೇಶನ್​ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಸಾಧನೆ ಮಾಡುವ ಅವಕಾಶ. ಕಾನೂನು ಇಲಾಖೆಯ ಸಿಬ್ಬಂದಿಗೆ ಅನುಕೂಲಕರ. ಆಂಜನೇಯ ಸ್ವಾಮಿ ದರ್ಶನ, ಆರಾಧನೆಯಿಂದ ಲಾಭದಾಯಕ ಆಗಲಿದೆ.

ಧನು ರಾಶಿ

ಈ ರಾಶಿಯ ಜನರಿಗೆ ಹಣಕಾಸು ವ್ಯವಸ್ಥೆ ಸುಧಾರಣೆ ಆಗಲಿದೆ. ನಿರೀಕ್ಷೆಗೂ ಮೀರಿದ ಹಣ ಸಂಪಾದನೆ ಆಗುತ್ತದೆ. ಪ್ರಯತ್ನಗಳೆಲ್ಲವೂ ಯಶಸ್ವಿಗೊಳ್ಳುತ್ತವೆ. ರಾಜಕಾರಣಿಗಳಿಗೆ ಗೌರವ, ಸ್ಥಾನಮಾನ ಲಬಿಸಲಿದೆ. ಮದುವೆ ಕಾರ್ಯಗಳು ಮಂಗಳವಾಗುತ್ತವೆ. ಕೋರ್ಟ್​ ವ್ಯಾಜ್ಯಗಳಲ್ಲಿ ನಿಮ್ಮ ಪರವಾದ ತೀರ್ಪುಗಳು ಬರಲಿವೆ. ರೈತರು ರಾಗಿ, ಭತ್ತ, ಗೋಧಿ ಬೆಳೆದರೆ ಉತ್ತಮ ಫಲ ಲಬಿಸಲಿದೆ. ಜಗದೀಶ್ವರನ ಆರಾಧನೆ, ಬಿಲ್ವಪತ್ರೆಯ ಅರ್ಚನೆಯಿಂದ ಲಾಭ ತರಲಿದೆ.

ಮಕರ ರಾಶಿ

ಕಷ್ಟಪಟ್ಟು ಮಾಡುವ ಕೆಲಸಗಳೆಲ್ಲವೂ ಸಾಕಾರಗೊಳ್ಳುವ ಮೂಲಕ ಉತ್ತಮ ಲಾಭ ತಂದುಕೊಡಲಿದೆ. ಉತ್ತಮ ಮನಸ್ಸಿನಿಂದ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಸಂತೋಷ, ತೃಪ್ತಿದಾಯಕ ಜೀವನ ನಿಮ್ಮದಾಗುತ್ತದೆ. ಹೋಮ-ಹವನ, ತೀರ್ಥಯಾತ್ರೆಗೆ ಅವಕಾಶವಿದೆ. ಗಣಿಗಾರಿಕೆ ವೃತ್ತಿಯಲ್ಲಿರುವವರಿಗೆ ಹೆಚ್ಚು ಲಾಭ ಸಿಗಲಿದೆ. ವಿದ್ಯುತ್, ನೀರು ಪೂರೈಕೆ ಸಿಬ್ಬಂದಿಗೆ ತೃಪ್ತಿಕರ ಜೀವನ ಸಿಗಲಿದ್ದು, ಮೃತ್ಯುಂಜಯನ ಆರಾಧನೆಯಿಂದ ಲಾಭ ಸಿಗಲಿದೆ.

ಕುಂಭ ರಾಶಿ

ಕುಂಭ ರಾಶಿಯಲ್ಲಿ ಜನಿಸಿದವರಿಗೆ ಸಾಡೇಸಾತಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಮಸ್ಯೆಗಳು ಕಾಡುತ್ತವೆ ಬಳಿಕ ನಿವಾರಣೆ ಆಗುತ್ತವೆ. ಚಾಲಕ ವೃತ್ತಿ ಮಾಡುವವರಿಗೆ ಲಾಭವಿದ್ದು, ಆರೋಗ್ಯ, ಕೆಮಿಕಲ್ಸ್​ ಉದ್ಯಮದಲ್ಲಿ ಇರುವ ಜನರಿಗೆ ಲಾಭ ಲಭಿಸಲಿದೆ. ಕೋರ್ಟ್​ ವ್ಯಾಜ್ಯಗಳು ಇತ್ಯರ್ಥಗೊಳ್ಳುತ್ತವೆ. ಸರ್ಕಾರಿ ಯೋಜನೆಗಳು ಕೈಗೂಡುತ್ತವೆ. ಶ್ರೀ ಶನೇಶ್ವರನ ಪೂಜೆ, ನವಗ್ರಹ ಪೂಜೆಯಿಂದ ಲಾಭ ನಿಮ್ಮದಾಗಲಿದೆ.

ಮೀನ ರಾಶಿ

ಮೀನರಾಶಿಯ ಜನರು ಭಯಪಡುವ ಅಗತ್ಯವೇ ಇಲ್ಲ. ಬಹುದಿನಗಳಿಂದ ಇರುವ ಬೇಡಿಕೆ ಈಡೇರುತ್ತದೆ. ಸೂಕ್ತ ವಯಸ್ಕರಿಗೆ ಮದುವೆ ಭಾಗ್ಯ ಇರುತ್ತದೆ. ವಿದೇಶದ ಶಿಕ್ಷಣ, ಉದ್ಯೋಗ ಲಾಭ ಸಿಗುತ್ತದೆ. ಧರ್ಮಸ್ಥಳ ಮಂಜುನಾಥ, ಗಾಣಗಾಪುರ ದತ್ತಾತ್ರೇಯನ ದರ್ಶನದಿಂದ ಲಾಭ ಸಿಗಲಿದೆ.

Tags: AstralogyDaivajnaNewyearನ್ಯೂ ಇಯರ್ರಾಶಿ ಭವಿಷ್ಯವರ್ಷ ಭವಿಷ್ಯಸಮಸ್ಯೆಗಳಿಗೆ ಪರಿಹಾರಹೊಸ ವರ್ಷ
Previous Post

ಮತ್ತೊಂದು ಹೊಸ ವರ್ಷ ಮತ್ತದೇ ಹಳೆಯ ಕನಸುಗಳು : ನಾ ದಿವಾಕರ ಅವರ ಬರಹ

Next Post

ಬೆಂಗಳೂರಲ್ಲಿ ನ್ಯೂ ಇಯರ್ : ನಡುರಾತ್ರೆ ಯುವಕನ ಭೀಕರ ಹತ್ಯೆ !

Related Posts

Top Story

ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಕೋರಿದ ಹಿರಿಯ ನಟ ಮಂಡ್ಯ ರಮೇಶ್ .

by ಪ್ರತಿಧ್ವನಿ
May 11, 2025
0

ಕುತೂಹಲ ಮೂಡಿಸಿದೆ "ದಿ" ಚಿತ್ರದ ಟ್ರೇಲರ್ . ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಕೋರಿದ ಹಿರಿಯ ನಟ ಮಂಡ್ಯ ರಮೇಶ್ . ವಿ.ಡಿ.ಕೆ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ,...

Read moreDetails

ಭಾರತ ಪಾಕಿಸ್ತಾನ ಯುದ್ಧದ ಬಗ್ಗೆ ಡಿಕೆಶಿ ಹೇಳಿದ್ದೇನು..!

May 9, 2025

ಭಾರತದ ರಣಾರ್ಭಟಕ್ಕೆ ಬೆದರಿ ಹೋದ ಪಾಕಿಸ್ತಾನ

May 7, 2025

ಆಪರೇಷನ್ ಸಿಂಧೂರ್‌ ಮೋದಿನ ಮನಸಾರೆ ಹೊಗಳಿದ ಸಿಎಂ ಸಿದ್ದರಾಮಯ್ಯ

May 7, 2025

ಭಾರತದ ಆಪರೇಷನ್ ಸಿಂಧೂರ್ ಬಗ್ಗೆ ಟ್ರಂಪ್ ಪ್ರತಿಕ್ರಿಯೆ..!

May 7, 2025
Next Post
ರಾಜ್ಯೋತ್ಸವ ನಿಮಿತ್ತ ವಿಧಾನಸೌಧ ಬಳಿ ಮಾರ್ಗ ಬದಲಾವಣೆ

ಬೆಂಗಳೂರಲ್ಲಿ ನ್ಯೂ ಇಯರ್ : ನಡುರಾತ್ರೆ ಯುವಕನ ಭೀಕರ ಹತ್ಯೆ !

Please login to join discussion

Recent News

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada