ಚುನಾವಣಾ ಬಾಂಡ್ಗಳ ಸಿಂಧುತ್ವವನ್ನ ಪ್ರಶ್ನಿಸಿ ಸಲ್ಲಿಸಿರೋ ಅರ್ಜಿಗಳ ವಿಚಾರಣೆಯ ವೇಳೆ, ಮಂಗಳವಾರ ಅಂದ್ರೆ ನೆನ್ನೆ ಸುಪ್ರೀಂ ಕೋರ್ಟ್ ʻಚುನಾವಣಾ ಫಂಡಿಂಗ್ ಒಂದು ಕಾಂಪ್ಲಿಕೇಟೆಡ್ ವಿಷಯವಾಗಿದೆʼ ಎಂದು ಹೇಳಿದೆ.
ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡುವ ಚುನಾವಣಾ ಬಾಂಡ್ಗಳ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ವಿಚಾರಣೆ ಪ್ರಾರಂಭವಾಯಿತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಕಾಂಗ್ರೆಸ್ ನಾಯಕ ಜಯಾ ಠಾಕೂರ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಸಲ್ಲಿಸಿದ ನಾಲ್ಕು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು.
ಚುನಾವಣಾ ಬಾಂಡ್ಗಳ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ʻಚುನಾವಣಾ ಬಾಂಡ್ ಯೋಜನೆಯು ರಾಜಕೀಯ ಪಕ್ಷಗಳ ಮಾಹಿತಿಯನ್ನ ತಿಳಿದುಕೊಳ್ಳೋ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡ್ತಾ ಇದೆ. ಇಂತಹ ಅಪಾರದರ್ಶಕ ಯೋಜನೆ ದೇಶದಲ್ಲಿ ಭ್ರಷ್ಟಾಚಾರವನ್ನ ಬೆಂಬಲಿಸ್ತದೆ ಮತ್ತು ಪ್ರಜಾಪ್ರಭುತ್ವವನ್ನ ನಾಶ ಮಾಡ್ತದೆ. ಯಾಕಂದ್ರೆ ಚುನಾವಣಾ ಬಾಂಡ್ ಯೋಜನೆ ರಾಜಕೀಯ ಪಕ್ಷಗಳ ನಡುವೆ ಸಮಾನತೆಯನ್ನ ಕಾಪಾಡೋದಿಲ್ಲʼ ಅಂತ ಹೇಳಿದ್ದಾರೆ.

ಚುನಾವಣಾ ಬಾಂಡ್ಗಳ ಮೂಲಕ 2021-2022ಅವದಿಯಲ್ಲಿ ಪಡೆದ ಪಕ್ಷವಾರು ದೇಣಿಗೆಗಳ ಅಂಕಿಅಂಶಗಳನ್ನು ಉಲ್ಲೇಖಿದ ಅವರು, ಬಿಜೆಪಿ 5,271 ಕೋಟಿ ರೂಪಾಯಿಗಳನ್ನು ಪಡೆದಿದ್ದರೆ, ಕಾಂಗ್ರೆಸ್ 952 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ. ಇತರ ರಾಜಕೀಯ ಪಕ್ಷಗಳಾದ, ಟಿಎಂಸಿಗೆ ರೂ 767 ಕೋಟಿ, ಎನ್ಸಿಪಿಯ ಕಿಟ್ಟಿಗೆ ರೂ 63 ಕೋಟಿ ಮತ್ತು ಎಎಪಿಗೆ ರೂ 48 ಕೋಟಿ ಸೇರಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
‘ಚುನಾವಣೆ ಬಾಂಡ್ ವಿಚಾರವು ಸರಳ ವಿಷಯವಲ್ಲ, ಇದು ಪ್ರಮುಖ ವಿಷಯವಾಗಿದ್ದು, ಇದೊಂದು ಕಾಂಪ್ಲಿಕೇಟೆಡ್ ಆಗಿರೋ ವಿಷಯʼ ಅಂತ ಹೇಳಿದೆ. ಅಂದ್ಹಾಗೆ ಮುಖ್ಯ ನ್ಯಾಯಾಧೀಶರಾದ ಡಿ.ವೈ. ಚಂದ್ರಚೂಡ್ ಅವ್ರ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠವು ಈ ವಿಚಾರಣೆಯನ್ನ ನಡೆಸಿದೆ.