• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ಆ ಮ್ಯಾನೇಜರ್ ಒಬ್ಬನಿಂದಲೇ ನನಗೆ ದೊಡ್ಡ ಸಿನಿಮಾಗಳು ಕೈ ತಪ್ಪಿದ್ದವು : ಗದರ್‌-2 ಚಿತ್ರದ ನಾಯಕಿ ಅಮೀಷಾ ಪಟೇಲ್‌

Any Mind by Any Mind
September 6, 2023
in ಇದೀಗ, ಸಿನಿಮಾ
0
ಆ ಮ್ಯಾನೇಜರ್ ಒಬ್ಬನಿಂದಲೇ ನನಗೆ ದೊಡ್ಡ ಸಿನಿಮಾಗಳು ಕೈ ತಪ್ಪಿದ್ದವು : ಗದರ್‌-2 ಚಿತ್ರದ ನಾಯಕಿ ಅಮೀಷಾ ಪಟೇಲ್‌

ಅಮೀಷಾ ಪಟೇಲ್‌

Share on WhatsAppShare on FacebookShare on Telegram

ADVERTISEMENT

‘ಆ ಮ್ಯಾನೇಜರ್​ ಒಬ್ಬರ ಕಾರಣದಿಂದ ನಾವು ನಿಮ್ಮನ್ನು ಭೇಟಿಯಾಗಲು ಭಯಪಡುತ್ತಿದ್ದೆವು’ ಎಂದು ಅನೇಕರು ಅಮೀಷಾ ಪಟೇಲ್​ಗೆ ಹೇಳಿದ್ದುಂಟು. ಇದೆಲ್ಲವೂ ಹಣೆಬರಹದಿಂದಲೇ ಆಗಿದೆ ಎಂದು ಅವರೀಗ ನಂಬಿದ್ದಾರೆ. ಆದರೆ ಈಗ ‘ಗದರ್​ 2’ ಸಿನಿಮಾ ಭರ್ಜರಿ ತೆರೆ ಮೂಲಕ ಅಮೀಷಾ ಪಟೇಲ್​ ಅವರ ಇಷ್ಟು ದಿನದ ಸೊರಗಿದ್ದ ಸಿನಿಮಾ ಭವಿಷ್ಯಕ್ಕೆ ಮತ್ತೆ ಮೆರುಗು ಸಿಕ್ಕಿದೆ. ತಮ್ಮ ಹಳೆಯ ಕಷ್ಟ ದಿನಗಳ ಬಗ್ಗೆ ಅವರು ಮನ ಬಿಚ್ಚಿ ಮಾತನಾಡಿದ್ದಾರೆ.

ಬಾಲಿವುಡ್​ನ ‘ಗದರ್​ 2’ ಸಿನಿಮಾ (Gadar 2) ಸೂಪರ್​ ಹಿಟ್​ ಆಗಿದೆ. ಈ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ದೊಡ್ಡ ಯಶಸ್ಸು ಸಿಕ್ಕಿದೆ. ಅದೇ ರೀತಿ ಈ ಸಿನಿಮಾದ ನಾಯಕಿ ಅಮೀಷಾ ಪಟೇಲ್​ (Ameesha Patel) ಕೂಡ ಸಖತ್​ ಆಗಿ ಮಿಂಚುತ್ತಿದ್ದಾರೆ. ಈ ಗೆಲುವಿಗಾಗಿ ಅವರು ಬಹಳ ವರ್ಷಗಳಿಂದ ಕಾದಿದ್ದರು. ಅವರಿಗೆ ಈ ಮೊದಲೇ ಸಿಗಬೇಕಿದ್ದ ಅನೇಕ ಪ್ರಾಜೆಕ್ಟ್​ಗಳು ತಪ್ಪಿ ಹೋಗಿದ್ದವು ಎಂಬುದು ಈಗ ಬಹಿರಂಗ ಆಗಿದೆ. ಆ ರೀತಿ ಆಗಲು ತಮ್ಮ ಮ್ಯಾನೇಜರ್​ ಕಾರಣ ಎಂದು ಅಮೀಷಾ ಪಟೇಲ್​ ಅವರು ಹೇಳಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali), ಶಾರುಖ್​ ಖಾನ್​ ಮುಂತಾದ ಘಟಾನುಘಟಿಗಳ ಜೊತೆ ಸಿನಿಮಾ ಮಾಡುವ ಅವಕಾಶವನ್ನು ಅಮೀಷಾ ಪಟೇಲ್​ ಕಳೆದುಕೊಂಡಿದ್ದರು ಎಂಬುದು ಅಚ್ಚರಿಯ ವಿಚಾರ.

ಸೆಲೆಬ್ರಿಟಿಗಳು ಹಲವು ಕೆಲಸಕ್ಕೆ ಮ್ಯಾನೇಜರ್​ಗಳನ್ನು ನೇಮಿಸಿಕೊಂಡಿರುತ್ತಾರೆ. ಸಂಭಾವನೆ, ಡೇಟ್ಸ್​, ಅಗ್ರಿಮೆಂಟ್​ ಇತ್ಯಾದಿ ವಿಚಾರಗಳ ಉಸ್ತುವಾರಿಯನ್ನು ಮ್ಯಾನೇಜರ್​ಗಳೇ ನೋಡಿಕೊಳ್ಳುತ್ತಾರೆ. ಒಳ್ಳೆಯ ಮ್ಯಾನೇಜರ್​ ಸಿಕ್ಕರೆ ಸೆಲೆಬ್ರಿಟಿಗಳ ಕೆಲಸ ಸುಲಭ ಆಗುತ್ತದೆ. ಆದರೆ ಅಮೀಷಾ ಪಟೇಲ್​ ಅವರು ಮ್ಯಾನೇಜರ್​ ಮಾಡಿದ ತಪ್ಪಿನಿಂದಾಗಿ ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದರು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ಕುರಿತು ಮಾತನಾಡಿದ್ದಾರೆ.

ಈ ಸುದ್ದಿಯನ್ನು ಸಹ ಓದಿ: ನಾನು ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟಿಲ್ಲ, ರಾಜಕೀಯವಾಗಿ ವಿಚಾರ ತಿರುಚುತ್ತಿದ್ದಾರೆ; ಸಚಿವ ಪರಮೇಶ್ವರ್‌ ಸ್ಪಷ್ಟನೆ .!

‘ಅನೇಕ ಒಳ್ಳೆಯ ಸಿನಿಮಾಗಳಿಗಾಗಿ ಮಾತುಕಥೆ ನಡೆದಿತ್ತು. ಈಗ ಅವುಗಳ ಹೆಸರು ಹೇಳುವುದು ಬೇಡ. ಯಾಕೆಂದರೆ ಆ ಸಿನಿಮಾಗಳು ಈಗಾಗಲೇ ಬಂದುಹೋಗಿವೆ. ದುರಾದೃಷ್ಟವಶಾತ್​ ಆ ಸಮಯದಲ್ಲಿ ನನ್ನ ಮ್ಯಾನೇಜರ್​ ಮತ್ತು ಸಂಜಯ್​ ಲೀಲಾ ಬನ್ಸಾಲಿ ನಡುವೆ ಮನಸ್ತಾಪ ಆಗಿತ್ತು. ಆ ಮ್ಯಾನೇಜರ್​ನಿಂದ ನಾನು ದೂರ ಆದ ಬಳಿಕವೇ ಈ ಎಲ್ಲ ಸಂಗತಿಗಳು ನನಗೆ ಗೊತ್ತಾದವು’ ಎಂದು ಅಮಿಷಾ ಪಟೇಲ್​ ಹೇಳಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ ಮಾತ್ರವಲ್ಲದೇ ಯಶ್​ ರಾಜ್​ ಫಿಲ್ಮ್, ಸಾಜಿದ್​ ನಾಡಿಯದ್ವಾಲಾ, ಶಾರುಖ್​ ಖಾನ್​ ಮುಂತಾದವರ ಜೊತೆಗೂ ಕೆಲಸ ಮಾಡುವ ಅವಕಾಶವನ್ನು ಮಿಸ್​ ಮಾಡಿಕೊಂಡ ಬಗ್ಗೆ ಅಮೀಷಾ ಪಟೇಲ್​ ಮಾತನಾಡಿದ್ದಾರೆ.

‘ಆ ಮ್ಯಾನೇಜರ್​ ಕಾರಣದಿಂದ ನಾವು ನಿಮ್ಮನ್ನು ಭೇಟಿಯಾಗಲು ಭಯಪಡುತ್ತಿದ್ದೆವು’ ಎಂದು ಅನೇಕರು ಅಮೀಷಾ ಪಟೇಲ್​ಗೆ ಹೇಳಿದ್ದುಂಟು. ಇದೆಲ್ಲವೂ ಹಣೆಬರಹದಿಂದಲೇ ಆಗಿದೆ ಎಂದು ಅವರೀಗ ನಂಬಿದ್ದಾರೆ. ‘ಗದರ್​ 2’ ಸಿನಿಮಾದಲ್ಲಿ ಸನ್ನಿ ಡಿಯೋಲ್​ಗೆ ಜೋಡಿಯಾಗಿ ಅಮೀಷಾ ನಟಿಸಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಆಗಿದೆ. ಈ ಗೆಲುವಿನಿಂದ ಅವರ ಮುಖದಲ್ಲಿ ನಗು ಮೂಡಿದೆ. ಅವರಿಗೆ ಇದ್ದ ಜನಪ್ರಿಯತೆ ಹೆಚ್ಚಾಗಿದೆ. ಅಮೀಷಾ ಪಟೇಲ್​ ನಟಿಸಲಿರುವ ಮುಂಬರುವ ಸಿನಿಮಾಗಳ ಬಗ್ಗೆ ಕೌತುಕ ಹೆಚ್ಚಾಗಿದೆ.

Tags: ameesha patelamisha patelgadar cinemagadar-2indian film industry
Previous Post

ಜಲಸೂರು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಚಿವ ಚಲುವರಾಯಸ್ವಾಮಿ ಸೂಚನೆ

Next Post

ನೇತಾಜಿ ಸುಭಾಷ್​​​ ಚಂದ್ರ ಬೋಸ್​​ ಮೊಮ್ಮಗ ಚಂದ್ರಬೋಸ್ ಬಿಜೆಪಿಗೆ ರಾಜೀನಾಮೆ..!

Related Posts

Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
0

ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕರೆ “ನಮ್ಮ ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು...

Read moreDetails

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

July 30, 2025

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

July 30, 2025

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

July 30, 2025
Next Post
ನೇತಾಜಿ ಸುಭಾಷ್​​​ ಚಂದ್ರ ಬೋಸ್​​ ಮೊಮ್ಮಗ ಚಂದ್ರಬೋಸ್ ಬಿಜೆಪಿಗೆ ರಾಜೀನಾಮೆ..!

ನೇತಾಜಿ ಸುಭಾಷ್​​​ ಚಂದ್ರ ಬೋಸ್​​ ಮೊಮ್ಮಗ ಚಂದ್ರಬೋಸ್ ಬಿಜೆಪಿಗೆ ರಾಜೀನಾಮೆ..!

Please login to join discussion

Recent News

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

July 31, 2025

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada